Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ನ ಏಳನೇ ವಾರದಲ್ಲಿ ಸುಧಿ ಅವರು ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಎಪಿಸೋಡ್ 50ನೇ ದಿನ ಸಮೀಪಿಸುತ್ತಿರುವ ಸಮಯಧಲ್ಲೇ ಸುಧಿ ಅವರು ಹೊರ ಹೋದರು.
ಸುಧಿ ಅವರು ವಿಲನ್ ಪಾತ್ರಗಳ ಮೂಲಕ ಸಾಕಷ್ಟು ಫೇಮಸ್ ಆದವರು. ವಿಲನ್ ಪಾತ್ರ ಮಾಡುವುದರಿಂದ ಅವರು ಖಡಕ್ ಆಗಿ ನಡೆದುಕೊಳ್ಳಬಹುದು ಎಂಬುದು ಅನೇಕರ ಊಹೆ ಆಗಿತ್ತು. ಆದರೆ, ಅವರು ಮಾಡುವ ಪಾತ್ರಕ್ಕೂ ವ್ಯಕ್ತಿತ್ವಕ್ಕೂ ಯಾವುದೇ ಸಂಬಂಧ ಇಲ್ಲ. ಅದು ಬಿಗ್ ಬಾಸ್ ಮನೆಯಲ್ಲಿ ಸಾಬೀತಾಗಿದೆ. ಅವರು ಮೃದುವಾಗಿ ನಡೆದುಕೊಂಡಿದ್ದೇ ಹೆಚ್ಚು.
ಸುಧಿ ಪತ್ನಿ ಸುದೀಪ್ ಅವರ ದೊಡ್ಡ ಅಭಿಮಾನಿಯಂತೆ. ಈ ಕಾರಣದಿಂದಲೇ ಸುದೀಪ್ ಅವರು ಸುಧಿ ಪತ್ನಿಯನ್ನು ವೇದಿಕೆ ಮೇಲೆ ಕರೆದರು. ಈ ವೇಳೆ ಸುದೀಪ್ ಅವರು, ‘ಎಲ್ಲಿ ತಪ್ಪಾಯಿತು ಎಂದು ನಿಮಗೆ ಅನಿಸುತ್ತದೆ’ ಎಂದು ಪ್ರಶ್ನೆ ಮಾಡಿದರು.
ಇನ್ನೂ ಎಫರ್ಟ್ ಹಾಕಿ ಆಡಬೇಕಿತ್ತು. ಅವರಲ್ಲಿ ಆ ಸಾಮರ್ಥ್ಯ ಇತ್ತು. ಅಶ್ವಿನಿ, ಜಾನ್ವಿ ಅವರ ಗುಂಪಿನಿಂದ ಹೊರ ಬಂದು ಆಡಬೇಕಿತ್ತು’ ಎಂದು ಸುದೀಪ್ ಎದುರು ನೇರವಾಗಿ ಹೇಳಿದರು ಸುಧಿ ಪತ್ನಿ. ಈ ಮೂಲಕ ಅವರಿಬ್ಬರ ಸಹವಾಸ ಕಡಿಮೆ ಮಾಡಿದ್ದರೆ ಪತಿ ಇನ್ನೂ ಕೆಲವು ದಿನ ಇರುತ್ತಿದ್ದರು ಎಂದು ಸುಧಿ ಪತ್ನಿ ಅಭಿಪ್ರಾಯ ಪಟ್ಟಿದ್ದಾರೆ.
https://www.newsics.com/2025/11/17/actress-keerthy-suresh-is-unicef-india-campaign-ambassador/