newsics.com
ಬೆಳಗಾವಿ: ಹೆಂಡತಿ ಸರಸಕ್ಕೆ ಬಾರದ ಹಿನ್ನೆಲೆ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಗಂಡನನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಶ್ರೀಮಂತ ಹಿಟ್ನಾಳ್ ಎಂಬಾತ ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದ್ದು, ಈ ವೇಳೆ ಶ್ರೀಮಂತ ಹಿಟ್ನಾಳ್ ಪತ್ನಿ ಸಾವಿತ್ರಿ ಗಂಡನ ಕೊಲೆ ಮಾಡಿದ್ದಾಳೆ.
ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಶ್ರೀಮಂತ ಇಟ್ನಾಳ, ಪುತ್ರಿಯ ಮೇಲೆ ರಾಕ್ಷನಂತೆ ಎರಗಿದ್ದ. ಇದರಿಂದ ಬೇರೆ ದಾರಿ ಕಾಣದೇ ಪಾಪಿ ಪತಿಯನ್ನು ಕಲ್ಲು ಎತ್ತಿಹಾಕಿ ಸಾವಿತ್ರಿ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಬಳಿಕ ಶವವನ್ನು ಎರಡು ಭಾಗ ಮಾಡಿ ಬಾವಿಗೆ ಎಸೆದಿದ್ದಾಳೆ.
ಸ್ಥಳದಲ್ಲಿದ್ದ ರಕ್ತದ ಕಲೆ, ಶವ ಸಾಗಿಸಿದ್ದ ಬ್ಯಾರಲೆ ಗಳನ್ನು ಸ್ವಚ್ಛವಾಗಿ ತೊಳೆದು, ಬಟ್ಟೆಗಳನ್ನು ಸುಟ್ಟು ಹಾಕಿದ್ದಳು. ಆದಾಗ್ಯೂ ಆರೋಪಿ ಸುಳಿವು ಪತ್ತೆಮಾಡಿದ ಚಿಕ್ಕೋಡಿ ಠಾಣೆ ಪೊಲೀಸರು ಪತ್ನಿ ಸಾವಿತ್ರಿಯನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನಿಡಿದ್ದು, ಪರಿಶೀಲನೆ ನಡೆಸಿದ್ದಾರೆ.