newsics.com
ಶುಭೋದಯ
ನಿತ್ಯ ಪಂಚಾಂಗ
18-08- 2024, ಭಾನುವಾರ
ದಿನ ವಿಶೇಷ:
* ಸಮುದ್ರಪೂಜೆ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಆಯನ – ದಕ್ಷಿಣಾಯಣ
ದಿನಾ೦ಕ – 18/08/2024
ತಿಂಗಳು – ಆಗಸ್ಟ್
ಬಣ್ಣ – ಕೆಂಪು
ವಾರ – ಭಾನುವಾರ
ತಿಥಿ – ಚತುರ್ದಶಿ 27:04:14*
ಪಕ್ಷ – ಶುಕ್ಲ
ನಕ್ಷತ್ರ – ಉತ್ತರಾಷಾಢ 10:13:54
ಯೋಗ – ಆಯುಷ್ಮಾನ್ 07:49:32
ಯೋಗ – ಸೌಭಾಗ್ಯ 28:26:58*
ಕರಣ – ಗರಜ 16:30:59
ಕರಣ – ವಾಣಿಜ 27:04:14*
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ಮಕರ
ಸೂರ್ಯ ರಾಶಿ ಸಿಂಹ
ಋತು – ವರ್ಷ
ಸೂರ್ಯೋದಯ 06:08:51
ಸೂರ್ಯಾಸ್ತ 18:37:43
ಹಗಲಿನ ಅವಧಿ 12:28:52
ರಾತ್ರಿಯ ಅವಧಿ 11:31:13
ಚಂದ್ರೋದಯ 17:41:27
ಚಂದ್ರಾಸ್ತ 29:27:34*
ರಾಹು ಕಾಲ 17:04 – 18:38 ಅಶುಭ
ಯಮಗಂಡ ಕಾಲ 12:23 – 13:57 ಅಶುಭ
ಗುಳಿಕ ಕಾಲ 15:31 – 17:04
ಅಭಿಜಿತ್ 11:58 – 12:48 ಶುಭ
ದುರ್ಮುಹೂರ್ತ 16:58 – 17:48 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಸಂತೋಷವು ಗಣಿತದ ಮೂಲ ತತ್ವಕ್ಕೆ ವಿರುದ್ಧವಾದದ್ದು. ಅದನ್ನು ಹಂಚಿದಷ್ಟೂ ಹೆಚ್ಚುತ್ತಾ ಹೋಗುತ್ತದೆ.
-ಪೌಲ್ ಕೊಯಿಲೋ, ಬ್ರೆಜಿಲ್ ಲೇಖಕ
***
ಈ ದಿನದ ಸುಭಾಷಿತ
ಸ್ಮೃತಿರ್ವ್ಯತೀತವಿಷಯಾ
ಮತಿರಾಗಾಮಿಗೋಚರಾ |
ಬುದ್ಧಿಸ್ತಾತ್ಕಾಲಿಕೀ ಜ್ಞೇಯಾ
ಪ್ರಜ್ಞಾ ತ್ರೈಕಾಲಿಕೀ ಮತಾ ॥
ಹಿಂದೆ ಆದದ್ದನ್ನು ನೆನೆಯುವುದು ‘ಸ್ಮೃತಿ’;
ಈಗ ನಡೆಯುವುದನ್ನು ಪರಿಶೀಲಿಸುವುದು ‘ಬುದ್ಧಿ’; ಮುಂದೆ ಆಗುವುದನ್ನು ಊಹಿಸುವುದು ‘ಮತಿ’; ಈ ಮೂರು ಕಾಲದಲ್ಲಿಯೂ ಎಚ್ಚರವಾಗಿರುವುದೇ ‘ಪ್ರಜ್ಞೆ’.
***
ಇಂದಿನ ನೆನಪು
* ವಿಜಯಲಕ್ಶ್ಮೀ ಪಂಡಿತ್ – 18 ಆಗಸ್ಟ್ 1900 ರಂದು ಜನಿಸಿದರು. ಒಬ್ಬ ರಾಜತಾಂತ್ರಿಕ ಮತ್ತು ರಾಜಕಾರಣಿ, ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರಮುಖ ರಾಜಕೀಯ ಕುಟುಂಬದಿಂದ ಬಂದ ಅವರ ಸಹೋದರ ಜವಾಹರಲಾಲ್ ನೆಹರು ಸ್ವತಂತ್ರ ಭಾರತದ ಮೊದಲ ಪ್ರಧಾನಿ, ಅವರ ಸೋದರ ಸೊಸೆ ಇಂದಿರಾ ಗಾಂಧಿ ಭಾರತದ ಮೊದಲ ಮಹಿಳಾ ಪ್ರಧಾನಿ ಮತ್ತು ಅವರ ಅಳಿಯ ಸೋದರಳಿಯ ರಾಜೀವ್ ಗಾಂಧಿ ಭಾರತದ ಆರನೇ ಪ್ರಧಾನ ಮಂತ್ರಿ. ಸೋವಿಯತ್ ಒಕ್ಕೂಟ, ಯುಎಸ್ಎ ಮತ್ತು ವಿಶ್ವಸಂಸ್ಥೆಗೆ ನೆಹರೂ ಅವರ ರಾಯಭಾರಿಯಾಗಿ ಸೇವೆ ಸಲ್ಲಿಸಿದ ನಂತರ ಪಂಡಿತ್ ಅವರನ್ನು ಭಾರತದ ಪ್ರಮುಖ ರಾಜತಾಂತ್ರಿಕರಾಗಿ ಲಂಡನಿ ಗೆ ಕಳುಹಿಸಲಾಯಿತು. ಲಂಡನ್ನಲ್ಲಿನ ಅವರ ಸಮಯವು ಇಂಡೋ-ಬ್ರಿಟಿಷ್ ಸಂಬಂಧಗಳಲ್ಲಿನ ಬದಲಾವಣೆಗಳ ವ್ಯಾಪಕ ಸಂದರ್ಭದ ಒಳನೋಟಗಳನ್ನು ನೀಡುತ್ತದೆ. ಅವರ ಹೈ-ಕಮಿಷನರ್ಶಿಪ್ ಅಂತರ್-ಸರ್ಕಾರಿ ಸಂಬಂಧಗಳ ಸೂಕ್ಷ್ಮರೂಪವಾಗಿತ್ತು.
* ಸುಭಾಷ್ ಚಂದ್ರ ಬೋಸ್ – ಆಗಸ್ಟ್ 18, 1945 ರಂದು ನಿಧನರಾದರು. ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು. ಅವರು ಭಾರತದ ಮಹಾನ್ ವ್ಯಕ್ತಿಯಾಗಿದ್ದರು. ಅವರು ಭಾರತೀಯ ಸ್ವಾತಂತ್ರ್ಯದ ಕಾರಣಕ್ಕಾಗಿಯೇ ಹೋರಾಡಿದ್ದರು. ಗಾಂಧಿಯವರು ಸ್ವಾತಂತ್ರ್ಯ ಪಡೆಯುವ ಬಗೆಗೆ ಒಂದೇ ಮಾರ್ಗದಲ್ಲಿದ್ದರು. ಆದರೆ ಬೋಸ್ ಸ್ವಾತಂತ್ರ್ಯಕ್ಕೆ ಸಶಸ್ತ್ರ ಹೋರಾಟವನ್ನೂ ಒಪ್ಪಿದ್ದರು. ಅವರ ಹೋರಾಟವು ವಿಫಲವಾದರೂ, ಭಾರತ ಸ್ವಾತಂತ್ರ ಪಡೆಯುವಲ್ಲಿ ಜನರನ್ನು ಉತ್ತೇಜಿಸಿ ತನ್ನದೇ ಆದ ಕೊಡುಗೆ ನೀಡಿದೆ ಎಂದು ಭಾವಿಸಲಾಗಿದೆ.
* ಶೇಷನಾರಾಯಣ – ಪ್ರಸಿದ್ಧ ಕತೆಗಾರ, ಬರಹಗಾರರಾದ ಶೇಷನಾರಾಯಣರು 18 ಆಗಸ್ಟ್ 1927 ರಂದು ಕೊಯಮತ್ತೂರು ಜಿಲ್ಲೆಯ ತಾಳವಾಡಿ ಫಿರ್ಕಾಗೆ ಸೇರಿದ ಪಾಳ್ಯದಲ್ಲಿ ಜನಿಸಿದರು. ತಮಿಳಿನಿಂದ ಕನ್ನಡ-ಕನ್ನಡದಿಂದ ತಮಿಳಿಗೆ ಅನುವಾದ. ಒಟ್ಟು 40 ಕೃತಿ ಪ್ರಕಟಿತ. ಎರಡು ರಾಜ್ಯಗಳ ನೀರಿನ ಸಮಸ್ಯೆಯ ಮೇಲೆ ಬರೆದ ಸಂಶೋಧನಾತ್ಮಕ ಕೃತಿ ‘ಕಾವೇರಿ ಒಂದು ಚಿಮ್ಮು, ಒಂದು ಹೊರಳು’, ‘ನಮ್ಮ ನದಿಗಳು ಮತ್ತು ಸಮಸ್ಯೆಗಳು.’ ಸಂದ ಪ್ರಶಸ್ತಿಗಳು – ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯಿಂದ ಬಹುಮಾನ, ಕನ್ನಡ ಪ್ರಕಾಶಕರ ಮತ್ತು ಬರಹಗಾರರ ಸಂಸ್ಥೆಯಿಂದ ಸನ್ಮಾನ, ರೈತ ಸಂಘದಿಂದ ಸನ್ಮಾನ, ತಮಿಳುನಾಡು ಸರಕಾರದಿಂದ ಕುರಳ್ಪೀಠ ಪ್ರಶಸ್ತಿ, ಇತ್ತೀಚಿನ ಪ್ರತಿಷ್ಠಿತ ಅನಕೃ ಪ್ರತಿಷ್ಠಾನ ಪ್ರಶಸ್ತಿ ಮುಂತಾದುವು. ಸರಳತೆಯಲ್ಲೇ ಸಾಧನೆ ಮೆರೆದ ಸಾಹಿತಿ ಶೇಷನಾರಾಯಣ ಅವರು 2019ರ ಆಗಸ್ಟ್ 7ರಂದು ಬೆಂಗಳೂರಿನ ಎಂ.ಎಸ್.ಪಾಳ್ಯದ ನಿವಾಸದಲ್ಲಿ ನಿಧನರಾದರು.