newsics.com
ಬೆಂಗಳೂರು : ಅಚ್ಚರಿ ಸಂಗತಿ ಎಂದರೆ ಅರಣ್ಯ ಇಲಾಖೆ ಕರ್ನಾಟಕದ ಬೆಂಗಳೂರಿನ ರೂರಲ್ನಲ್ಲಿ ಮೊಟ್ಟ ಮೊದಲ ಬಾರಿಗೆ ಓವರ್ ಪಾಸ್ ನಿರ್ಮಿಸಿದೆ.
27 ಮಾರ್ಚ್ 2022ರಲ್ಲಿ ಕಾಡಾನೆಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿತ್ತು. ಪರಿಣಾಮ ಕಾಡಾನೆ ಸಾವನ್ನಪ್ಪಿತ್ತು. ಇದಲ್ಲದೆ ಈ ಜಾಗದಲ್ಲಿ ಚಿರತೆಗಳ ಓಡಾಟವು ಇದೆ. ಶಾಲೆಗೆ ಹೋಗುವ ಮಕ್ಕಳು ಕಣ್ಣಾರೆ ಕಂಡ ಉದಾಹರಣೆಗಳಿವೆ. ಇದನೆಲ್ಲಾ ಗಮನ ಹರಿಸಿಕೊಂಡು ಕರ್ನಾಟಕ ಅರಣ್ಯ ಇಲಾಖೆ ಕಾಡು ಪ್ರಾಣಿಗಳಿಗಾಗಿ ಮೇಲ್ಸೇತುವೆ ನಿರ್ಮಿಸಿದೆ.
ಕಾಡಾನೆಗಳಿಗೆಂದೇ ಬೆಂಗಳೂರು -ಕನಕಪುರ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ 209) ರೋರಿಚ್ ಮತ್ತು ದೇವಿಕಾರಣಿ ರೋರಿಚ್ ಎಸ್ಟೇಟ್ ಪಕ್ಕದಲ್ಲಿ ಓವರ್ ಪಾಸ್ ನಿರ್ಮಿಸಲಾಗಿದೆ. 40 ಮೀಟರ್ ಅಗಲ ಮತ್ತು 40 ಮೀಟರ್ ಉದ್ದದ ಓವರ್ ಪಾಸ್ ಇದಾಗಿದ್ದು, ಸಾರ್ವಜನಿಕ ರಸ್ತೆಯ ಮೇಲ್ಭಾಗವಾಗಿ ಹಾದು ಹೋಗುತ್ತದೆ. ಇದರ ಮೂಲಕ ಕಾಡಾನೆ ಮಾತ್ರವಲ್ಲ, ಕಾಡು ಪ್ರಾಣಿಗಳು ರಸ್ತೆ ಮೇಲ್ಭಾಗವಾಗಿ ಹಾದು ಹೋಗುವಂತೆ ನಿರ್ಮಿಸಲಾಗಿದೆ. ಇದರಿಂದಾಗಿ ಕಾಡು ಪ್ರಾಣಿಗಳು ವಾಹನ ಅಪಘಾತಕ್ಕೆ ಬಲಿಯಾಗೋದನ್ನು ತಡೆಯಬಹುದಾಗಿದೆ.
ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ನಿಂದ ಸಾವನದುರ್ಗ ಕಾಡಿಗೆ ಪ್ರಾಣಿಗಳು ಹಾದು ಹೋಗಲೆಂದು ಓವರ್ ಪಾಸ್ ನಿರ್ಮಿಸಲಾಗಿದೆ. ಜೊತೆಗೆ ಪ್ರಾಣಿಗಳಿಗೆ ಆಹಾರವಾಗುವ ಸಸ್ಯಗಳನ್ನು ಇಲ್ಲಿ ನೆಡಲಾಗಿದ್ದು, ಬಿದಿರು ಸೇರಿ ಅನೇಕ ರೀತಿಯ ಸಸ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಮಾತ್ರವಲ್ಲದೆ ಪ್ರಾಣಿಗಳು ರಸ್ತೆಗಿಳಿಯದಂತೆ ತಡೆಗೋಡೆ ನಿರ್ಮಿಸಲಾಗಿದೆ.