newsics.com
ತಿರುಮಲ: ವೈಕುಂಠ ದ್ವಾರದ ಟಿಕೆಟ್ ಪಡೆಯುವ ಕೌಂಟರ್ ಬಳಿ ತಿರುಪತಿಯಲ್ಲಿ ಕಾಲ್ತುಳಿತ ಸಂಭವಿಸಿದ್ದು, ಭಕ್ತರ ಸಾವು-ನೋವು ಉಂಟಾಗಿದೆ.
ಕಾಲ್ತುಳಿತದಿಂದ ಇದುವರೆಗೂ ಆರು ಭಕ್ತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದೆ.
ದರ್ಶನಕ್ಕೆ 90 ಕೌಂಟರ್ಗಳಲ್ಲಿ ಟಿಕೆಟ್ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಟಿಕೆಟ್ ಕೌಂಟರ್ ಬಳಿಯೇ ನೂಕುನುಗ್ಗಲು ಉಂಟಾಗಿದೆ. ಕನಿಷ್ಠ ನಾಲ್ಕು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಟಿಕೆಟ್ಗಾಗಿ 4 ಸಾವಿರಕ್ಕೂ ಹೆಚ್ಚು ಭಕ್ತರು ನೆರೆದಿದ್ದರು.
https://twitter.com/revathitweets/status/1877027077528105334