https://youtube.com/shorts/fUqc-HD4bis?si=vVPN68ZIUzvq84PV
Subscribe ನ್ಯೂಸಿಕ್ಸ್ ಕನ್ನಡ
newsics.com
ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಪ್ರಕರಣ ದಿನಕ್ಕೊಂದು ಆಯಾಮ ಪಡೆಯುತ್ತಿದೆ. ಪೊಲೀಸ್ ತನಿಖೆ ವೇಳೆ ರೀಲ್ಸ್ ರಾಣಿ ಸುಚಿತ್ರಾ ಗೆ ಗುಲ್ಬಾರ್ಗದ ಜಮೀನ್ದಾರನ ಜೊತೆ ರಿಲೇಷನ್ಷಿಪ್ನಲ್ಲಿ ಇದ್ದಳು ಎಂದು ತಿಳಿದು ಬಂದಿದೆ.
ಜ್ಯೋತಿಷಿ ಕಮಲಾಕರ್ ಭಟ್ ಅವರ ಪರಿಚಯಕ್ಕಿಂತ ಮುಂಚೆ, ಕಲಬುರಗಿ ಜಿಲ್ಲೆಯ ಜಮೀನ್ದಾರ್ ಶರಣಬಸಪ್ಪ ಎನ್ನುವರ ಜೊತೆ ಸುಚಿತ್ರಾ ಲವ್ ರಿಲೇಷನಲ್ಲಿ ಇದ್ದು, ಶರಣಬಸಪ್ಪನ ಹಣದಿಂದ ಅಪ್ಪು ಮೆಲೋಡಿಸ್ ಗುಲಬರ್ಗಾ ಆರ್ಕೆಸ್ಟ್ರಾ ನಡೆಸುತ್ತಿದ್ದಳು. ಇನ್ನು ಸುಚಿತ್ರಾ, ಆಗಾಗ ಕಲಬುರಗಿಗೆ ತೆರಳಿ ಶರಣಬಸಪ್ಪನ ಜೊತೆ ಓಡಾಡಿದ್ದಾಳೆ. ಅಲ್ಲದೇ ಸುಚಿತ್ರಾ, ತನ್ನ ಪತಿ ಮಹೇಶ್ ಇಲ್ಲದ ಸಂದರ್ಭದಲ್ಲಿ ಶರಣಬಸಪ್ಪನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಈಗ ಇವರಿಬ್ಬರ ಖಾಸಗಿ ಕ್ಷಣದ ಫೋಟೋ ವೈರಲ್ ಆಗಿದೆ.
ಮದುವೆಯಾಗಿ ಮಕ್ಕಳಿದ್ದರೂ ಕೂಡ ಸುಚಿತ್ರಾ ನಿರಂತರವಾಗಿ ಗುಲ್ಬರ್ಗಕ್ಕೆ ತೆರಳಿ ಜಮೀನ್ದಾರ ಶರಣಬಸಪ್ಪ ಜೊತೆ ಕಾಲ ಕಳೆಯುತ್ತಿದ್ದಳು ಎನ್ನಲಾಗಿದೆ. ಗಂಡ ಮನೆಯಲ್ಲಿಲ್ಲದ ಸಂದರ್ಭಗಳಲ್ಲಿ ಆತನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು ಎಂಬ ಆರೋಪಗಳೂ ದಾಖಲಾಗಿವೆ. ಜೊತೆಗೆ, ಶರಣಬಸಪ್ಪ ನೀಡಿದ ಹಣವನ್ನು ಬಳಸಿಕೊಂಡು ಸಿದ್ದಾಪುರದಲ್ಲಿ ಬಡ್ಡಿಗೆ ಹಣ ನೀಡುತ್ತಿದ್ದಳು ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿದೆ.
ಅಪ್ಪು ಮೆಲೋಡಿಸ್ ಗುಲಬರ್ಗಾ ಆರ್ಕೆಸ್ಟ್ರಾ ನಡೆಸುತ್ತಿರುವುದಲ್ಲದೇ ಶರಣಬಸಪ್ಪ ನೀಡಿದ ಹಣವನ್ನು ಸಿದ್ದಾಪುರದಲ್ಲಿ ಬಡ್ಡಿಗೆ ಬಿಡುತ್ತಿದ್ದಳು. ಈ ವಿಚಾರ ಜ್ಯೋತಿಷಿ ಕಮಲಾಕರ್ ಭಟ್ಗೆ ತಿಳಿದು ಮನಸ್ತಾಪವಾಗಿತ್ತು. ಹೀಗಾಗಿ ಕೊನೆಗೆ ಸುಚಿತ್ರಾ, ಜಮೀನ್ದಾರ ಶರಣಬಸಪ್ಪನನ್ನು ಬಿಟ್ಟು ಕಮಲಾಕರ್ ಭಟ್ ಜೊತೆ ಸೇರಿಕೊಂಡಿದ್ದಳು. ಇನ್ನು ಸುಚಿತ್ರಾ ಹಣದ ದಾಹ ಅರಿತ ಕಮಲಾಕರ್ ಭಟ್, ಆಕೆಗೆ ಕಾರು , ಬೈಕ್ ಗಳನ್ನ ಉಡುಗರೆಯಾಗಿ ನೀಡಿದ್ದ. ಹೀಗೆ ಪತ್ನಿ ಸುಚಿತ್ರಾಳ ಲವ್ವಿಡವ್ವಿ ಆಟಗಳಿಂದ ಪತಿ ಮಹೇಶ್ ಬೇಸತ್ತು ಜಗಳವಾಡಿದ್ದ.ಕೊನೆಗೆ ಆರು ತಿಂಗಳಿಂದ ದೂರವಿದ್ದ. ಹೀಗೆ ಸುಚಿತ್ರಾಳ ನೌಟಂಕಿ ಆಟಗಳು ಒಂದೊಂದೇ ಬಯಲಿಗೆ ಬರುತ್ತಿವೆ.