newsics.com
ಬೆಳಗಾವಿ: ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಲಿವರ್ ಅಗತ್ಯವಿದ್ದ ರೋಗಿಗೆ ಕಸಿ ನಡೆಸಲು ಬೆಳಗಾವಿಯಿಂದ ಜೀವಂತ ಲಿವರ್ ರವಾನಿಸಲಾಗಿದೆ.
ಹೌದು, ಅಪಘಾತದಿಂದ ಗಾಯಗೊಂಡು ಹುಬ್ಬಳಿಯ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದ 16 ವರ್ಷದ ಹುಡುಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದನು. ಈತನ ಲಿವರ್ ಅನ್ನು ಬೆಂಗಳೂರಿಗೆ ರವಾನಿಸಲಾಗಿದೆ. ಬೆಳಗಾವಿಯಿಂದ ಹುಬ್ಬಳ್ಳಿವರೆಗೂ ರಸ್ತೆ ಮೂಲಕ ತೆರಳಿ ಅಲ್ಲಿಂದ ವಿಮಾನದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು.
ಬಳಿಕ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಲಿವರ್ ಕಸಿ ಅಗತ್ಯವಿದ್ದ ರೋಗಿಗೆ ಅಂಗಾಂಗ ಜೋಡಣೆಗೆ ಬಳಸಿಕೊಳ್ಳಲಾಗಿದೆ. ಯಶವಂತಪುರದಲ್ಲಿರುವ ಸ್ಪರ್ಶ ಆಸ್ಪತ್ರೆಗೆ ಝೀರೋ ಟ್ರಾಫಿಕ್ ಮೂಲಕ ಏರ್ ಪೋರ್ಟ್ ನಿಂದ ರವಾನಿಸಲಾಗಿದೆ.
ಇನ್ನು ಜೀವಂತ ಲಿವರ್ ರವಾನೆ ಹಿನ್ನೆಲೆಯಲ್ಲಿ ನಗರದ ಪೊಲೀಸರು ಹಾಗೂ ಟ್ರಾಫಿಕ್ ಪೊಲೀಸರು ಅಲರ್ಟ್ ಆಗಿದ್ದರು. ಜನನಿಬಿಡ ಏರ್ಪೋರ್ಟ್ ರಸ್ತೆ ಮೂಲಕ ಔಟರ್ ರಿಂಗ್ ರೋಡ್ನಿಂದ ಯಶವಂತಪುರಕ್ಕೆ ಸುರಕ್ಷಿತವಾಗಿ ರವಾನೆ ಮಾಡಲಾಗಿದೆ. ಎಲ್ಲಿಯೂ ಯಾವುದೇ ಸಮಸ್ಯೆ ಆಗದಂತೆ ನಿಗದಿತ ಸಮಯಕ್ಕೆ, ಸುರಕ್ಷಿತವಾಗಿ ತಲುಪುವಂತೆ ಪೊಲೀಸರು ಶ್ರಮ ವಹಿಸಿದ್ದಾರೆ