Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಬಿಗ್ಬಾಸ್ ಮನೆ ಅಂದ್ರೇನೇ ಜಗಳ, ವಿವಾದದ ಮನೆ ಎಂಬುದನ್ನ ಪ್ರತಿಸಲವೂ ಒಂದಷ್ಟು ಸ್ಪರ್ಧಿಗಳು ಹೆಚ್ಚೆಚ್ಚು ಪ್ರೂವ್ ಮಾಡಿದ್ದಾರೆ. ಈ ಬಾರಿ ನಟಿ, ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ಬಿಗ್ಬಾಸ್ ಮನೆಗೆ ಜಗಳಕ್ಕೆ ಸಿದ್ಧರಾಗಿಯೇ ಬಂದಂತೆ ಇದ್ದಾರೆ.
ಸೆ.30ರ ಎಪಿಸೋಡ್ನಲ್ಲಿ ಗಿಲ್ಲಿ ನಟ ಮತ್ತು ಕಾವ್ಯ ಶೈವ ಜೊತೆಗೆ ಜಗಳ, ಕಾದಾಟ ನಡೆಸಿದ್ದ ಅಶ್ವಿನಿ ಗೌಡ ಇದೀಗ ತಮ್ಮದೇ ಒಂಟಿ ಟೀಮ್ನ ಧನುಷ್ ಜೊತೆ ಜಗಳ ಆಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯು ಪ್ರೋಮೋವೊಂದನ್ನ ಬಿಟ್ಟಿದ್ದು, ಅದರಲ್ಲಿ ಧನುಷ್ ಮತ್ತು ಅಶ್ವಿನಿ ಗೌಡ ಜಗಳ ಆಗಿದ್ದನ್ನ ನೋಡಬಹುದು.
ʼನೀವು ಯಾರತ್ರನೋ ಮಾತಾಡ್ತಾ ಇರಬೇಕಿದ್ರೆ, ನಾನು ಯಾರನ್ನೂ ಕರೆಯೋದೇ ಇಲ್ಲ. ಏನೋ ರಾಜಮಾತೆ ಅಂತೆಲ್ಲ ತಗೋಂಡಿದ್ದೇವೆ..ʼ ಎಂದು ಧನುಷ್ ಹೇಳುತ್ತಿದ್ದಂತೆ ಅಶ್ವಿನಿ ರೆಬೆಲ್ ಆಗಿದ್ದಾರೆ. ʼಏನೋ ತಗೋಂಡಿದ್ದೇವೆ ಅಂದ್ರೆ ಏನರ್ಥ ಅದುʼ ಎಂದು ಅಶ್ವಿನಿ ಕೋಪದಿಂದಲೇ ಕೇಳಿದ್ದಾರೆ. ಆಗ ಧನುಷ್ ʼಇನ್ನೇನು ಹೇಳಬೇಕಿತ್ತು?ʼ ಎಂದು ಪ್ರಶ್ನಿಸಿದ್ದಾರೆ. ಆಗ ಅಶ್ವಿನಿ ಗೌಡ ಅವರು ʼಏನೋ ತಗೊಂಡಿದ್ದೀವಿ..ಏನೋ ತಗೊಂಡಿದ್ದೀವಿ..ಅಂತಿದ್ದೀರಲ್ಲ, ನಾನೂ ಏನೋ ಮಹಾರಾಜ ಅಂತ ತಗೊಂಡಿದ್ದೀವಿ ಎಂದು ಹೇಳಬಹುದಲ್ಲ?ʼ ಎಂದು ಅಶ್ವಿನಿ ಸಿಕ್ಕಾಪಟ್ಟೆ ಕೋಪದಿಂದ ಹೇಳಿದ್ದಾರೆ. ಆಗ ಧನುಷ್ ಅವರೂ ಎದ್ದುನಿಂತು..ಆಗಲಿ ಹಾಗೇ ಹೇಳಿ ಎಂದಿದ್ದಾರೆ. ʼಯಾವುದೊ ಒಂದು ಪದನ್ನ ಹಿಡ್ಕೊಂಡು ನನ್ನತ್ರ ಜಗಳ ಮಾಡ್ಬೇಡಿʼ ಎಂದೂ ಧನುಷ್ ಹೇಳಿದ್ದಾರೆ. ಇಬ್ಬರ ಮಧ್ಯೆ ಗಲಾಟೆ ಆಗಬೇಕಿದ್ರೆ, ಇತ್ತ ಗಿಲ್ಲಿ ನಟ ʼಜಗಳ ಆಗಲಿ ಸುಮ್ನಿರಿʼ ಎಂದಿದ್ದಾರೆ.
ಇನ್ನು ಬಿಗ್ಬಾಸ್ ಪ್ರೇಕ್ಷಕರಲ್ಲಿ ಅನೇಕರಿಗೆ ಅಶ್ವಿನಿ ಗೌಡ ಇಷ್ಟ ಆಗುತ್ತಿಲ್ಲ. ಮೊನ್ನೆ ಗಿಲ್ಲಿ ನಿನ್ನೆ ಧನುಷ ನಟನೊಂದಿಗೆ ಜಗಳ ಆದಾಗಲೇ ಹಲವರು ಬೈದಿದ್ದರು.
ಟ್ವಿಸ್ಟ್ಗಳ ಮೇಲೆ ಟ್ವಿಸ್ಟ್..
ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಟ್ವಿಸ್ಟ್ಗಳ ಮೇಲೆ ಟ್ವಿಸ್ಟ್ ಬರುತ್ತಿವೆ. ಒಂಟಿ ಮತ್ತು ಜಂಟಿ ತಂಡವನ್ನ ಬೇರೆಬೇರೆಯಾಗಿ ಆಡಿಸುತ್ತಿರುವ ಬಿಗ್ಬಾಸ್ ಕಠಿಣ ನಿಯಮಗಳನ್ನ ಹೇರಿದ್ದಾರೆ. ಆದರೂ ಈ ಸಲದ ಸ್ಪರ್ಧಿಗಳು ನಿಯಮಗಳನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಜಂಟಿ ಟೀಮ್ನವರು ಮಾಡಿದ ತಪ್ಪಿನಿಂದಾಗಿ ಒಂಟಿ ಟೀಮ್ನವರು ಗಳಿಸಿದ್ದ ದಿನಸಿಯನ್ನೆಲ್ಲ ಕಳೆದುಕೊಂಡಿದ್ದಾರೆ. ಇನ್ನು 3ನೇ ವಾರಕ್ಕೆ ಒಂದು ಫಿನಾಲೆ ನಡೆಯಲಿದೆ ಎಂದೂ ತಿಳಿಸಲಾಗಿದೆ. ಫಿನಾಲೆಯಲ್ಲಿ ಒಬ್ಬೊಬ್ಬರೇ ಎಲಿಮಿನೇಟ್ ಆಗಬಹುದು..ಗುಂಪುಗುಂಪಾಗಿಯೂ ಹೋಗಬಹುದು ಎಂದು ಹೇಳಿದ್ದು ಸ್ಪರ್ಧಿಗಳಲ್ಲಿ ಆತಂಕ ಮೂಡಿಸಿದೆ. ಮೊದಲ ದಿನವೇ ಮನೆಯಿಂದ ಹೊರಹೋದ ರಕ್ಷಿತಾ ಶೆಟ್ಟಿ ವಾಪಸ್ ಬರ್ತಾರೆ ಎಂಬ ರೂಮರ್ ಕೂಡ ಹರಡಿದೆ.