https://youtube.com/shorts/yWrDals90_k?si=qTyTxtvMLgrsr7gN
Subscribe ನ್ಯೂಸಿಕ್ಸ್ ಕನ್ನಡ
newsics.com
ಅಂತರ್ ಜಾತಿ ವಿವಾಹವಾಗಿದ್ರು ಇದು ಅರೆಂಜ್ ಮ್ಯಾರೇಜ್. ಎರಡೂ ಕಡೆಯ ಪೋಷಕರು ಒಪ್ಪಿ ಸರಳವಾಗಿ ಮದುವೆ ಮಾಡಿಸಿದ್ರು. ಕಲಬುರಗಿ ಮೂಲದ ಅಂಬರೀಶ್ ಮತ್ತು ಬನಹಳ್ಳಿ ವಾಸಿ ನಂದಿನಿ ಮದುವೆ ಬಳಿಕ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನಹಳ್ಳಿಯಲ್ಲಿ ವಾಸವಾಗಿದ್ರು. ಆದ್ರೆ ಮದುವೆ ಆಗಿ ಒಂದೇ ವಾರಕ್ಕೆ ಪತಿ- ಪತ್ನಿ ನಡುವೆ ಗಲಾಟೆ ಶುರುವಾಗಿದೆ.
ಅಂಬರೀಶನಿಗೆ ವಿವಾಹಕ್ಕೂ ಮೊದಲೇ ಓರ್ವ ಯುವತಿ ಜೊತೆ ಅಫೇರ್ ಇರುವ ಆರೋಪ ಕೂಡ ಕೇಳಿ ಬಂದಿದೆ. ಮದುವೆ ನಂತರವೂ ಮತ್ತೊಬ್ಬ ಯುವತಿ ಜೊತೆ ಲವ್ವಿ-ಡವ್ವಿ ಮುಂದುವರಿಸಿದ್ದನಂತೆ. ಪ್ರೇಯಸಿಗಾಗಿಯೇ ಪತ್ನಿಗೆ ಕೊಡಬಾರದ ಕಷ್ಟ ಕೊಡ್ತಿದ್ದ ಎಂದು ಯುವತಿ ಪೋಷಕರು ಆರೋಪ ಮಾಡ್ತಿದ್ದಾರೆ.
ಮಗನ ಶೋಕಿಗೆ ತಾಯಿಯೇ ಸಹಕಾರ ನೀಡ್ತಿದ್ರು ಎಂದು ಯುವತಿ ಆರೋಪಿಸಿದ್ದಾರೆ. ಅಂಬರೀಶ್ ಜೊತೆಗಿನ ಎಂಗೇಜ್ಮೆಂಟ್ನಲ್ಲಿ ನಂದಿನಿ ಧರಿಸಿದ್ದ ಸೀರೆಯನ್ನೇ ಈತ ತನ್ನ ಗರ್ಲ್ಫ್ರೆಂಡ್ಗೆ ಗಿಫ್ಟ್ ಕೊಟ್ಟಿದ್ದು, ಯುವಕನ ತಾಯಿಯೇ ಸೀರೆಯನ್ನ ಐರನ್ ಮಾಡಿ ಮಗನ ಮೂಲಕ ಅವನ ಪ್ರೇಯಸಿಗೆ ಕಳುಹಿಸಿದ್ದರಂತೆ.
ಮದುವೆಗೆ ಮೊದಲು ಜಾತಿ ಬಗ್ಗೆ ಪತಿ ಮತ್ತು ಅತ್ತೆಗೆ ತಿಳಿದಿತ್ತು. ಮದುವೆ ಬಳಿಕ ನಿತ್ಯ ಪತಿ ಕುಡಿದು ಬಂದು ಹಲ್ಲೆ ಮಾಡ್ತಿದ್ದ. ಅಷ್ಟೇ ಲ್ಲದೇ ಪತಿಯ ಜೊತೆ ಅತ್ತೆಯು ಹಲ್ಲೆ ಮಾಡಿ ಕಿರುಕುಳ ನೀಡ್ತಿದ್ರು ಎಂದು ದೂರಿದ್ದಾರೆ. ಜಾತಿ ಬಗ್ಗೆ ಪದೇ ಪದೇ ನಿಂದಿಸಿ ಕಿರುಕುಳ ನೀಡ್ತಿದ್ರು ಎಂದು ನಂದಿನಿ ಗಂಭೀರ ಆರೋಪ ಮಾಡ್ತಿದ್ದಳು.
ಇದೇ ವಿಚಾರಕ್ಕೆ ಯುವತಿ ಕುಟುಂಬದಿಂದ ಯುವಕನ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಯುವತಿ ಕುಟುಂಬದವರ ಮೇಲೂ FIR ದಾಖಲಾಗಿದೆ.
ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಮುಂದುವರಿಕೆ: ಬೆಂಕಿ ಹಚ್ಚಿ ಮತ್ತೋರ್ವ ಯುವಕನ ಸಜೀವ ದಹನ!