Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಮೈಸೂರು: ರಾಜ್ಯದ ಎಲ್ಲೆಡೆ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚಾರಿಸುತ್ತಾರೆ. ರಾಜ್ಯದ ಪ್ರತಿ ಮನೆ ಮನೆಯಲ್ಲಿ ವಾಹನಗಳಿಗೆ ಪೂಜೆ ನಡೆಸಿ ವಿಶೇಷ ಅಲಂಕಾರ ಮಾಡ್ತಾರೆ. ಅಲ್ಲದೇ ಮನೆಯಲ್ಲಿರುವ ಆಯುಧಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ.
ಆಯುಧ ಪೂಜೆಯಂದು ಮನೆಯಲ್ಲಿ ಉಪಯೋಗಿಸುವ ಚೂರಿಯಿಂದ ಹಿಡಿದು ಎಲ್ಲಾ ವಿಧದ ಆಯುಧಗಳನ್ನು ಪೂಜಿಸಲಾಗುತ್ತಿದೆ. ಈ ದಿನ ಮನೆಯನ್ನು ಹೂಗಳಿಂದ ಅಲಂಕಾರ ಮಾಡಲಾಗುತ್ತಿದೆ. ಅಲ್ಲದೇ ಮನೆಯಲ್ಲಿರುವ ವಾಹನಗಳನ್ನು ತೊಳೆದು, ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಗುತ್ತಿದೆ.
ಆಯುಧ ಪೂಜೆ ಇತಿಹಾಸ
ಆಯುಧ ಪೂಜೆ ನಡೆಸುವುದಕ್ಕೂ ಇತಿಹಾಸವಿದೆ. ಈ ಹಿಂದೆ ಪಾಂಡವರು 14 ವರ್ಷ ವನವಾಸ ಒಂದು ವರ್ಷ ಅಜ್ಞಾತವಾಸವಾಸ ಮಾಡಬೇಕದ ಪರಿಸ್ಥಿತಿ ಬಂದಾಗ ಎಲ್ಲಾರೂ ವನವಾಸಕ್ಕೆ ತೆರಳುತ್ತಾರೆ. ವನವಾಸ ಮುಗಿಸಿ ಅಜ್ಞಾತವಾಸದ ಸಂದರ್ಭದಲ್ಲಿ ತಮ್ಮ ಬಳಿ ಇದ್ದ ಅಸ್ತ್ರ ಶಸ್ತ್ರಗಳನ್ನು ಪಾಂಡವರು ಬನ್ನಿ ಮರದಲ್ಲಿ ಮುಚ್ಚಿಟ್ಟು ವಿರಾಟರಾಯನ ಆಸ್ಥಾನದಲ್ಲಿ ವಾಸ ಮಾಡುತ್ತಿದ್ದರು. ಈ ವರ್ತಮಾನವನ್ನು ತಿಳಿದುಕೊಂಡ ಕೌರವರು ವಿರಾಟನ ಗೋವುಗಳು ಎಲ್ಲಾವನ್ನು ವಶಪಡಿಸಿಕೊಂಡರು ಈ ಸಂದರ್ಭದಲ್ಲಿ ಯುದ್ಧ ಮಾಡುವುದಕ್ಕೆ ಪಾಂಡವರು ಯುದ್ದ ಮಾಡುವುದಕ್ಕೆ ಅಡಿಗಿಸಿಟ್ಟ ಶಸ್ತ್ರ ಅಸ್ತ್ರಗಳನ್ನು ತೆಗೆದುಕೊಳ್ಳುವುದಕ್ಕೆ ಮುಂದಾದರು.
ಶಸ್ತ್ರ ಅಸ್ತ್ರಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ದುರ್ಗಾದೇವಿ ಪ್ರತ್ಯಕ್ಷವಾಗಿ ಶಸ್ತ್ರಗಳನ್ನು ನೀಡಿದರು. ನಂತರ ಪಾಂಡವರು ಆ ಆಯುಧಗಳಿಗೆ ಎಣ್ಣೆ ಮಜ್ಜನ ಮಾಡಿ, ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು. ಹೀಗೆ ಅಯುಧಪೂಜೆ ಸಂಪ್ರದಾಯ ಭಾರತಕ್ಕೆ ಬಂದಿದೆ.
ಆಯುಧ ಪೂಜೆ ಮಹತ್ವ ಏನು?
ಹಿಂದೂ ಧರ್ಮದಲ್ಲಿ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ಪುರಾಣಗಳ ಪ್ರಕಾರ ಅಂದು ದಿನ ಆಯುಧಗಳನ್ನು ಪೂಜಿಸುವ ಸಂಪ್ರದಾಯವಿದೆ. ಹಿಂದಿನ ಕಾಲದಲ್ಲಿ, ಕ್ಷತ್ರಿಯ ಜನರು ಯುದ್ಧಕ್ಕೆಂದು ಹೋಗುತ್ತಿದ್ದರು. ಇವರು ವಿಜಯದಶಮಿಯ ಒಂದು ದಿನ ಮೊದಲು ಆಯುಧ ಪೂಜೆ ದಿನ ತಮ್ಮ ಯುದ್ಧ ಸಾಮಾಗ್ರಿಗಳನ್ನಿಟ್ಟು ಪೂಜೆಯನ್ನು ಮಾಡುತ್ತಿದ್ದರು. ಆಯುಧ ಪೂಜೆಯ ಮೂಲಕ ಆಯುಧಗಳನ್ನು ಪೂಜಿಸುವುದರಿಂದ ಯುದ್ಧದಲ್ಲಿ ವಿಜಯಿಯಾಗಬಹುದು ಎಂಬುದು ಅವರ ನಂಬಿಕೆಯಾಗಿತ್ತು. ಈ ಪೂಜೆಯನ್ನು ಕೆಲಸ ಮತ್ತು ಜ್ಞಾನದ ಸಮನ್ವಯದ ಸಂಕೇತವೆಂದು ಪರಿಗಣಿಸಲಾಗಿದೆ.