newsics.com
ಲಕ್ನೋ: ಮಹಿಳೆಯೊಬ್ಬಳು ತನ್ನ ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಮಹಿಳೆಯ ಪತಿ ರಾಜು ಈ ಬಗ್ಗೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 87 ರ ಅಡಿಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ.
ನಾನ್ಹೆ ಪಂಡಿತ್ ಎಂಬ ಭಿಕ್ಷುಕ ತಮ್ಮ ಮನೆಗೆ ಆಗಿಂದ್ದಾಗೆ ಭೇಟಿ ನೀಡುತ್ತಿದ್ದನು. ತನ್ನ ಪತ್ನಿ ರಾಜೇಶ್ವರಿ ಜತೆ ಸಲುಗೆ ಬೆಳೆಸಿಕೊಂಡು ಇದೀಗ ಆಕೆ ಜತೆ ಪರಾರಿಯಾಗಿದ್ದಾನೆ ಎಂದು ಉಲ್ಲೇಖಿಸಿದ್ದಾರೆ.
ಜನವರಿ 3 ರಂದು ಮಾರ್ಕೆಟ್ ಗೆ ತರಕಾರಿ ತರೋದಕ್ಕೆ ತೆರಳಿದ ನಂತರ ಮರಳಿ ವಾಪಸ್ ಬಂದಿಲ್ಲ. ಪ್ರಕರಣ ದಾಖಲಿಸಿರುವ ಸ್ಥಳೀಯ ಪೊಲೀಸರು ಇಬ್ಬರ ಪತ್ತೆಗೆ ಬಲೆ ಬೀಸಿದ್ದಾರೆ.