newsics.com
ಉತ್ತರ ಪ್ರದೇಶ: ವಿವಾಹ ಎಂಬುದು ಪವಿತ್ರ ಬಂಧ. ಅದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅಂತಾರೆ. ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿ ತಮ್ಮ ಮದುವೆಯ ಬಗ್ಗೆ ಅನೇಕ ಕನಸುಗಳನ್ನ ಕಂಡಿರುತ್ತಾರೆ. ಒಟ್ಟಿಗೆ ಜೀವನ ನಡೆಸುವ ಬಗ್ಗೆ ಹಲವಾರು ಕನಸು ಕಂಡಿರುತಾರೆ. ಆದರೆ ಮದುವೆಯಾದ ಕೆಲವೇ ಕೆಲವು ಕ್ಷಣಗಳಲ್ಲಿ ವರ ಜೀವ ಬಿಟ್ಟಿರುವಂತಹ ಘಟನೆ ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಬಿಂಡ್ಕಿ ತಹಸಿಲ್ ಪ್ರದೇಶದಲ್ಲಿ ನಡೆದಿದೆ.
ಬಿಂಡ್ಕಿ ತಹಸಿಲ್ ಪ್ರದೇಶದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಛಿವಾಲಿ ಗ್ರಾಮದ ನಿವಾಸಿ ಸುರೇಶ್ ಕುಮಾರ್ ಎನ್ನುವರು ತಮ್ಮ ಮಗಳು ಸಂಜನಾಳ ಮದುವೆಯನ್ನು ಕಾನ್ಪುರ ನಗರದ ನೌಬಸ್ತಾ ಗ್ರಾಮದ ನಿವಾಸಿ ಶ್ಯಾಮ್ ಸುಂದರ್ ಅವರ ಮಗ ಮೋನು ಗೌತಮ್ ಜೊತೆ ನಿಶ್ಚಯಿಸಿದ್ದರು.
ರಾತ್ರಿಯ ವೇಳೆಗೆ ವಿವಾಹದ ಬಹುತೇಕ ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡಿದ್ದರಿಂದ ಮದುವೆ ಊಟ ಕೂಡ ಭರ್ಜರಿಯಾಗಿ ಸಾಗಿತ್ತು. ಇತ್ತ ವಧುವನ್ನು ಅವರ ತವರು ಮನೆಗೆ ಕಳುಹಿಸಿ ಕೊಡುವ ಶಾಸ್ತ್ರ ನಡೆಯುತ್ತಿತ್ತು. ಆದರೆ ಈ ವೇಳೆ ಇದ್ದಕ್ಕೆ ಇದ್ದಾಗೆ ಮೋನು ಗೌತಮ್ ಪ್ರಜ್ಞೆ ತಪ್ಪಿ ಕುಸಿದು ನೆಲಕ್ಕೆ ಬಿದ್ದಿದ್ದಾನೆ.
ತಕ್ಷಣ ವರನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ವರನ ಸ್ಥಿತಿ ಪರೀಕ್ಷಿಸಿ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕಾನ್ಪುರಕ್ಕೆ ಕರೆದೊಯ್ಯಲು ಸೂಚಿಸಿದರು. ಕುಟುಂಬವು ವರನನ್ನು ಚಿಕಿತ್ಸೆಗಾಗಿ ಕಾನ್ಪುರಕ್ಕೆ ಕರೆದೊಯ್ಯುತ್ತಿದ್ದಾಗ, ದಾರಿಯಲ್ಲೇ ವರ ಉಸಿರು ಚೆಲ್ಲಿದ್ದಾನೆ.