Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮನೆಯ ದೇವರ ಕೋಣೆಯಲ್ಲಿ ಈ ವಿಗ್ರಹವಿಟ್ಟರೆ ದುರಾದೃಷ್ಟ ಬರುತ್ತೆ?
ಕರ್ನಾಟಕಪ್ರಮುಖ

ಮನೆಯ ದೇವರ ಕೋಣೆಯಲ್ಲಿ ಈ ವಿಗ್ರಹವಿಟ್ಟರೆ ದುರಾದೃಷ್ಟ ಬರುತ್ತೆ?

Share
2 Min Read
SHARE

https://youtube.com/shorts/kv9in5qxZnE?si=PN7byw9veLqq499c

Subscribe ನ್ಯೂಸಿಕ್ಸ್ ಕನ್ನಡ

newsics.com

ಮನೆಯ ದೇವರ ಕೋಣೆಯಲ್ಲಿ ಈ ದೇವರ, ದೇವತೆಗಳ ಫೋಟೋ ಅಥವಾ ವಿಗ್ರಹಗಳನ್ನಿಟ್ಟರೆ ದುರಾದೃಷ್ಟ ಮನೆ ಮಾಡುತ್ತೆ.
ಹಿಂದೂ ಧರ್ಮದ ಪ್ರತಿಯೊಂದು ಮನೆಯಲ್ಲೂ ದೇವರ ಕೋಣೆಯನ್ನು ನೋಡಬಹುದು. ಮನೆಯ ದೇವರ ಕೋಣೆಯಲ್ಲಿ ಎಲ್ಲಾ ದೇವರ ವಿಗ್ರಹ ಅಥವಾ ಫೋಟೋಗಳನ್ನು ಇಟ್ಟುಕೊಳ್ಳುವುದರಿಂದ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂದಲ್ಲ. ಕೆಲವೊಂದು ದೇವರ ಫೋಟೋ, ವಿಗ್ರಹಗಳು ದುರಾದೃಷ್ಟವನ್ನು, ಹಣದ ಸಮಸ್ಯೆಗಳನ್ನೂ ತರಬಹುದು. ಇದು ಮನೆಯಲ್ಲಿ ಅಶಾಂತಿಯನ್ನು ಮತ್ತು ನಕಾರಾತ್ಮಕತೆಯನ್ನು ಆಹ್ವಾನಿಸುತ್ತದೆ. ಭೈರವ ಮತ್ತು ನಟರಾಜನ ವಿಗ್ರಹ
ಭೈರವನನ್ನು ಶಿವನ ಉಗ್ರ ರೂಪವೆಂದು ಪರಿಗಣಿಸಲಾಗುತ್ತದೆ. ನಟರಾಜ ರೂಪವು ಶಿವನ ತಾಂಡವ ರೂಪವಾಗಿದೆ. ಹಾಗಾಗಿ, ಮನೆಯ ದೇವರ ಕೋಣೆಯಲ್ಲಾಗಿರಬಹುದು ಅಥವಾ ಮನೆಯ ಒಳಗೆ ಆಗಿರಬಹುದು ಭೈರವನ ಮತ್ತು ನಟರಾಜನ ವಿಗ್ರಹವನ್ನು, ಫೋಟೋವನ್ನು ಇಡಬಾರದು, ಅದನ್ನು ಪೂಜಿಸಲೂಬಾರದು. ಭೈರವ ತಂತ್ರದ ದೇವರು ಮತ್ತು ಅವನ ಪೂಜೆಯನ್ನು ಮನೆಯ ಹೊರಗೆ ಮಾಡುವುದು ಉತ್ತಮ ಎಂದು ಧರ್ಮಗ್ರಂಥಗಳು ಹೇಳುತ್ತವೆ. ಅದೇ ರೀತಿ, ನಟರಾಜನ ವಿಗ್ರಹವು ಶಿವನನ್ನು ‘ತಾಂಡವ’ ಭಂಗಿಯಲ್ಲಿ ಚಿತ್ರಿಸುತ್ತದೆ, ಇದನ್ನು ವಿನಾಶದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದನ್ನು ಮನೆಯೊಳಗೆ ಇಡುವುದರಿಂದ ಅಶಾಂತಿ ಹೆಚ್ಚಾಗುತ್ತದೆ.
ಶನಿ ದೇವನು ನ್ಯಾಯದ ದೇವನಾಗಿದ್ದಾನೆ. ಅವನು ನಮ್ಮ ಪಾಪ ಕರ್ಮಗಳಿಗೆ ತಕ್ಕಂತೆ ಶಿಕ್ಷೆಯನ್ನು ನೀಡುವವನು. ಶನಿಯ ನೋಟವನ್ನು ಉಗ್ರವೆಂದು, ಕ್ರೋಧಿತವೆಂದು ಪರಿಗಣಿಸಲಾಗುವುದರಿಂದ ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿ ದೇವನ ಫೋಟೋ ಅಥವಾ ವಿಗ್ರಹವನ್ನು ನಾವು ನಮ್ಮ ಮನೆಯಲ್ಲಾಗಲಿ, ದೇವರ ಕೋಣೆಯಲ್ಲಾಗಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ನೀವು ಶನಿ ದೇವನನ್ನು ಪೂಜಿಸಲು ಬಯಸಿದರೆ, ಅಂತಹ ಸಂದರ್ಭದಲ್ಲಿ ನೀವು ಶನಿ ದೇವನನ್ನು ಮನೆಯ ಹೊರಗೆ ಪ್ರತ್ಯೇಕವಾದ ದೇವರ ಕೋಣೆಯನ್ನು ನಿರ್ಮಿಸಿ ಪೂಜಿಸಬಹುದು. ಮನೆಯೊಳಗೆ ಅವನ ವಿಗ್ರಹವನ್ನು ಇಡುವುದು ಕುಟುಂಬ ಸದಸ್ಯರ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಕಾಳಿ ದೇವಿಯನ್ನು ಶಕ್ತಿಯ ರೂಪವೆಂದು ಪರಿಗಣಿಸಲಾಗುತ್ತದೆ. ಅವಳನ್ನು ಸಂಹಾರ ದೇವಿಯೆಂದು ಕರೆಯಲಾಗುತ್ತದೆ. ಹಾಗಾಗಿ, ಕಾಳಿ ದೇವಿಯ, ಕಾಳಿ ದೇವಿಯು ರಾಕ್ಷಸರನ್ನು ಸಂಹಾರ ಮಾಡುವ ಅಥವಾ ಆಕೆಯು ಉಗ್ರ ರೂಪದಲ್ಲಿರುವ ಫೋಟೋವನ್ನು, ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಕಾಳಿ ದೇವಿಯ ಅಂತಹ ಚಿತ್ರಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿ ಮತ್ತು ಕೋಪವನ್ನು ಉತ್ತೇಜಿಸಬಹುದು. ಮನೆಯಲ್ಲಿ ಲಕ್ಷ್ಮಿ ಅಥವಾ ದುರ್ಗಾ ದೇವಿಯ ಸೌಮ್ಯ ಮತ್ತು ಆಶೀರ್ವಾದ ರೂಪವನ್ನು ಪೂಜಿಸುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ.
ದೇವರ ಕೋಣೆಯಲ್ಲಿ ಇಡಲೇಬಾರದ ದೇವರ ಮುಖ್ಯ ವಿಗ್ರಹವೆಂದರೆ ಅದುವೇ ಮುರಿದ, ತುಂಡಾದ ಅಥವಾ ಹಾನಿಗೊಳಗಾದ ವಿಗ್ರಹ, ಫೋಟೋವಾಗಿದೆ. ನಿಮ್ಮ ಮನೆಯ ದೇವರ ಕೋಣೆಯಲ್ಲಿರುವ ದೇವರ ವಿಗ್ರಹ ಅಥವಾ ಫೋಟೋಗಳು ಮುರಿದು ಹೋದರೆ, ತುಂಡಾದರೆ, ಬಿರುಕು ಬಿಟ್ಟಿದರೆ ತಕ್ಷಣವೇ ಅದನ್ನು ದೇವರ ಕೋಣೆಯಿಂದ ತೆಗೆದು ಹೊರಗಿಡಿ. ಮುರಿದ ಅಥವಾ ಹಾನಿಗೊಳಗಾದ ವಿಗ್ರಹ, ಫೋಟೋಗಳನ್ನು ಮನೆಯಲ್ಲಿಟ್ಟುಕೊಂಡರೆ ದುರಾದೃಷ್ಟವು ಮನೆಯನ್ನು ಪ್ರವೇಶಿಸುವುದು. ಇದು ನಿಮ್ಮ ಮನೆಯ ಸಮೃದ್ಧಿ ಮತ್ತು ಅದೃಷ್ಟದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವುದು

ಮನೆಯ ದೇವರ ಕೋಣೆಯಲ್ಲಿ ಮಹಾಭಾರತ ಯುದ್ಧದ ಚಿತ್ರವನ್ನು ಇಟ್ಟುಕೊಳ್ಳಬೇಡಿ.
– ದೇವರ, ದೇವತೆಗಳ ವಿಗ್ರಹದ ಹಿಂಭಾಗ ಕಾಣಿಸದಂತೆ ಇಡಿ.
– ಒಂದೇ ದೇವರ ಎರಡು ಚಿತ್ರಗಳು ಅಥವಾ ವಿಗ್ರಹಗಳನ್ನು ಎಂದಿಗೂ ಪರಸ್ಪರ ಎದುರಾಗಿ ಇಡಬಾರದು.
– ಮನೆಯಲ್ಲಿರುವ ದೇವರ ಕೋಣೆಯು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿರಬೇಕು

ಬೆಂಗಳೂರಿನ ಈ ಕೆಫೆಯ ವಿಶಿಷ್ಟ ಸಂಪ್ರದಾಯಕ್ಕೆ ಫಿದಾ ಆದ ಗ್ರಾಹಕರು; ವೈರಲ್ ವಿಡಿಯೋ ನೋಡಿ

TAGGED:Will placing this idol in the god's room at home bring bad luck?
Share This Article
Facebook Twitter Copy Link Print
Previous Article ಬೆಂಗಳೂರಿನ ಈ ಕೆಫೆಯ ವಿಶಿಷ್ಟ ಸಂಪ್ರದಾಯಕ್ಕೆ ಫಿದಾ ಆದ ಗ್ರಾಹಕರು; ವೈರಲ್ ವಿಡಿಯೋ ನೋಡಿ
Next Article ಏರ್ಪೋರ್ಟ್ ನಲ್ಲಿ ವಜ್ರಾಭರಣಗಳ ಬ್ಯಾಗ್ ಕಳವು; ಫ್ಲೈಟ್‌ ಇಳಿಯುವಷ್ಟರಲ್ಲಿ ಎಲ್ಲೋಯ್ತು?

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?