newsics.com
ಧರ್ಮಸ್ಥಳ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ,ಮಾನವ ಬುರುಡೆ ಸಿಕ್ಕಿದ ಸ್ಥಳದಲ್ಲಿ ವಾಮಾಚಾರದ ಕುಡಿಕೆ ಸಿಕ್ಕಿವೆ.
ತಲೆಬುರುಡೆ ಮೂಲ ಶೋಧಕ್ಕೆ ತೆರಳಿದ ಸಂದರ್ಭ ಬಂಗ್ಲೆಗುಡ್ಡೆ ಪರಿಸರದಲ್ಲಿ ಪತ್ತೆಯಾಗಿರುವ ಹಲವು ಮಾನವ ದೇಹಗಳ ಅವಶೇಷಗಳು, ಮಗುವಿನದ್ದು ಎಂದು ಶಂಕಿಸಲಾಗಿರುವ ಮೂಳೆ ಹಾಗೂ ವಾಮಾಚಾರದ ಶಂಕೆ ಹುಟ್ಟಿಸಿರುವ ಸ್ಥಳದಲ್ಲಿರುವ ಕೆಲವು ಪರಿಕರಗಳು ಎಸ್ಐಟಿಗೂ ಶಾಕ್ ನೀಡಿದ್ದು, ಈಗ ಇದೇ ಆಯಾಮದಲ್ಲಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿರುವುದು ಕಂಡುಬಂದಿದೆ.
ಇದಕ್ಕೆ ಇಂಬು ಕೊಡುವಂತೆ ಸ್ಥಳೀಯವಾಗಿ ವಾಮಚಾರ ಮಾಡುವವರ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರಯತ್ನವನ್ನು ಅಧಿಕಾರಿಗಳು ನಡೆಸಿದ್ದಾರೆ.
ಕೆಲವು ದಿನಗಳ ಹಿಂದೆ ಬಂಗ್ಲೆಗುಡ್ಡೆ ಪರಿಸರದಲ್ಲಿ ಸ್ಥಳ ಮಹಜರು ನಡೆದ ಬಳಿಕ ಸೌಜನ್ಯ ಅವರ ಸಂಬಂಧಿ ವಿಠಲಗೌಡ ವಿವಿಧ ಮಾಧ್ಯಮಗಳಲ್ಲಿ ಅಲ್ಲಿನ ದೃಶ್ಯಾವಳಿಗಳ ಮಾಹಿತಿ ವಿವರಿಸಿದ್ದರು. ಅದಾದ ಬೆನ್ನಿಗೇ ವಾಮಾಚಾರ ವಿಚಾರ ಮುನ್ನೆಲೆಗೆ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.