newsics.com
ಪಟನಾ: ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಶಿವಲಿಂಗವನ್ನು ತಬ್ಬಿ ಕುಳಿತು ಭಕ್ತಿ ಪ್ರದರ್ಶಿಸಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ತೇಜ್ ಪ್ರತಾಪ್ ಯಾದವ್ ಅವರು ದೇವಾಲಯವೊಂದರಲ್ಲಿ ಶಿವಲಿಂಗವನ್ನು ತಬ್ಬಿ ಕುಳಿತಿದ್ದಾರೆ. ಅವರ ಮೈಮೇಲೆ ಹಾಲಿನ ಕ್ಷೀರಾಭಿಷೇಕ ನಡೆದಿದೆ. ಒಂದು ನಿಮಿಷಕ್ಕೂ ಹೆಚ್ಚು ಅವಧಿವರೆಗೆ ಅಭಿಷೇಕ ನಡೆದಿದ್ದು, ಮುಗಿಯುವವರೆಗೂ ತೇಜ್ ಪ್ರತಾಪ್ ಯಾದವ್ ಅವರು ಶಿವಲಿಂಗವನ್ನು ತಬ್ಬಿಕೊಂಡೇ ಕುಳಿತಿದ್ದರು.
ಈ ಹಿಂದೆ ತೇಜ್ ಪ್ರತಾಪ್ ಯಾದಾವ್ ನನ್ನ ಕನಸಿನಲ್ಲಿ ಶ್ರೀರಾಮ ಬಂದಿದ್ದ, ನನ್ನ ತಂದೆಯೇ ಬಂದು ಹೀಗೆ ಹೇಳಿದರು ಎಂಬುದಾಗಿ ಇದಕ್ಕೂ ಮೊದಲು ಅವರು ತಿಳಿಸಿದ್ದರು. ಈಗ ಶಿವಲಿಂಗವನ್ನು ತಬ್ಬಿ ಕುಳಿತು ದೈವ ಭಕ್ತಿಯನ್ನು ಪ್ರದರ್ಶಿಸಿದ್ದಾರೆ.
“ಮಹಾದೇವನು ಪರಮ ಸತ್ಯದ ಪ್ರತೀಕ. ಮಹಾದೇವನನ್ನು ಅಪ್ಪಿಕೊಳ್ಳುವುದು ಎಂದರೆ, ನಮ್ಮ ಮನಸ್ಸಿನ ಆಳವನ್ನು ನಾವೇ ತಲುಪಿದಂತೆ. ಮನಸ್ಸಿನ ತುಂಬ ತುಂಬಿರುವ ಅಶಾಂತಿಯನ್ನು ನಿರ್ಮೂಲನೆ ಮಾಡಬೇಕು ಎಂದರೆ, ಮಹಾದೇವನ ಮೊರೆಹೋಗಿ” ಎಂಬುದಾಗಿ ತೇಜ್ ಪ್ರತಾಪ್ ಯಾದವ್ ಎಂದು ಬರೆದು ತೇಜ್ ಪ್ರತಾಪ್ ಯಾದಾವ್ ಅವರು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.