newsics.com
ವಾರದ ಪ್ರತಿಯೊಂದು ದಿನಕ್ಕೂ ಅನುಗುಣವಾಗು ಆಯಾ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಆ ವ್ಯಕ್ತಿಯು ಹೆಚ್ಚು ಶಕ್ತಿಶಾಲಿಯಾಗುತ್ತಾನೆ. ಇದರೊಂದಿಗೆ, ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಯಶಸ್ಸು ಪ್ರಾರಂಭವಾಗುತ್ತದೆ.
ಹಿಂದೂ ಧರ್ಮದಲ್ಲಿ ಎಲ್ಲಾ ವಾರದ ದಿನಗಳಿಗೆ ವಿಶೇಷ ಮಹತ್ವವಿದೆ ಎಂಬುದು ನಮಗೆ ಈಗಾಗಲೇ ತಿಳಿದಿದೆ. ಈ ದಿನಗಳನ್ನು ವಿವಿಧ ದೇವತೆಗಳಿಗೆ ಸಮರ್ಪಿಸಲಾಗಿದೆ. ಅದೇ ಸಮಯದಲ್ಲಿ, ವಾರದ ಬಣ್ಣಗಳಿಗೂ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂಬುದು ನಿಮಗೆ ತಿಳಿದಿದೆಯೇ..? ಒಬ್ಬ ವ್ಯಕ್ತಿಯು ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವ ದಿನಗಳಂತೆ ಬಟ್ಟೆಗಳನ್ನು ಧರಿಸಿದರೆ, ಅವನ ಅದೃಷ್ಟವು ಬೆಳಗುತ್ತದೆ. ಪ್ರತಿದಿನದ ಪ್ರಾಮುಖ್ಯತೆಯೊಂದಿಗೆ, ಬಣ್ಣಗಳ ವಿಶೇಷ ಸಂಯೋಜನೆಯಿದೆ. ಯಾವ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು ಎಂದು ತಿಳಿದು ಆ ಬಣ್ಣದ ಬಟ್ಟೆಯನ್ನು ಆಯಾ ದಿನ ಧರಿಸಿದರೆ ಆ ವ್ಯಕ್ತಿಯು ಹೆಚ್ಚು ಶಕ್ತಿಶಾಲಿಯಾಗುತ್ತಾನೆ. ಇದರೊಂದಿಗೆ, ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಯಶಸ್ಸು ಪ್ರಾರಂಭವಾಗುತ್ತದೆ.
ಮಂಗಳವಾರದ ದಿನವನ್ನು ಆಂಜನೇಯ ಸ್ವಾಮಿಯ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಆಂಜನೇಯ ಸ್ವಾಮಿಗೆ ಪ್ರಿಯವಾಗುವಂತಹ ಕೆಲಸಗಳನ್ನು ನಾವು ಮಾಡಬೇಕು. ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಮಂಗಳವಾರದ ದಿನ ನಾವು ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು.
ಮಂಗಳವಾರದ ದಿನವು ಹೆಚ್ಚು ವಿಶೇಷವಾದ ದಿನವಾಗಿದೆ. ಯಾಕೆಂದರೆ, ಜ್ಯೋತಿಷ್ಯದ ಪ್ರಕಾರ, ಮಂಗಳವಾರದ ದಿನವು ಮಂಗಳ ಗ್ರಹದೊಂದಿಗೆ ಸಂಬಂಧವನ್ನು ಹೊಂದಿರುವ ದಿನವಾದರೆ, ಧಾರ್ಮಿಕ ದೃಷ್ಟಿಕೋನದ ಪ್ರಕಾರ ಮಂಗಳವಾರದ ದಿನವು ಆಂಜನೇಯ ಸ್ವಾಮಿಗೆ ಸಮರ್ಪಿತವಾದ ದಿನವಾಗಿದೆ. ಮಂಗಳವಾರದ ದಿನದಂದು ನಮಗೆ ಆಂಜನೇಯ ಸ್ವಾಮಿಯ ಆರಾಧನೆಯನ್ನು ಮಾಡುವುದು ಮುಖ್ಯವಾಗಿರುತ್ತದೆ
ಮಂಗಳವಾರವು ಆಂಜನೇಯ ಸ್ವಾಮಿಯ ದಿನ. ಈ ಕಾರಣಕ್ಕಾಗಿ ನಾವು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಬೇಕು. ಮಂಗಳವಾರದ ದಿನದಂದು ನಾವು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ ಆತನು ಶೀಘ್ರದಲ್ಲೇ ನಮಗೆ ಒಲಿಯುತ್ತಾನೆ. ಮಂಗಳವಾರದ ದಿನದಂದು ನಾವು ಕೆಂಪು ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ನಮ್ಮ ದುರಾದೃಷ್ಟವು ಅದೃಷ್ಟವಾಗಿ ಬದಲಾಗುತ್ತದೆ.
ಕೆಂಪು ಬಣ್ಣವನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಾವು ಕೆಂಪು ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ಅದು ನಮ್ಮ ದೇಹದಲ್ಲಿ ಶಕ್ತಿಯ ಸಂಚಲವನ್ನು ಹೆಚ್ಚಾಗಿಸುತ್ತದೆ. ಈ ಬಣ್ಣದ ಬಟ್ಟೆಯನ್ನು ಧರಿಸುವುದು ಕೂಡ ಆ ಜನರಿಗೆ ಶುಭ ಫಲಿತಾಂಶಗಳನ್ನು ತಂದುಕೊಡುತ್ತದೆ. ಮಂಗಳವಾರ ಕೆಂಪು ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ನಿಮ್ಮಲ್ಲಿ ಹೊಸ ಶಕ್ತಿ ರೂಪುಗೊಳ್ಳುವುದು ಎನ್ನುವ ನಂಬಿಕೆಯಿದೆ.