newsics.com
ತೆಲಂಗಾಣ: ವರದಕ್ಷಿಣೆ ಜತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಸೊಸೆ ದೂರಿನ ಮೇರೆಗೆ ಭದ್ರಾಚಲಂ ದೇವಸ್ಥಾನದ ಪ್ರಧಾನ ಅರ್ಚಕರನ್ನು ಅಮಾನತು ಮಾಡಲಾಗಿದೆ.
ಪ್ರಧಾನ ಅರ್ಚಕ ಸೀತಾರಾಮಾನುಜಾಚಾರ್ಯ ಹಾಗೂ ಅವರ ದತ್ತುಪುತ್ರ ಸೀತಾರಾಂ ಅವರನ್ನು ಅಮಾನತುಗೊಳಿಸಿ ದೇವಸ್ಥಾನದ ಇಒ ಆದೇಶ ಹೊರಡಿಸಿದ್ದಾರೆ.
ಸೀತಾರಾಮಾನುಜಾಚಾರ್ಯರಿಗೆ ಪುತ್ರರಿಲ್ಲದ ಕಾರಣ ಕೆಲವು ವರ್ಷಗಳ ಹಿಂದೆ ಸೀತಾರಾಮ್ ಅವರನ್ನು ದತ್ತು ಪಡೆದಿದ್ದರು. ಅವರು 2019ರಲ್ಲಿ ತಾಡೆಪಲ್ಲಿಗುಡೆಂನ ಯುವತಿಯೊಂದಿಗೆ ವಿವಾಹವಾದರು. ಮದುವೆಯಾದ ಕೆಲ ವರ್ಷಗಳ ನಂತರ ಆಕೆಗೆ ವರದಕ್ಷಿಣೆ ಕಿರುಕುಳ ಶುರುವಾಗಿದೆ. ಸೀತಾರಾಮಾನುಜಾಚಾರ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಸೊಸೆ ತಡಪಲ್ಲಿ ಗುಡೆಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾವ ತನ್ನ ದೇಹವನ್ನು ಅಸಭ್ಯವಾಗಿ ಸ್ಪರ್ಶಿಸುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಹೆಚ್ಚುವರಿ ವರದಕ್ಷಿಣೆಗಾಗಿ ಪತಿ, ಅತ್ತೆ-ಮಾವಂದಿರು ಕಿರುಕುಳ ನೀಡುತ್ತಿದ್ದರು.. ತನಗೆ ಥಳಿಸಿ 10 ಲಕ್ಷ ರೂಪಾಯಿ ತರಬೇಕು ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಸಂತ್ರಸ್ತೆಯ ದೂರಿನಂತೆ ತಾಡೇಪಲ್ಲಿಗುಡೆಂ ಠಾಣೆಯಲ್ಲಿ ಸೀತಾರಾಮಾನುಜಾಚಾರ್ಯ ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಹಲವು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೀತಾರಾಮಾನುಜಾಚಾರ್ಯ ಮತ್ತು ಅವರ ದತ್ತುಪುತ್ರ ಸೀತಾರಾಮ್ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಭದ್ರಾಚಲಂನ ಸೀತಾರಾಮಾನುಜಾಚಾರ್ಯರು ಮೊದಲಿನಿಂದಲೂ ವಿವಾದಾತ್ಮಕ ಖ್ಯಾತಿಯನ್ನು ಹೊಂದಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಆಭರಣಗಳು ಕಾಣೆಯಾದ ಘಟನೆಯಲ್ಲಿ ಇಲಾಖಾ ಕ್ರಮ ಎದುರಿಸಿದ್ದರು.