Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಮದುವೆಯಾಗು ಅಂತ ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿಯೊಬ್ಬ ಯುವತಿ ಒಪ್ಪದಿದ್ದಕ್ಕೆ ಆಕೆಯನ್ನೇ ಕಿಡ್ನಾಪ್ ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಇನ್ಸ್ಟಾಗ್ರಾಂ ಮೂಲಕ ಮೆಕ್ಯಾನಿಕ್ ರಂಗ ಮತ್ತು ಯುವತಿಗೆ ಪರಿಚರವಾಗಿತ್ತು, ಬಳಿಕ ಪರಿಚಯ ಪ್ರೀತಿಗೆ ತಿರುಗಿ ಯುವತಿಗೆ ರಂಗ ಪ್ರಪೋಸ್ ಮಾಡಿದ್ದನು, ಕೆಲ ದಿನಗಳ ಬಳಿಕ ಮೆಕ್ಯಾನಿಕ್ ರಂಗನ ಲವ್ಗೆ ಯುವತಿ ಓಕೆ ಅಂದಿದ್ದಳು, ಟೂ ವೇ ಲವ್ನಲ್ಲಿ ಡ್ಯೂಯೆಟ್ ಹಾಡ್ತಿದ್ದ ಮೆಕ್ಯಾನಿಕ್ ರಂಗ ಫ್ರೆಂಡ್ಗಾಗಿ ಮಚ್ಚು ಬೀಸಿದ್ದ, ಸ್ನೇಹಿತ ಚೇತನ್ಗಾಗಿ ಭದ್ರನ ಕೊಲೆ ಮಾಡಿ ಜೈಲು ಸೇರಿದ್ದನು, ರಂಗ ಜೈಲು ಸೇರ್ತಿದ್ದಂತೆ ಯುವತಿ ರಂಗನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಳು.
ಜೈಲಿನಿಂದ ಬೇಲ್ ಮೇಲೆ ಹೊರ ಬಂದ ರಂಗ ಯುವತಿಯನ್ನ ಫಾಲೋ ಮಾಡಿ ಟಾರ್ಚರ್ ಕೊಡಲು ಶುರುಮಾಡಿದ್ದನು, ಅಲ್ಲದೇ ಯುವತಿ ಮನೆಗೂ ತೆರಳಿ ಲವ್ ಸ್ಟೋರಿ ಕೂಡ ಹೇಳಿದ್ದನು, ಯುವತಿ ಮನೆಯವರು ಮೆಕ್ಯಾನಿಕ್ ರಂಗನ ಪ್ರೀತಿಯನ್ನ ತಿರಸ್ಕರಿಸಿದ್ದರು, ಈ ವೇಳೆ ಯುವತಿ ಹಾಗೂ ಕುಟುಂಬಸ್ಥರಿಗೆ ಅವಾಜ್ ಹಾಕಿ ಬಂದಿದ್ದ ರಂಗ, ಬಳಿಕ ಬಿಟ್ರೆ ಆಗಲ್ಲ ಎಂದು ಯುವತಿಯನ್ನ ಕಿಡ್ನಾಪ್ ಮಾಡಿ ಮದುವೆ ಆಗೋಕೆ ಪ್ಲಾನ್ ಮಾಡಿದ್ದ, ಸಹಚರರಾದ ರಾಜೇಶ್ ಚಂದನ್ ಶ್ರೇಯಸ್ ಮಂಜನ ಜೊತೆ ಸೇರಿ ಕಿಡ್ನಾಪ್ಗೆ ಪ್ಲಾನ್ ಮಾಡಿ ಕಳೆದ ಅ.08 ರಂದು ತನ್ನ ಸಹಚರರ ಜೊತೆ ಲವರ್ ಮನೆಗೆ ನುಗ್ಗಿ ಬಾ ಮದುವೆ ಆಗೋಣ ಅಂತ ಹೇಳಿದ್ದಾನೆ. ಇದಕ್ಕೆ ಯುವತಿ ತಾಯಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ತಾಯಿಯ ಮೇಲೆ ರಂಗ ಹಲ್ಲೆ ಮಾಡಿದ್ದ, ಮಚ್ಚಿನೇಟಿಗೆ ಪ್ರಿಯತಮೆಯ ತಾಯಿ ಗಂಭೀರವಾಗಿ ಗಾಯಗೊಂಡಿದ್ರೂ, ಯುವತಿಯ ಕುತ್ತಿಗೆಗೆ ಚಾಕು ಇಟ್ಟು, ಕಿಡ್ನ್ಯಾಪ್ ಮಾಡಿ, ನಡುರಸ್ತೆಯಲ್ಲೆ ಲಾಂಗ್ ತೋರಿಸುತ್ತಾ ಆಟೋ, ಬೈಕ್ಗಳಲ್ಲಿ ಎಸ್ಕೇಪ್ ಆಗಿದ್ದರು.
ಘಟನೆ ನಡೆದ ಕೂಡಲೇ ಯುವತಿ ತಾಯಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ಅಕ್ಟೋಬರ್ 9ರ ಬೆಳಗ್ಗೆ 5 ಗಂಟೆಗೆ ಸುಮಾರಿಗೆ ಪೊಲೀಸರು ಹೊಸೂರು ರಸ್ತೆ ಬಳಿ ರಂಗ & ಟೀಂನ ಲಾಕ್ ಮಾಡಿ ಅರೆಸ್ಟ್ ಮಾಡಿದ್ದಾರೆ.