ಯುದ್ಧದ ಆತಂಕದಿಂದ ದುಬೈನಲ್ಲಿ ಸಿಲುಕಿದ್ದ ತಮಿಳು ಸಿನಿಮಾದ ಪ್ರಮುಖ ನಟ ಅಜಿತ್ ಕುಮಾರ್ ಸುರಕ್ಷಿತವಾಗಿ ಚೆನ್ನೈಗೆ ಮರಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಏಕಾಏಕಿ ಉಂಟಾದ ಯುದ್ಧದ ಆತಂಕ ಮತ್ತು ವಾಯು ದಾಳಿಗಳ ಕಾರಣದಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರಕ್ಕೆ ತೊಂದರೆ ಉಂಟಾಗಿದೆ.ದುಬೈನಲ್ಲಿ ಇದ್ದ ಅಜಿತ್ ಕುಮಾರ್ ಅವರ ಸುರಕ್ಷತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸುದ್ದಿ ಬಂದಿವೆ. ಯುದ್ಧದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರು ಸುರಕ್ಷಿತ ಸ್ಥಳದಲ್ಲಿ ಇದ್ದರು. ಕಾರ್ ರೇಸ್ನಲ್ಲಿ ಭಾಗವಹಿಸಲು ಅಜಿತ್ ದುಬೈಗೆ ಹೋಗಿದ್ದರು ಮತ್ತು ಮಾರ್ಚ್ 1ರಂದು ದುಬೈಯಿಂದ ಚೆನ್ನೈಗೆ ಮರಳಬೇಕಿತ್ತು. ಆದರೆ, ಇರಾನ್ ಅಧ್ಯಕ್ಷರ ಮೇಲೆ ದಾಳಿ ಮತ್ತು ಅದರ ನಂತರ ದುಬೈ ಸೇರಿದಂತೆ ಸುತ್ತಲಿನ ದೇಶಗಳಲ್ಲಿ ವಾಯು ಪ್ರದೇಶದಲ್ಲಿ ಆತಂಕ ಉಂಟಾದ ಕಾರಣ, ಅವರ ವಿಮಾನ ಪ್ರಯಾಣ ರದ್ದು ಮಾಡಲಾಗಿತ್ತು. ಈ ಕಾರಣದಿಂದ ಅಜಿತ್ ಕಳೆದ ಕೆಲವು ದಿನಗಳು ದುಬೈನಲ್ಲಿ ಉಳಿದು, ಈಗ ಚೆನ್ನೈಗೆ ಮರಳಿದ್ದಾರೆ. ಕಾರ್ ರೇಸಿಂಗ್ ಮುಗಿಸಿ ದುಬೈಯಿಂದ ಚೆನ್ನೈಗೆ ಬಂದ ನಟ ಅಜಿತ್ ಕುಮಾರ್ ಅವರ ವಿಡಿಯೋ ಈಗ ಬಿಡುಗಡೆಯಾಗಿದೆ.ಅವರ ವ್ಯವಸ್ಥಾಪಕ ಸುರೇಶ್ ಚಂದ್ರಾ ಅವರು ಅಜಿತ್ ಭಾನುವಾರ ಚೆನ್ನೈಗೆ ಸುರಕ್ಷಿತವಾಗಿ ಬಂದಿದ್ದಾರೆ ಎಂದು ತಿಳಿಸಿದ್ದಾರೆ. ಅಜಿತ್ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ವಿಡಿಯೋ ಈಗ ಹೊರಬಿದ್ದಿದೆ.ತಮಿಳು ಚಿತ್ರರಂಗದ ಅತಿದೊಡ್ಡ ತಾರೆಗಳಲ್ಲಿ ಒಬ್ಬರೆಂದು ಇಂದು ಕರೆಯಲ್ಪಡುವ ಅಜಿತ್ ಕುಮಾರ್ ತಮ್ಮನ್ನು ‘ಆಕಸ್ಮಿಕ ನಟ’ ಎಂದು ಕರೆದುಕೊಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ತುನಿವು ನಟ ತಮ್ಮ ಚಲನಚಿತ್ರ ಪ್ರಯಾಣವು ಪ್ಲಾನ್ಡ್ ಅಲ್ಲ.ಪ್ರಸ್ತುತ ರೇಸಿಂಗ್ ಮತ್ತು ಸಿನಿಮಾ ಎರಡರಲ್ಲೂ ಬ್ಯುಸಿಯಾಗಿರೋ ಅಜಿತ್ ಇತ್ತೀಚೆಗೆ ಉತ್ತಮ ಪ್ರತಿಕ್ರಿಯೆ ಪಡೆದ ಚಿತ್ರ ಗುಡ್ ಬ್ಯಾಡ್ ಅಗ್ಲಿಯಲ್ಲಿ ನಟಿಸಿದ್ದಾರೆ . ಅವರು ರೇಸಿಂಗ್ನಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಿದರು ಮತ್ತು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು.ಅಚ್ಚರಿ ಏನೆಂದರೆ, ಕೇವಲ 8 ತಿಂಗಳುಗಳಲ್ಲಿ ಬರೋಬ್ಬರಿ 42 ಕೆಜಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ 42 ಕೆಜಿ ಕಡಿಮೆ ಆಗುವುದು ಎಂದರೆ ತಮಾಷೆಯ ಮಾತಲ್ಲ. ಈ ಮೂಲಕ ಅಜಿತ್ ಕುಮಾರ್ ಅವರು ಅಭಿಮಾನಿಗಳಿಗೂ ಸ್ಫೂರ್ತಿ ತುಂಬಿದ್ದಾರೆ.