newsics.com
ಬೆಂಗಳೂರು : ಮಧ್ಯ ಪ್ರಾಚ್ಯದ ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧದ ಭೀತಿ ಎದುರಾಗಿದ್ದು, ಜಾಗತಿಕ ವಿಮಾನಯಾನ ಕ್ಷೇತ್ರದ ಮೇಲೆ ಇದು ಭಾರಿ ಪರಿಣಾಮ ಬೀರಿದೆ.
ಈ ಯುದ್ಧದ ಬಿಸಿ ಈಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ತಟ್ಟಿದ್ದು, ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು 17 ವಿಮಾನಗಳ ಹಾರಾಟ ರದ್ದಾಗಿವೆ.
ಬೆಂಗಳೂರಿಗೆ ಆಗಮಿಸಬೇಕಿದ್ದ 8 ಹಾಗೂ ನಿರ್ಗಮಿಸಬೇಕೆಂದು 9 ವಿಮಾನಗಳ ಹಾರಾಟ ರದ್ದಾಗಿದೆ. ಅಬುದಾಭಿ, ರಿಯಾದ್, ಜೆಡ್ಡಾ, ದುಬೈ, ದೋಹಾಗೆ ತೆರಳಬೇಕಿದ್ದ ಒಟ್ಟು 17 ವಿಮಾನಗಳು ರದ್ದಾಗಿವೆ.