https://youtube.com/shorts/JFDfzeRUAUw?si=UPiQjhCFAIkLXEhb
newsics.com
ಕಾಸರಗೋಡು : ಏಕೈಕ ಮಗನ ಅಗಲಿಕೆಯನ್ನು ಸಹಿಸಲಾರದೆ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಚೆಮ್ನಾಡ್ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಹೆಸರಾಂತ ಉದ್ಯಮಿ ಪರಂಬದ ವೇಣುಗೋಪಾಲನ್ ನಾಯರ್ (50) ಮತ್ತು ಅವರ ಪತ್ನಿ ಸ್ಮಿತಾ (42) ಎಂದು ಗುರುತಿಸಲಾಗಿದೆ.
ಕಳೆದ ಡಿಸೆಂಬರ್ 29ರಂದು ಬೇಕಲ್ ಬೀಚ್ ಉತ್ಸವದ ಸಂದರ್ಭದಲ್ಲಿ ನಡೆದ ರೈಲು ಅಪಘಾತದಲ್ಲಿ ಇವರ ಏಕೈಕ ಪುತ್ರ, ಮಂಗಳೂರಿನ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ ಎಂ. ಶಿವಾನಂದನ್ (19) ಮೃತಪಟ್ಟಿದ್ದರು. ರ್ಯಾಪರ್ ವೇದನ್ ಅವರ ಸಂಗೀತ ಕಚೇರಿಗೆ ಹೋಗುವ ಸಲುವಾಗಿ ರೈಲ್ವೆ ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಶಿವಾನಂದನ್ ಅವರಿಗೆ ಡಿಕ್ಕಿ ಹೊಡೆದಿತ್ತು.
ತಾಯಿ ಸ್ಮಿತಾ ಅವರು ತಮ್ಮ ವಾಟ್ಸಾಪ್ ಸ್ಟೇಟಸ್ನಲ್ಲಿ ಮಗನ ಬಾಲ್ಯದಿಂದ ಹಿಡಿದು ಬೆಳೆದ ವರ್ಷಗಳವರೆಗಿನ ಫೋಟೋಗಳ ವೀಡಿಯೊ ಮಾಡಿ ಹಾಕಿದ್ದರು.
ವೇಣುಗೋಪಾಲನ್ ಅವರು ಯಶಸ್ವಿ ಉದ್ಯಮಿಯಾಗಿದ್ದರೂ, ಮಗನ ಸಾವಿನ ನಂತರ ದಂಪತಿಗಳು ಸಾಮಾಜಿಕ ಜೀವನದಿಂದ ದೂರ ಉಳಿದಿದ್ದರು. . ಪ್ತಿದಿನ ರಾತ್ರಿ ಒಬ್ಬ ಸಂಬಂಧಿಕರು ಅವರ ಮನೆಯಲ್ಲಿ ಉಳಿಯುತ್ತಿದ್ದರು. ಆದರೆ, ಗುರುವಾರ ರಾತ್ರಿ ದಂಪತಿಗಳು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.