newsics.com
ಬೆಂಗಳೂರು: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಸರಣಿಯ ಮೊದಲ ಪಂದ್ಯವು ದುಃಖದಿಂದ ತುಂಬಿತ್ತು. ಪಂದ್ಯದ ಮೊದಲ ದಿನದಂದು ಎರಡೂ ತಂಡಗಳ ಆಟಗಾರರು ತಮ್ಮ ತೋಳುಗಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿದ್ದರು.
ಹೌದು, ಪಂದ್ಯದ ಮೂರನೇ ದಿನದಂದು, ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಡೇವಿಡ್ ಸಿದ್ ಲಾರೆನ್ಸ್ ನಿಧನರಾದರು, ಇದರಿಂದಾಗಿ ಎರಡೂ ತಂಡಗಳ ಆಟಗಾರರು ಆರ್ಮ್ ಬ್ಯಾಂಡ್ ಧರಿಸಿದ್ದರು.
ಇದೀಗಪಂದ್ಯದ ನಾಲ್ಕನೇ ದಿನದಂದು ಭಾರತದ ಮಾಜಿ ಎಡಗೈ ಅನುಭವಿ ಸ್ಪಿನ್ನರ್ ದಿಲೀಪ್ ದೋಷಿ ನಿಧನರಾಗಿದ್ದಾರೆ. ದಿಲೀಪ್ ದೋಷಿ ಭಾರತದ ಅತ್ಯುತ್ತಮ ಸ್ಪಿನ್ ಬೌಲರ್ಗಳಲ್ಲಿ ಒಬ್ಬರು. ಹೃದಯ ಸಂಬಂಧಿ ಕಾಯಿಲೆಯಿಂದ ಲಂಡನ್ನಲ್ಲಿ ನಿಧನರಾದರು. ಎರಡೂ ತಂಡಗಳ ಆಟಗಾರರು ತಮ್ಮ ತೋಳುಗಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿ ಸಂತಾಪ ಸೂಚಿಸಿದ್ದಾರೆ.
1980 ರ ದಶಕದಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ಹಠಾತ್ತನೆ ನಿವೃತ್ತರಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ದಿಲೀಪ್ ದೋಷಿ ಅವರ ಸಾವು ಭಾರತೀಯ ಕ್ರಿಕೆಟ್ನಲ್ಲಿ ಶೋಕದ ಅಲೆಯನ್ನು ಉಂಟುಮಾಡಿತು. ಸಚಿನ್ ತೆಂಡೂಲ್ಕರ್ ಮತ್ತು ಹರ್ಭಜನ್ ಸಿಂಗ್ ಅವರಂತಹ ದಂತಕಥೆಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಸಂತಾಪ ಸೂಚಿಸಿದರು.