newsics.com
ಚೆನ್ನೈ: 12ನೇ ತರಗತಿಯ ಬೋರ್ಡ್ ಪರೀಕ್ಷೆಗೂ ಕೆಲವೇ ಗಂಟೆ ಮೊದಲು ವಿದ್ಯಾರ್ಥಿಯ ತಾಯಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿ ವಿಚಲಿತನಾದರೂ, ಕಣ್ಣಲ್ಲಿ ನೀರು ತುಂಬಿಕೊಂಡೇ ವಿದ್ಯಾರ್ಥಿ ಕಾಲೇಜಿಗೆ ತೆರಳಿದ್ದಾನೆ. ಅದಕ್ಕೂ ಮುನ್ನ ತಾಯಿಯ ಮೃತದೇಹಕ್ಕೆ ನಮಸ್ಕರಿಸಿದ್ದಾನೆ.
ತಿರುನಲ್ವೇಲಿ ಜಿಲ್ಲೆಯ ವಲಿಯೂರಿನ ವಿದ್ಯಾರ್ಥಿ ಸುನೀಲ್ ಕುಮಾರ್ ಅವರ ತಾಯಿ ಸುಬ್ಬಲಕ್ಷ್ಮೀ 12 ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಮೊದಲ ದಿನವಾದ ಮಾರ್ಚ್ 3ರ ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರ ತಂದೆ ಕೃಷ್ಣಮೂರ್ತಿ ಆರು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದರು. ಸುನೀಲ್ ಮತ್ತು ಅವರ ಸಹೋದರಿ ಸುಹಾಸಿನಿಯನ್ನು ಬೆಳೆಸುವ ಜವಾಬ್ದಾರಿ ಸುಬ್ಬಲಕ್ಷ್ಮೀ ಅವರ ಮೇಲಿತ್ತು.
ತೀವ್ರ ಖಿನ್ನತೆಗೆ ಒಳಗಾಗಿದ್ದರೂ, ಸುನಿಲ್ನ ಸಂಬಂಧಿಕರು ಮತ್ತು ನೆರೆಹೊರೆಯವರು ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು. ತನ್ನ ಮಕ್ಕಳಿಗೆ ಶಿಕ್ಷಣ ನೀಡುವ ತಾಯಿಯ ದೃಢಸಂಕಲ್ಪವನ್ನು ನೆನಪಿಸಿಕೊಂಡರು. ಹೊರಡುವ ಮೊದಲು ಭಾವುಕನಾದ ಸುನಿಲ್ ತನ್ನ ಹಾಲ್ ಟಿಕೆಟ್ ಅನ್ನು ಮೃತ ತಾಯಿಯ ಪಾದಗಳ ಬಳಿ ಇಟ್ಟು ಕಣ್ಣೀರು ಸುರಿಸುತ್ತಾ ಅಳಲು ಪ್ರಾರಂಭಿಸಿದ.ಕುಟುಂಬ ಸದಸ್ಯರು ಸಮಾಧಾನಪಡಿಸಿದರು.
ತಮಿಳುನಾಡು ರಾಜ್ಯ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಅವರ ತಂಡವು ಸುನಿಲ್ ಜತೆ ಮಾತನಾಡಿ, ಬೆಂಬಲ ನೀಡಿತು. ಸಚಿವರು ನಿಮ್ಮೊಂದಿಗಿದ್ದಾರೆ ಮತ್ತು ಅಗತ್ಯವಿರುವ ಎಲ್ಲಾ ಸಹಾಯವನ್ನು ಮಾಡುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಎಕ್ಸ್ ನಲ್ಲಿ ಇದೇ ಘಟನೆಯ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ತಮಿಳು ಸಮುದಾಯ ಶಿಕ್ಷಣ ನಮ್ಮ ಜೀವಕ್ಕಿಂತ ಮುಖ್ಯ ಎಂದು ಬರೆದಿದ್ದಾರೆ.
ತಮಿಳುನಾಡು ಹೈಯರ್ ಸೆಕೆಂಡರಿ ಸರ್ಟಿಫಿಕೆಟ್ ಪರೀಕ್ಷೆಯು ಮಾರ್ಚ್ 3 ರಿಂದ ಮಾರ್ಚ್ 25 ರವರೆಗೆ ನಡೆಯಲಿದ್ದು, 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ.
https://x.com/mkstalin/status/1896810241700069651
ವಿದೇಶಿ ಮಹಿಳೆಯ ತೊಡೆಯ ಮೇಲೆ ಜಗನ್ನಾಥ ದೇವರ ಟ್ಯಾಟು, ಕೇಸ್ ದಾಖಲಿಸಿದ ಪೊಲೀಸ್
India VS Australia ಇಂಡಿಯಾ vs ಆಸ್ಟ್ರೇಲಿಯಾ: ಯಾರು ಹೆಚ್ಚು ಸ್ಟ್ರಾಂಗ್?
2nd PUC Exam: ಪಿಯು ಗಣಿತ ಪರೀಕ್ಷೆಗೆ 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು
Mahapati 20 ಪತ್ನಿಯರು, 104 ಮಕ್ಕಳು! ಮನೆಯನ್ನೇ ಪುಟ್ಟ ಗ್ರಾಮವನ್ನಾಗಿಸಿದ ಮಹಾಪತಿ