https://youtube.com/shorts/qIu1k1AjcVg?si=asT_CsSQI4v14g8C
newsics.com
ಶೀತ, ನೆಗಡಿ ಅಥವಾ ಜ್ವರ ಶುರುವಾದ ಸಂದರ್ಭಗಳಲ್ಲಿ ಮನೆಯಲ್ಲಿದ್ದ ಹಿರಿಯರು ಕೆಲವೊಂದು ಗಿಡಮೂಲಿಕೆಗಳನ್ನು ಬಳಸಿಕೊಂಡು ಕಷಾಯ ಮಾಡಿಕೊಡುತ್ತಿದ್ದರು, ಹಿರಿಯರು ನೀಡುತ್ತಿದ್ದ, ಕೆಲವೊಂದು ಮನೆಮದ್ದುಗಳನ್ನು ಸೇವಿಸಿ ಆರೋಗ್ಯಕರವಾಗಿ ಇರುತ್ತಿದ್ದೆವು. ಆದರೆ ನಿಮಗೆ ಗೊತ್ತಿರಲಿ ಕೆಮ್ಮು ನಿರಂತರವಾಗಿದ್ದರೆ, ನಿರ್ಲಕ್ಷ್ಯ ಮಾಡಲು ಹೋಗಬಾರದು. ದೀರ್ಘಕಾಲ ಮುಂದುವರಿಯುವ ಕೆಮ್ಮು ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಉಸಿರಾಟದ ತಜ್ಞರ ಪ್ರಕಾರ, ಕೆಮ್ಮು ಒಂದು ರಕ್ಷಣಾತ್ಮಕ ಪ್ರತಿಕ್ರಿಯೆಯಾಗಿದ್ದು, ವಾಯುಮಾರ್ಗದಲ್ಲಿರುವ ಲೋಳೆ, ಧೂಳು ಅಥವಾ ಸೋಂಕುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಇದು ಸಾಮಾನ್ಯವಾಗಿ ರಕ್ಷಣಾತ್ಮಕ ಪ್ರತಿಫಲಿತವಾಗಿದ್ದು, ಇದು ವಾಯುಮಾರ್ಗಗಳಿಂದ ಲೋಳೆ, ಉದ್ರೇಕಕಾರಿಗಳು ಅಥವಾ ಸಾಂಕ್ರಾಮಿಕ ಕಫವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ,’ ಅಂತ ಶಾಲಿಮಾರ್ ಬಾಗ್ನ ಫೋರ್ಟಿಸ್ ಆಸ್ಪತ್ರೆಯ ಉಸಿರಾಟದ ಔಷಧ ಮತ್ತು ಉಸಿರಾಟದ ಕ್ರಿಟಿಕಲ್ ಕೇರ್ನ ಹಿರಿಯ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ವಿಕಾಸ್ ಮೌರ್ಯ ಹೇಳಿದ್ದಾರೆ.
ಸಾಮಾನ್ಯವಾಗಿ ಶೀತ, ಜ್ವರ, ಅಲರ್ಜಿ, ಬ್ರಾಂಕೈಟಿಸ್, ನ್ಯುಮೋನಿಯಾ, ಆಸ್ತಮಾ, ಧೂಮಪಾನ ಅಥವಾ ಗ್ಯಾಸ್ಟ್ರೋ-ಓಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ ಸೇರಿದಂತೆ ಹಲವು ಕಾರಣಗಳಿಂದ ಕೆಮ್ಮು ಉಂಟಾಗಬಹುದು.
ಬಹುತೇಕ ಜನರು ಕೆಮ್ಮನ್ನು ತಾತ್ಕಾಲಿಕ ಸಮಸ್ಯೆ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ಆದರೆ ಎರಡು ರಿಂದ ಮೂರು ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿಯುವ ಕೆಮ್ಮನ್ನು ಲಘುವಾಗಿ ಪರಿಗಣಿಸಬಾರದು. ಇದು ಗಂಭೀರ ಕಾಯಿಲೆಗಳ ಪ್ರಾರಂಭಿಕ ಲಕ್ಷಣವಾಗಿರಬಹುದು ಎಂದು ವೈದ್ಯರು ಸೂಚಿಸಿದ್ದಾರೆ.
ವಿಶೇಷವಾಗಿ ಕೆಮ್ಮಿನೊಂದಿಗೆ ರಕ್ತ ಬರುವುದು, ತೂಕ ಇಳಿಕೆ, ನಿರಂತರ ಜ್ವರ, ಉಸಿರಾಟದ ತೊಂದರೆ, ಎದೆನೋವು ಅಥವಾ ಕೆಮ್ಮಿನ ಸ್ವಭಾವದಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ತಜ್ಞರು ಹೇಳಿದ್ದಾರೆ.
ಪ್ರಾರಂಭದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೆಲವು ಕೆಮ್ಮುಗಳು ನಿಧಾನವಾಗಿ ಗಂಭೀರ ಸ್ಥಿತಿಗೆ ತಲುಪುವ ಸಾಧ್ಯತೆ ಇರುವುದರಿಂದ, ಯಾವುದೇ ಕೆಮ್ಮನ್ನೂ ನಿರ್ಲಕ್ಷಿಸದೆ ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಗತ್ಯವೆಂದು ವೈದ್ಯರು ಸಲಹೆ ನೀಡಿದ್ದಾರೆ.
https://www.newsics.com/2026/03/29/pakistans-mediation-led-to-a-big-gift-from-iran/