newsics.com
ನೂರಾರು ಮಂದಿಯ ಸಾವಿಗೆ ಕಾರಣವಾದ 26/11 ಮುಂಬೈ ದಾಳಿ ಪ್ರಕರಣದ ಪ್ರಮುಖ ರೂವಾರಿಯಾಗಿರುವ ಆರೋಪಿ ತಹವ್ವೂರ್ ರಾಣಾ ಮುಂಬೈ ದಾಳಿಯ ಸಮಯದಲ್ಲಿ ತಾನು ನಗರದಲ್ಲಿದ್ದ ಮತ್ತು ಪಾಕಿಸ್ತಾನಿ ಸೇನೆಯ ವಿಶ್ವಾಸಾರ್ಹ ಏಜೆಂಟ್ ಆಗಿದ್ದೆ ಎಂದು ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.
ದೆಹಲಿಯ ತಿಹಾರ್ ಜೈಲಿನಲ್ಲಿ ಎನ್ಐಎ ವಶದಲ್ಲಿರುವ ತಹವ್ವೂರ್ ರಾಣಾ, ಮುಂಬೈ ಅಪರಾಧ ವಿಭಾಗದ ವಿಚಾರಣೆಯ ಸಂದರ್ಭದಲ್ಲಿ ತಾನು ಮತ್ತು ತನ್ನ ಸ್ನೇಹಿತ ಹಾಗೂ ಸಹಾಯಕ ಡೇವಿಡ್ ಕೋಲ್ಮನ್ ಹೆಡ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಜೊತೆ ಹಲವಾರು ತರಬೇತಿ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದೇವೆ ಎಂದು ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಮೂಲತಃ ಬೇಹುಗಾರಿಕೆ ಜಾಲವಾಗಿ ರೂಪುಗೊಂಡಿತ್ತು ಎಂದು ಬಹಿರಂಗಪಡಿಸಿರುವ ಆತ, ತನ್ನ ಸಹಚರ ಡೇವಿಡ್ ಹೆಡ್ಲಿ ನಿಷೇಧಿತ ಎಲ್ಇಟಿ ಗುಂಪಿನೊಂದಿಗೆ ಹಲವಾರು ಭಯೋತ್ಪಾದಕ ತರಬೇತಿ ಅವಧಿಗಳನ್ನು ನಡೆಸಿದ್ದನೆಂದು ಒಪ್ಪಿಕೊಂಡಿದ್ದಾನೆ.