newsics.com
ನವದೆಹಲಿ: ವಿದ್ಯುತ್ ಅವಘಡದಲ್ಲಿ ವ್ಯಕ್ತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದೆಹಲಿಯಲ್ಲಿ 36 ವರ್ಷದ ವ್ಯಕ್ತಿಯು ವಿದ್ಯುತ್ ಶಾಕ್ನಿಂದ ಸಾವನ್ನಪ್ಪಿದ್ದ ಎಂಬ ಕೇಸ್ನಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಅದು ಕೂಡ ಪೊಲೀಸ್ ತನಿಖೆ ಮೂಲಕ ತಿಳಿದು ಬಂದಿದ್ದೇ ಇದು ಒಂದು ಕೊಲೆ ಅಂತ. ಸುಂದರ ಹೆಂಡತಿಯೇ ಗಂಡನ ಪ್ರಾಣವನ್ನು ತೆಗೆದಿದ್ದಾಳೆ. ಪತಿಯ ಸೋದರ ಸಂಬಂಧಿಯ ಜೊತೆ ಸೇರಿ ಗಂಡನಿಗೆ ನಿದ್ರೆ ಮಾತ್ರೆ ನೀಡಿದ್ದಾರೆ. ಬಳಿಕ ಕರೆಂಟ್ ಶಾಕ್ ಕೊಟ್ಟು ಕೊಂದಿರುವುದಾಗಿ ಈಗ ಆರೋಪಿಗಳೇ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
ಜುಲೈ 13ರಂದು ದೆಹಲಿಯ ಮಾತಾ ರೂಪಾನಿ ಮ್ಯಾಗೋ ಆಸ್ಪತ್ರೆಗೆ ಪತ್ನಿ ಸುಶ್ಮಿತಾ, ತನ್ನ ಪತಿ ಕರಣ್ ದೇವ್ನನ್ನು ಕರೆತಂದಿದ್ದಳು. ಪತಿ ಕರಣ್ ದೇವ್ಗೆ ಆಕಸ್ಮಿಕವಾಗಿ ಕರೆಂಟ್ ಶಾಕ್ ಹೊಡೆಯಿತು ಎಂದು ಹೇಳಿದ್ದಳು. ಆದರೇ, ಕರಣ್ ದೇವ್ನನ್ನು ಪರೀಕ್ಷಿಸಿದ ವೈದ್ಯರು ಈಗಾಗಲೇ ಕರಣ್ ದೇವ್ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ವ್ಯಕ್ತಿಯ ವಯಸ್ಸು, ಸಾವಿನ ಸಂದರ್ಭ ಉಲ್ಲೇಖಿಸಿ ಮರಣೋತ್ತರ ಪರೀಕ್ಷೆ ನಡೆಸುವಂತೆ ಸೂಚಿಸಿದ್ದರು. ಆದರೆ ಪತ್ನಿ ಹಾಗೂ ಆತನ ಸೋದರ ಸಂಬಂಧಿ ರಾಹುಲ್ ಆಕ್ಷೇಪ ವ್ಯಕ್ತಪಡಿಸಿದ್ದರು.
ಪೊಲೀಸರು ಮೃತದೇಹವನ್ನು ದೀನ್ ದಯಾಳ್ ಆಸ್ಪತ್ರೆಗೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಕರಣ್ ಸಾವನ್ನಪ್ಪಿದ ಮೂರು ದಿನಗಳ ಬಳಿಕ ಕಿರಿಯ ಸಹೋದರ ಕುನಾಲ್ ಕೊಲೆ ಕೇಸ್ ದಾಖಲಿಸಿದ್ದಾರೆ. ಸುಷ್ಮಾ ಹಾಗೂ ರಾಹುಲ್ ನ ಇನ್ ಸ್ಟಾ ಗ್ರಾಂ ಚಾಟ್ ನ ಪುರಾವೆಗಳನ್ನೂ ಒದಗಿಸಿದ್ದಾನೆ. ಚಾಟ್ ನಲ್ಲಿ ಇಬ್ಬರೂ ಕೊಲೆ ಬಗ್ಗೆ ಸಂಚು ರೂಪಿಸಿರುವುದು ಬಯಲಾಗಿದೆ. ಕರಣ್ ದೇವ್ ಪತ್ನಿ ಸುಷ್ಮಿತಾ ಹಾಗೂ ಮೈದುನ ರಾಹುಲ್ ನಡುವೆ ಅಕ್ರಮ ಸಂಬಂಧವಿದ್ದು ಇಬ್ಬರೂ ಸೇರಿ ಕರಣ್ ನನ್ನು ಪಕ್ಕ ಪ್ಲಾನ್ ಮಾಡಿ ಕೊಲೆ ಮಾಡಿರುವುದು ತಿಳಿದುಬಂದುಬಂದಿದೆ.
ಸುಶ್ಮಿತಾ ಹಾಗೂ ರಾಹುಲ್ ನಡುವೆ ಅಫೇರ್ ಇತ್ತು. ಇದರಿಂದಾಗಿ ಇಬ್ಬರೂ ಸೇರಿ ಕರಣ್ ದೇವ್ನನ್ನು ಕೊಲೆ ಮಾಡಲು ನಿರ್ಧರಿಸಿದ್ದರು ಅನ್ನೋದು ಈ ಇನ್ಸ್ಟಾಗ್ರಾಮ್ ಚಾಟ್ಗಳಿಂದಲೇ ಬಹಿರಂಗವಾಗಿತ್ತು. ಕರಣ್ ದೇವ್ಗೆ ಊಟದಲ್ಲಿ 15 ನಿದ್ರೆ ಮಾತ್ರೆಗಳನ್ನ ಹಾಕಿ ನೀಡಿದ್ದರು. ಇದರಿಂದ ಕರಣ್ ದೇವ್ ಪ್ರಜ್ಞಾಹೀನನಾಗಿದ್ದ. ನಿದ್ರೆ ಮಾತ್ರೆಯಿಂದ ವ್ಯಕ್ತಿ ಸಾವನ್ನಪ್ಪಲು ಎಷ್ಟು ಗಂಟೆ ಬೇಕಾಗುತ್ತೆ ಅನ್ನೋದನ್ನು ಸುಶ್ಮಿತಾ- ರಾಹುಲ್ ಗೂಗಲ್ ನಲ್ಲಿ ಚೆಕ್ ಮಾಡಿದ್ದರು. ಬಳಿಕ ಕರೆಂಟ್ ಶಾಕ್ ಕೊಟ್ಟು ಕರಣ್ ದೇವ್ ನನ್ನು ಹತ್ಯೆಗೈದ್ದಿದ್ದರು. ಆಕಸ್ಮಿಕವಾಗಿ ಕರಣ್ ದೇವ್, ಕರೆಂಟ್ ಶಾಕ್ ನಿಂದ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದರು.
ಸದ್ಯ ಕರಣ್ ಪತ್ನಿ ಹಾಗೂ ಮೈದುನನ್ನು ಪೊಲೀಸರು ಬಂಧಿಸಿದ್ದಾರೆ.
https://www.newsics.com/2025/07/19/police-officers-son-kills-two-people-by-speeding/