newsics.com
ನವದೆಹಲಿ: ಮಂಗಳಮುಖಿಯೊಬ್ಬರು ರೈಲಿನಲ್ಲಿ ಭಿಕ್ಷೆ ಬೇಡುತ್ತಾ ಚಿಲ್ಲರೆ ಹಣ ಇಲ್ಲಾಂದ್ರೆ ಆನ್ಲೈನ್ ಪೇಮೆಂಟ್ ಕೂಡಾ ನಡೆಯುತ್ತೇ ಎಂದು ಆನ್ಲೈನ್ ಹಣವನ್ನು ಸ್ವೀಕಾರ ಮಾಡುವ ಮೂಲಕ ಭಿಕ್ಷೆ ಬೇಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಮುಂಬೈನಲ್ಲಿ ನಡೆದಿದ್ದು, ಇಲ್ಲಿನ ಲೋಕಲ್ ಟ್ರೈನ್ನಲ್ಲಿ ಭಿಕ್ಷೆ ಬೇಡುತ್ತಾ ಬಂದ ಮಂಗಳಮುಖಿಯೊಬ್ಬರು, ಚಿಲ್ಲರೆ ಹಣ ಇಲ್ಲ ಎಂದು ಹೇಳಿದ ಪ್ರಯಾಣಿಕರ ಬಳಿ ಕ್ಯೂಆರ್ ಕೋಡ್ ಸ್ಕಾನ್ ಮಾಡಿಸಿ ಹಣವನ್ನು ಪಡೆದಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು mumbairailusers ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ಮುಂಬೈನ್ ಲೋಕಲ್ ಟ್ರೈನ್ನಲ್ಲಿ ಭಿಕ್ಷೆ ಬೇಡುತ್ತಾ ಬಂದ ಮಂಗಳಮುಖಿಯೊಬ್ಬರು ಚಿಲ್ಲರೆ ಹಣ ಇಲ್ಲ ಎಂದು ಹೇಳಿದ ಪ್ರಯಾಣಿಕರ ಬಳಿ ಕ್ಯೂಆರ್ ಕೋಡ್ ತೋರಿಸಿ ಹಣ ಪಾವತಿ ಮಾಡಿ ಎಂದು ಹೇಳುವ ದೃಶ್ಯವನ್ನು ಕಾಣಬಹುದು.
ಒಬ್ಬ ಬಳಕೆದಾರರು ʼಇದು ನಮ್ಮ ಡಿಜಿಟಲ್ ಇಂಡಿಯಾʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
https://twitter.com/mumbairailusers/status/1815617072107528265