Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸೊಳ್ಳೆ ಹಾವಳಿಯಿಂದ ಶಾಶ್ವತ ಪರಿಹಾರ ಪಡೆಯಲು ಆಲಂ ಕಲ್ಲು (ಪಟಿಕ) ಮತ್ತು ನಿಂಬೆರಸವನ್ನು ನೆಲ ಒರೆಸುವ ನೀರಿಗೆ ಸೇರಿಸಿ ಮನೆಯನ್ನು ಕ್ಲೀನ್ ಮಾಡಿ, ಇದರಿಂದ ಸೊಳ್ಳೆ, ಕೀಟಗಳು ಎಂದಿಗೂ ಮನೆಯನ್ನು ಪ್ರವೇಶಿಸುವುದಿಲ್ಲ.
ನಿಂಬೆ ರಸ ಮತ್ತು ಪಟಿಕ ಎರಡೂ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದ್ದು, ಇವು ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳು, ಸೊಳ್ಳೆಗಳು ಮತ್ತು ನೊಣಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನಿಂಬೆಯ ರಿಫ್ರೆಶ್ ಆಮ್ಲೀಯ ಗುಣಗಳು ಸೊಳ್ಳೆಗಳು ಮತ್ತು ನೋಣಗಳನ್ನು ಮನೆಯಿಂದ ದೂರವಿಡುವಲ್ಲಿ ಪರಿಣಾಮಕಾರಿಯಾಗಿದೆ. ಆದರೆ ಪಟಿಕದ ಕೀಟನಾಶಕ ಗುಣಗಳು ಅವುಗಳನ್ನು ಮನೆಯಿಂದ ಹೊರಗಿಡಲು ಸಹಾಯ ಮಾಡುತ್ತದೆ. ಈ ಎರಡೂ ವಸ್ತುಗಳನ್ನು ನೆಲ ಒರೆಸುವ ನೀರಿಗೆ ಸೇರಿಸಿ ಮನೆ ಕ್ಲೀನ್ ಮಾಡುವುದರಿಂದ ಸೊಳ್ಳೆ, ಕೀಟಗಳ ಕಾಟದಿಂದ ಮುಕ್ತಿ ಪಡೆಯಬಹುದು.
ಸೊಳ್ಳೆ ನಿವಾರಕ ದ್ರಾವಣವನ್ನು ತಯಾರಿಸುವುದು ಹೇಗೆ?
- ಒಂದು ಬಕೆಟ್ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ.
- ಅದಕ್ಕೆ 2 ನಿಂಬೆಹಣ್ಣಿನ ರಸವನ್ನು ಹಿಂಡಿ ಮತ್ತು ಅರ್ಧ ಟೀ ಚಮಚ ಪಟಿಕ ಪುಡಿಯನ್ನು ಸೇರಿಸಿ.
- ಈಗ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.
- ಈ ನೀರಿನಿಂದ ವಾರಕ್ಕೆ 2-3 ಬಾರಿ ಮನೆಯನ್ನು ಒರೆಸಿ.
- ಬಯಸಿದರೆ, ನೀವು ಈ ದ್ರಾವಣವನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮನೆಯ ಮೂಲೆಗಳಲ್ಲಿ, ಕಿಟಕಿಗಳು, ಬಾಗಿಲುಗಳ ಬಳಿ ಮತ್ತು ಸೊಳ್ಳೆ, ಕೀಟಗಳು ಹೆಚ್ಚು ಓಡಾಡುವ ಸ್ಥಳಗಳಲ್ಲಿ ಸಿಂಪಡಿಸಬಹುದು.
ಈ ಮನೆಮದ್ದು ಸೊಳ್ಳೆಗಳ ಕಾಟದಿಂದ ಮುಕ್ತಿ ನೀಡುವುದು ಮಾತ್ರವಲ್ಲ, ನೊಣಗಳು ಮತ್ತು ಸಣ್ಣ ಕೀಟಗಳನ್ನು ಸಹ ಕಡಿಮೆ ಮಾಡುತ್ತದೆ. ಮನೆಗೆ ತಾಜಾ ಮತ್ತು ಸ್ವಚ್ಛವಾದ ಸುವಾಸನೆಯನ್ನು ನೀಡುತ್ತದೆ. ಸೊಳ್ಳೆ ನಿವಾರಕ ಸ್ಪ್ರೇಗಳನ್ನು ಪದೇ ಪದೇ ಬಳಸಿ, ಯಾವುದೇ ರಿಸಲ್ಟ್ ಸಿಕ್ಕಿಲ್ಲ ಎಂದಾದ್ರೆ, ಸೊಳ್ಳೆಗಳನ್ನು ಓಡಿಸಲು ಒಮ್ಮೆ ಈ ಮನೆಮದ್ದನ್ನು ಟ್ರೈ ಮಾಡಿ.
‘ಪ್ರೆಗ್ನೆಂಟ್’ ಮಾಡೋಕೆ ಯುವಕರಿಗೆ 10 ಲಕ್ಷ ರೂ. ಆಫರ್; ಎಲ್ಲಿ ಗೊತ್ತಾ?