newsics.com
ಮಲಪ್ಪುರಂ: ಮಲಗುವ ಕೋಣೆಯಲ್ಲಿನ ಮೊಳಗೆ ಶರ್ಟ್ ಕಾಲರ್ ಸಿಲುಕಿದ ಪರಿಣಾಮದಿಂದ ಉಸಿರುಗಟ್ಟಿ 11 ವರ್ಷದ ಬಾಲಕನೊಬ್ಬ ಮೃ*ತಪಟ್ಟಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.
ಮಣಿಕಂಠನ್ ಮತ್ತು ದಿವ್ಯಾ ದಂಪತಿಯ ಪುತ್ರ ಧ್ವನಿತ್(11) ಮೃ*ತ ಬಾಲಕ. ಈತ ನೀರಮರುತ್ತೂರು ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ.
ಶುಕ್ರವಾರ (ಜೂ.20) ಸಂಜೆ ಈ ಘಟನೆ ನಡೆದಿದೆ. ಧ್ವನಿತ್ ಅವರು ಮಲಗುವ ಕೋಣೆಯ ಗೋಡೆಗೆ ಮೊಳೆ ಬಡಿಯಲಾಗಿತ್ತು. ಈ ವೇಳೆ ಧ್ವನಿತ್ ಅವರ ಶರ್ಟ್ ಕಾಲರ್ ಗೋಡೆಯಲ್ಲಿದ್ದ ಮೊಳೆಗೆ ಸಿಲುಕಿಕೊಂಡು, ಅವರ ಕುತ್ತಿಗೆಗೆ ಬಟ್ಟೆ ಬಿಗಿಯಾಗಿದೆ. ಇದರಿಂದ ಬಾಲಕನಿಗೆ ಉಸಿರುಗಟ್ಟಿದೆ.
ಮಗನ ಕಿರುಚಾಟ ಕೇಳಿ ತಂದೆ ಮಣಿಕಂಠನ್ ಕೋಣೆಗೆ ಬಂದು, ಧ್ವನಿತ್ ಅವರ ಶರ್ಟ್ ಕಾಲರ್ ನಿಂದ ನೇತಾಡಲ್ಪಟ್ಟಿರುವುದು ಗಮನಿಸಿ ಕೂಡಲೇ ಅವನನ್ನು ತಿರೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪ್ರಾಥಮಿಕ ಚಿಕಿತ್ಸೆಯ ನಂತರ, ಅವರನ್ನು ಕೋಝಿಕ್ಕೋಡ್ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಧನ್ವಿತ್ ಅವರು ಶನಿವಾರ (ಜೂ.21) ಸಂಜೆ ಮೃ*ತಪಟ್ಟಿದ್ದಾರೆ