newsics.com
ಶುಭೋದಯ
ಈ ದಿನ – ನಿತ್ಯ ಪಂಚಾಂಗ
09-07-2024, ಮಂಗಳವಾರ
ದಿನ ವಿಶೇಷ: ವಿನಾಯಕ ಚತುರ್ಥಿ (ಅಂಗಾರಕ ಯೋಗ)
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ದಿನಾಂಕ – 09/07/2024
ವಾರ- ಮಂಗಳವಾರ
ತಿಂಗಳು- ಜುಲೈ
ಬಣ್ಣ- ಕಿತ್ತಳೆ
ತಿಥಿ – ತೃತೀಯ 06:08:01
ಪಕ್ಷ – ಶುಕ್ಲ
ನಕ್ಷತ್ರ – ಆಶ್ಲೇಷ 07:51:27
ಯೋಗ – ಸಿದ್ಧಿ 26:25:02*
ಕರಣ – ಗರಜ 06:08:01
ಕರಣ – ವಾಣಿಜ 18:55:42
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ- ಕರ್ಕಾಟಕ till 07:51:27
ಚಂದ್ರ ರಾಶಿ- ಸಿಂಹ from 07:51:27
ಸೂರ್ಯ ರಾಶಿ- ಮಿಥುನ
ಋತು- ಗ್ರೀಷ್ಮ
ಆಯನ- ಉತ್ತರಾಯಣ
ಸೂರ್ಯೋದಯ- 06:00:41
ಸೂರ್ಯಾಸ್ತ- 18:49:09
ಹಗಲಿನ ಅವಧಿ- 12:48:27
ರಾತ್ರಿಯ ಅವಧಿ- 11:11:49
ಚಂದ್ರೋದಯ- 08:46:22
ಚಂದ್ರಾಸ್ತ- 21:37:59
ರಾಹು ಕಾಲ- 15:37 – 17:13 ಅಶುಭ
ಯಮಘಂಡ ಕಾಲ- 09:13 – 10:49 ಅಶುಭ
ಗುಳಿಕ ಕಾಲ- 12:25 – 14:01
ಅಭಿಜಿತ್- 11:59 – 12:51 ಶುಭ
ದುರ್ಮುಹೂರ್ತ- 08:34 – 09:26 ಅಶುಭ
ದುರ್ಮುಹೂರ್ತ- 23:18 – 24:09* ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ನಮ್ಮ ಒಳಮನಸ್ಸಿಗೆ ತಿಳಿಯದ ಯಾವ ವಿಷಯಗಳೂ ಇಲ್ಲ. ನಾವು ತಪ್ಪು ಕೆಲಸ ಮಾಡುವಾಗಲೂ ನಮ್ಮ ಒಳಮನ ಎಚ್ಚರಿಸುತ್ತದೆ. ಆದರೆ, ನಾವು ಅದು ಹೇಳುವುದನ್ನು ಕೇಳದೇ ಸಮಸ್ಯೆಗಳನ್ನು ತಂದುಕೊಳ್ಳುತ್ತೇವೆ. ಆಂತರ್ಯದ ಕರೆಗೆ ಓಗೊಡುವುದು ಸದಾ ಒಳಿತು.
***
ಇಂದಿನ ಇತಿಹಾಸ
ಜುಲೈ 09
* ಮುಂಬೈಯ ಗವರ್ನರ್ ಆಗಿದ್ದ ಸರ್ ರಾಬರ್ಟ್ ಗ್ರಾಂಟ್ ಜುಲೈ 09, 1838 ರಂದು ನಿಧನರಾದರು. ಅವರ ಹೆಸರನ್ನೇ ಗ್ರಾಂಟ್ ಮೆಡಿಕಲ್ ಕಾಲೇಜಿಗೆ ನೀಡಲಾಯಿತು.
* ಜುಲೈ 09, 1875 ರಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಸ್ಥಾಪಿಸಲಾಯಿತು.
* ಜುಲೈ 09, 1877 ರಂದು ವಿಂಬಲ್ಡನ್ ಆಲ್ ಇಂಗ್ಲೆಂಡ್ ಕ್ರಿಕೆಟ್ ಮತ್ತು ಲಾನ್ ಟೆನಿಸ್ ಕ್ಲಬ್ಬಿನಲ್ಲಿ ಮೊತ್ತ ಮೊದಲ ‘ ವಿಂಬಲ್ಡನ್ ಚಾಂಪಿಯನ್ ಶಿಪ್’ ಆರಂಭವಾಯಿತು.
* ಗುರುದತ್ ಪಡುಕೋಣೆ – ಇವರು ಭಾರತ ಚಲನಚಿತ್ರ ರಂಗ ಕಂಡ ಓರ್ವ ಅಮೋಘ ನಟ, ನಿರ್ದೇಶಕ ಹಾಗೂ ನಿರ್ಮಾಪಕ. ಕಲಾತ್ಮಕ, ಸಾಹಿತ್ಯಪೂರ್ಣ ಚಲನಚಿತ್ರ ಮಾಡುವುದರಲ್ಲಿ ಇವರದ್ದು ಎತ್ತಿದ ಕೈ. ಇವರ ಅನೇಕ ಉತ್ತಮ ಚಿತ್ರಗಳಲ್ಲಿ “ಪ್ಯಾಸಾ” ಒಂದು. ಗುರುದತ್ ಜುಲೈ 09, 1925 ರಂದು ಬೆಂಗಳೂರಿನಲ್ಲಿ ಜನಿಸಿದರು.
* ಕೆ. ಬಾಲಚಂದರ್ – ಜುಲೈ 09, 1930 ರಂದು ಜನಿಸಿದರು. ಚಲನಚಿತ್ರ ಲೋಕದ ಮಹಾನ್ ನಿರ್ದೇಶಕರಲ್ಲೊಬ್ಬರು. ಚಲನಚಿತ್ರ ನಿರ್ಮಾಣ, ಚಿತ್ರಸಾಹಿತ್ಯ, ಕಿರುತೆರೆ ಧಾರಾವಾಹಿ ನಿರ್ಮಾಣ ಹೀಗೆ ವಿವಿಧ ಚಿತ್ರ ಮಾಧ್ಯಮ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸಿರುವ ಕೆ. ಬಾಲಚಂದರ್ ಭಾರತ ದೇಶದಲ್ಲಿ ಚಲನಚಿತ್ರೋದ್ಯಮದಲ್ಲಿನ ಶ್ರೇಷ್ಠ ಸಾಧನೆಗಾಗಿ ಸಲ್ಲುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕೃತರಾಗಿದ್ದಾರಲ್ಲದೆ, ಪದ್ಮಶ್ರೀ, ತಮಿಳುನಾಡಿನ ಕಲೈಮಾಮಣಿ ಮುಂತಾದ ಅನೇಕ ಗೌರವಗಳನ್ನೂ, ಶ್ರೇಷ್ಠ ಚಲನಚಿತ್ರಗಳಿಗೆ ಸಲ್ಲುವ ಅನೇಕ ರಾಷ್ಟ್ರಪ್ರಶಸ್ತಿಗಳನ್ನೂ ಸ್ವೀಕರಿಸಿದ್ದಾರೆ. ಕೆ.ಬಾಲಚಂದರ್ರವರು ಡಿಸೆಂಬರ್ 23, 2014 ರಂದು ನಿಧನರಾದರು.
* ಜುಲೈ 09, 1957 ರಂದು – 102ನೇ ಅಂಶವಾದ ನೊಬೆಲ್ಲಿಯಂನ ಪತ್ತೆಯನ್ನು ಘೋಷಿಸಲಾಯಿತು.
* ಜುಲೈ 09, 2006 ರಂದು – ದೇಶದ ಪ್ರತಿಷ್ಠಿತ ಅತ್ಯಾಧುನಿಕ ಮಧ್ಯಮ ಶ್ರೇಣಿಯ ಖಂಡಾತರ ಅಗ್ನಿ – 3 ಕ್ಷಿಪಣಿ ಯನ್ನು ಒರಿಸ್ಸಾದ ಕಡಲ ತೀರದ ವೀಲರ್ ದ್ವೀಪದಿಂದ ಪರೀಕ್ಷಾರ್ಥ ಹಾರಿಬಿಡಲಾಯಿತು. ಆದರೆ ತಾಂತ್ರಿಕ ದೋಷದ ಪರಿಣಾಮವಾಗಿ ಸಮುದ್ರಕ್ಕೆ ಬಿದ್ದಿತು.