https://youtube.com/shorts/JFDfzeRUAUw?si=UPiQjhCFAIkLXEhb
newsics.com
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಕಳೆದ ಕೆಲವು ದಿನಗಳಿಂದ ಚಿನ್ನದ ಪೂರೈಕೆ ಸ್ಥಗಿತಗೊಂಡಿತ್ತು. ಇದೀಗ ಅಂತಾರಾಷ್ಟ್ರೀಯ ಸಂಘರ್ಷಗಳಿಂದ ಕಂಗೆಟ್ಟಿದ್ದ ಭಾರತದ ಚಿನ್ನದ ಮಾರುಕಟ್ಟೆಗೆ, ದುಬೈನಿಂದ ವಿಮಾನಗಳ ಸಂಚಾರ ಮರುಪ್ರಾರಂಭ ಆಗಿರುವುದು ಸದ್ಯದ ಮಟ್ಟಿಗೆ ಆಶಾಭಾವನೆಯನ್ನು ಮೂಡಿಸಿದೆ.
ಈ ಬೆಳವಣಿಗೆಯಿಂದಾಗಿ ಭಾರತೀಯ ಚಿನ್ನದ ಮಾರುಕಟ್ಟೆಗೆ ತುಸು ಮಟ್ಟಿನ ನಿರಾಳತೆ ದೊರೆತಿದೆ. ಆದರೆ, ಗ್ರಾಹಕರು ತೆಗೆದುಕೊಂಡ ನಿಲುವಿನಿಂದ ವ್ಯಾಪಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ದುಬೈನಿಂದ ವಿಮಾನಯಾನ ಸೇವೆಗಳು ಪುನರಾರಂಭಗೊಂಡಿದ್ದರೂ, ಚಿನ್ನದ ಮಾರುಕಟ್ಟೆಯ ಸ್ಥಿತಿ ಇನ್ನೂ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿಲ್ಲ. ಪ್ರಸ್ತುತ ಚಿನ್ನದ ಪೂರೈಕೆಯು ನಿರೀಕ್ಷಿತ ಪ್ರಮಾಣದಲ್ಲಿ ವೇಗವಾಗಿಲ್ಲ. ವಿತರಣೆ ನಿಧಾನವಾಗಿದ್ದು, ಸಾಗಣೆ ವೆಚ್ಚ ಹೆಚ್ಚಾಗಿರುವುದರಿಂದ ಆರ್ಥಿಕ ಹೊರೆಯಾಗಿದೆ, ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ದುಬೈ ವಿಶ್ವದ ಅತಿದೊಡ್ಡ ಚಿನ್ನದ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿದೆ. ಭಾರತ ತನ್ನ ಬಳಕೆಯ ಬಹುಪಾಲು ಚಿನ್ನವನ್ನು ಆಮದು ಮಾಡಿಕೊಳ್ಳುವುದರಿಂದ, ದುಬೈ ಭಾರತಕ್ಕೆ ಚಿನ್ನದ ಪೂರೈಕೆಯ ಅತ್ಯಂತ ಪ್ರಮುಖ ಮಾರ್ಗವಾಗಿದೆ. ಭಾರತದ ಚಿನ್ನದ ಬೇಡಿಕೆಯನ್ನು ಪೂರೈಸುವಲ್ಲಿ ದುಬೈ ವಹಿಸುವ ಪಾತ್ರ ಅತಿ ದೊಡ್ಡದು. ಅಲ್ಲಿನ ಸರಕು ಸಾಗಣೆ ಮಾರ್ಗಗಳಲ್ಲಿ ಯಾವುದೇ ಸಣ್ಣ ಅಡಚಣೆಯಾದರೂ ನೇರವಾಗಿ ಭಾರತದ ಚಿನ್ನದ ಮಾರುಕಟ್ಟೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
https://www.newsics.com/2026/03/15/why-did-trisha-walk-away-silently-when-vijays-name-was-called/