Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಮೈಸೂರು: ಬಾಲಿವುಡ್ ನಟಿ ಆಲಿಯಾ ಭಟ್ ಅವರು ವಿಘ್ನ ನಿವಾರಕ ಗಣೇಶನನ್ನು ತುಂಬಾನೇ ನಂಬುತ್ತಾರೆ, ಆರಾಧಿಸುತ್ತಾರೆ.ಮೈಸೂರಿನಲ್ಲಿ ನಿರ್ಮಾಣಗೊಂಡಿರುವ ಗಣಪನ ವಿಗ್ರಹವೊಂದು ಅವರ ಮನೆ ಬೆಳಗಲಿದೆ.
ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ ಕೆತ್ತನೆಯಾಗಿರುವಂತಹ ನಾಲ್ಕು ಅಡಿ ಗಣಪ, ಮೂರಡಿ ಪೀಠ ಉಳ್ಳ ವಿಗ್ರಹ ಹೊಯ್ಸಳ ಹಾಗು ಮೈಸೂರು ಶೈಲಿಯಲ್ಲಿ ಕೆತ್ತನೆ ಮಾಡಲಾಗಿದೆ. ಕಳೆದ ಆರು ತಿಂಗಳಿಂದ ನಿರಂತರ ಕೆತ್ತನೆ ಕಾರ್ಯ ನಡೆದಿದ್ದು ಆ.17 ರಂದು ಆಲಿಯಾ ಭಟ್ ಕುಟುಂಬಸ್ಥರಿಂದ ಪೂಜೆ ಕೂಡಾ ನಡೆಯಲಿದೆ.
ಕೆತ್ತನೆ ಗಣಪ ಇಂದೇ ಮುಂಬೈಗೆ ತೆರಳಲಿದ್ದು ಅಲ್ಲಿ ಆಲಿಯಾ ಭಟ್ ಅವರ ಮನೆಯಲ್ಲಿ ವಿರಾಜಿಸಲಿದ್ದಾನೆ. ಆಲಿಯಾ ಭಟ್ ಅವರು ಅರುಣ್ ಅವರ ಅಯೋಧ್ಯೆಯ ಶ್ರೀರಾಮಲಲ್ಲಾ ಮೂರ್ತಿ ಕೆತ್ತನೆ ಗಮನಿಸಿದ್ದರು. ಗಣಪ ಮೂರ್ತಿ ಮಾಡಿಕೊಡುವಂತೆ ಮನವಿ ಮಾಡಿದ್ದರು ಎಂದು ಅರುಣ್ ತಿಳಿಸಿದ್ದಾರೆ.
ಅರುಣ್ ಯೋಗಿ ಸದ್ಯ ವಿಶ್ವದೆಲ್ಲೆಡೆ ಚಿರಪರಿಚಿತ. ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾದ ಭಗವಾನ್ ರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ. ಕಳೆದ ವರ್ಷ ಜನವರಿ 22 ರಂದು ಅಯೋಧ್ಯೆ ರಾಮಮಂದಿರದಲ್ಲಿ ಬಹಳ ಅದ್ಧೂರಿಯಾಗಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗುತ್ತೆ.