Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹೈದರಾಬಾದ್ ನಲ್ಲಿ ನೆಲೆಸಿರುವ ರಾಜಸ್ಥಾನದ ಯುವಕ ತನ್ನ ರಜಾದಿನಗಳಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ‘ಟ್ರಾಫಿಕ್ ಮ್ಯಾನ್’ ಆಗಿ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಲೋಕೇಂದ್ರ ಸಿಂಗ್ ಸ್ವಯಂ ಸೇವಕ ಟ್ರಾಫಿಕ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ಟ್ರಾಫಿಕ್ ಜಾಮ್ ಉಂಟಾಗುವ ನಗರದ ಪ್ರಮುಖ ರಸ್ತೆಗಳಲ್ಲಿ ಈತ ಹಾಜರಾಗಿ ಸಂಚಾರಿ ನಿಯಮಗಳ ಬಗ್ಗೆ ಜನರಿಗೆ ಪಾಠ ಹೇಳಿ ಕೊಡುತ್ತಿದ್ದಾರೆ.
2021 ರಲ್ಲಿ ಹೈದರಾಬಾದ್ ನಗರ ಭದ್ರತಾ ಮಂಡಳಿ (HCSC)ಗೆ ಸಂಚಾರ ಸ್ವಯಂಸೇವಕನಾಗಿ ಸೇರಿದೆ. ನನ್ನ ಜೊತೆಗೆ 15 ಸಮಾನ ಮನಸ್ಕರನ್ನು ಸೇರಿಸಿದೆ. ಸಂಚಾರ ಶಿಸ್ತಿನ ಬಗ್ಗೆ ಜನರಿಗೆ ತರಬೇತಿ ನೀಡುವ ಆಂದೋಲನವನ್ನು ಆರಂಭಿಸಿದೆ. ವಾರಾಂತ್ಯಗಳಲ್ಲಿ ನಗರದ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಸ್ಟಾಪ್ ಲೈನ್ಗಳು, ಲೇನ್ ಶಿಸ್ತು ಮತ್ತು ಹಾರ್ನ್ ಯಾವಾಗ ಮಾಡಬೇಕು ಎಂಬುದರ ಬಗ್ಗೆ ತಿಳಿವಳಿಕೆ ಮೂಡಿಸುತ್ತಿದ್ದೇನೆ ಎಂದು ಮಾಹಿತಿ ನೀಡಿದರು. ನಾವು ನಗರದಾದ್ಯಂತ ಜಾಗೃತಿ ಶಿಬಿರಗಳನ್ನು ನಡೆಸುತ್ತೇವೆ. ಹೆಲ್ಮೆಟ್ಗಳು ಏಕೆ ಮುಖ್ಯ ಎಂದು ಜನರಿಗೆ ತಿಳಿಸುತ್ತೇವೆ. ಟ್ರಾಫಿಕ್ನಲ್ಲಿ ಆಂಬ್ಯುಲೆನ್ಸ್ ಬಂದಾಗ ಹೇಗೆ ಸಹಕರಿಸಬೇಕು. ಅದಕ್ಕೆ ಹೇಗೆ ದಾರಿ ಮಾಡಿಕೊಡಬೇಕು ಎಂಬುದನ್ನ ತಿಳಿಸುತ್ತೇವೆ. ಕೆಲವರು ನಮ್ಮ ಮಾತನ್ನು ಆಲಿಸುತ್ತಾರೆ. ಇನ್ನು ಕೆಲವರು ನಕ್ಕು ಸುಮ್ಮನಾಗುತ್ತಾರೆ ಎಂದರು.
ತೆಲಂಗಾಣ ಪೊಲೀಸರು ನಮ್ಮ ಕೆಲಸ ಮೆಚ್ಚಿಕೊಂಡಿದ್ದಾರೆ. ಸಂಚಾರ ದಟ್ಟಣೆ ನಿರ್ವಹಣೆಗೆ ನಮ್ಮ ಗುಂಪಿನ ಸಲಹೆ ಕೇಳುತ್ತಾರೆ. ಅವರು ನಮಗೆ ಮೆಚ್ಚುಗೆಯ ಪ್ರಮಾಣಪತ್ರಗಳು ಮತ್ತು ಪ್ರಶಸ್ತಿಗಳನ್ನು ಸಹ ನೀಡಿದ್ದಾರೆ ಎಂದು ಜುಬಿಲಿ ಹಿಲ್ಸ್ ರಸ್ತೆಯ ಮೇಲೆ ನಿಂತು ಲೋಕೇಂದ್ರ ಅವರು ಹೇಳಿದರು.
ನಂದಿನಿ ತುಪ್ಪದ ಬೆಲೆ ಏರಿಕೆ ಯಾಕೆ?; ಮತ್ತೆ ಏರಿಕೆಯಾಗುತ್ತಾ ಹಾಲಿನ ಬೆಲೆ?