Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಈ ಪಾನೀಯ ಸೇವಿಸಿ
ಪ್ರಮುಖಆರೋಗ್ಯ

Health ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಈ ಪಾನೀಯ ಸೇವಿಸಿ

Share
2 Min Read
SHARE

newsics.com | ನ್ಯೂಸಿಕ್ಸ್

ಅಧಿಕ ರಕ್ತದೊತ್ತಡವನ್ನು (High BP) ವೈದ್ಯಕೀಯ ಕ್ಷೇತ್ರದಲ್ಲಿ ‘ಸೈಲೆಂಟ್ ಕಿಲ್ಲರ್’ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಯಾವುದೇ ಮುನ್ಸೂಚನೆ ನೀಡದೆ ನಿಧಾನವಾಗಿ ದೇಹದ ಆರೋಗ್ಯವನ್ನು ಹದಗೆಡಿಸುತ್ತದೆ. ಸಿಸ್ಟೊಲಿಕ್ 120 ಮತ್ತು ಡಯಾಸ್ಟೊಲಿಕ್ 80 mmHg ಇದ್ದರೆ ಅದನ್ನು ಸಾಮಾನ್ಯ ರಕ್ತದೊತ್ತಡವೆಂದು ಪರಿಗಣಿಸಲಾಗುತ್ತದೆ. ರಕ್ತದೊತ್ತಡ ಮಿತಿ ಮೀರಿದರೆ ತಲೆನೋವು, ತಲೆತಿರುಗುವಿಕೆ, ದೌರ್ಬಲ್ಯ ಮತ್ತು ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ.

ಈ ಸಮಸ್ಯೆಯನ್ನು ಕೇವಲ ಮಾತ್ರೆಗಳಿಂದ ಮಾತ್ರವಲ್ಲದೆ, ಆರೋಗ್ಯಕರ ಜೀವನಶೈಲಿ ಹಾಗೂ ಉತ್ತಮ ಆಹಾರ ಪದ್ಧತಿಯಿಂದಲೂ ನಿಯಂತ್ರಿಸಬಹುದು. ಈ ಕುರಿತು ಪ್ರಸಿದ್ಧ ಯೋಗ ತಜ್ಞೆ ಡಾ. ಹಂಸ ಯೋಗೇಂದ್ರ ಅವರು ಅಮೂಲ್ಯ ಸಲಹೆಯೊಂದನ್ನು ನೀಡಿದ್ದು, ಪ್ರತಿದಿನ ಬೆಳಗಿನ ನಡಿಗೆಯ ಬಳಿಕ ನೆಲ್ಲಿಕಾಯಿ (Amla) ಮತ್ತು ಓಮದ ಕಾಳು (Ajwain) ಬಳಸಿ ತಯಾರಿಸಿದ ಪಾನೀಯವನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಹತೋಟಿಯಲ್ಲಿಡಬಹುದು ಎಂದು ತಿಳಿಸಿದ್ದಾರೆ.

ನೆಲ್ಲಿಕಾಯಿ ಹೈ ಬಿಪಿಯನ್ನು ಹೇಗೆ ತಡೆಯುತ್ತದೆ? ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್ ಹಾಗೂ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇದು ರಕ್ತನಾಳಗಳನ್ನು ಬಲಪಡಿಸಿ ಸುಗಮ ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ, ದೇಹದಲ್ಲಿ ಸೋಡಿಯಂ ಮಟ್ಟವನ್ನು ನಿಯಂತ್ರಿಸುವ ಮೂಲಕ ಬಿಪಿ ಏರಿಕೆಯಾಗದಂತೆ ತಡೆಯುತ್ತದೆ.

ಅಜ್ವೈನ್ ನೀರಿನ ಗುಣಗಳು: ಅಜ್ವೈನ್ ಕಾಳಿನಲ್ಲಿ ಹೃದಯದ ಆರೋಗ್ಯವನ್ನು ಕಾಪಾಡುವ ಥೈಮೋಲ್ ಅಂಶವಿದೆ. ಇದು ದೇಹದಲ್ಲಿರುವ ಹೆಚ್ಚುವರಿ ನೀರು ಮತ್ತು ಸೋಡಿಯಂ ಅನ್ನು ಹೊರಹಾಕಲು ನೈಸರ್ಗಿಕ ಮೂತ್ರವರ್ಧಕದಂತೆ ಕೆಲಸ ಮಾಡುತ್ತದೆ. ಇದರೊಂದಿಗೆ ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಅಂಶಗಳು ರಕ್ತನಾಳಗಳನ್ನು ಸಡಿಲಗೊಳಿಸಿ ಬಿಪಿ ಸಾಮಾನ್ಯ ಸ್ಥಿತಿಗೆ ಬರಲು ನೆರವಾಗುತ್ತವೆ.

ನೆಲ್ಲಿಕಾಯಿ – ಅಜ್ವೈನ್ ಜ್ಯೂಸ್ ತಯಾರಿಸುವ ವಿಧಾನ

  • ಅಗತ್ಯವಿರುವ ಸಾಮಗ್ರಿಗಳು: 2-3 ತಾಜಾ ನೆಲ್ಲಿಕಾಯಿ, 1 ಚಮಚ ಅಜ್ವೈನ್, 1 ಗ್ಲಾಸ್ ನೀರು, ರುಚಿಗೆ ತಕ್ಕಷ್ಟು ನಿಂಬೆರಸ ಹಾಗೂ ಜೇನುತುಪ್ಪ.
  • ಮಾಡುವ ಕ್ರಮ: ಮೊದಲಿಗೆ ನೆಲ್ಲಿಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನೀರಿನೊಂದಿಗೆ ಮಿಕ್ಸಿಯಲ್ಲಿ ರುಬ್ಬಿ ರಸ ತೆಗೆಯಿರಿ. ನಂತರ ಅಜ್ವೈನ್ ಅನ್ನು ಬಾಣಲೆಯಲ್ಲಿ ಹುರಿದು ಪುಡಿ ಮಾಡಿ ಈ ಜ್ಯೂಸ್‌ಗೆ ಸೇರಿಸಿ. ರುಚಿಗಾಗಿ ಸ್ವಲ್ಪ ನಿಂಬೆರಸ ಹಾಗೂ ಜೇನುತುಪ್ಪ ಬೆರೆಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಬಿಪಿ ಕಂಟ್ರೋಲ್ಗೆ ಬರುವುದಲ್ಲದೆ, ಜೀರ್ಣಶಕ್ತಿ ಹೆಚ್ಚುತ್ತದೆ ಮತ್ತು ಮಧುಮೇಹವೂ ನಿಯಂತ್ರಣಕ್ಕೆ ಬರುತ್ತದೆ.

(ಸೂಚನೆ: ಈ ಮಾಹಿತಿಯು ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ. ಅಧಿಕ ರಕ್ತದೊತ್ತಡಕ್ಕೆ ಈಗಾಗಲೇ ಮದ್ದು ತೆಗೆದುಕೊಳ್ಳುತ್ತಿರುವವರು ವೈದ್ಯರ ಸಲಹೆ ಪಡೆದೇ ಇಂತಹ ಮನೆಮದ್ದುಗಳನ್ನು ಬಳಸುವುದು ಒಳ್ಳೆಯದು.)

Xbox ವಿಶ್ವದಾದ್ಯಂತ ಕೈಕೊಟ್ಟ ಎಕ್ಸ್‌ಬಾಕ್ಸ್ ಸರ್ವರ್; ಆನ್‌ಲೈನ್ ಗೇಮ್‌ಗಳನ್ನು ಆಡಲಾಗದೆ ಗೇಮರ್‌ಗಳ ಪರದಾಟ

TAGGED:#Health #High Bp #Low Bp #News #Newsics
Share This Article
Facebook Twitter Copy Link Print
Previous Article Xbox ವಿಶ್ವದಾದ್ಯಂತ ಕೈಕೊಟ್ಟ ಎಕ್ಸ್‌ಬಾಕ್ಸ್ ಸರ್ವರ್; ಆನ್‌ಲೈನ್ ಗೇಮ್‌ಗಳನ್ನು ಆಡಲಾಗದೆ ಗೇಮರ್‌ಗಳ ಪರದಾಟ
Next Article Namma Metro ಯೆಲ್ಲೋ ಲೈನ್ ಮೆಟ್ರೋ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ, ತಾತ್ಕಾಲಿಕವಾಗಿ ಮೆಟ್ರೋ ಸಂಚಾರ ಸ್ಥಗಿತ

Popular Posts

Rapido Ride Cancellation Fine ಸರ್ಕಾರದ ಹೊಸ ನಿಯಮ; ಕ್ಯಾಬ್ ರೈಡ್ ರದ್ದುಗೊಳಿಸಿದರೆ ಚಾಲಕರಿಗೆ ಭಾರಿ ದಂಡದ ಬಿಸಿ

2 Min Read

Commonwealth Games 2026: ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಬೆಳ್ಳಿಯ ಪದಕ ತಂದುಕೊಟ್ಟ ಜ್ಞಾನೇಶ್ವರಿ ಯಾದವ್

1 Min Read

Ram Mandir ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ಎಸ್‌ಐಟಿ ನೇತೃತ್ವ ವಹಿಸಲಿರುವ ಐಪಿಎಸ್ ಅಧಿಕಾರಿ ಎಸ್. ಕಿರಣ್

2 Min Read

Namma Metro ಯೆಲ್ಲೋ ಲೈನ್ ಮೆಟ್ರೋ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ, ತಾತ್ಕಾಲಿಕವಾಗಿ ಮೆಟ್ರೋ ಸಂಚಾರ ಸ್ಥಗಿತ

1 Min Read

You Might Also Like

ಪ್ರಮುಖSportsದೇಶ

Xbox ವಿಶ್ವದಾದ್ಯಂತ ಕೈಕೊಟ್ಟ ಎಕ್ಸ್‌ಬಾಕ್ಸ್ ಸರ್ವರ್; ಆನ್‌ಲೈನ್ ಗೇಮ್‌ಗಳನ್ನು ಆಡಲಾಗದೆ ಗೇಮರ್‌ಗಳ ಪರದಾಟ

2 Min Read
ಕರ್ನಾಟಕಪ್ರಮುಖ

Rain Alert ವಾಯುಭಾರ ಕುಸಿತದ ಪ್ರಭಾವ; ಕರ್ನಾಟಕದ ವಿವಿಧೆಡೆ ಮಳೆರಾಯನ ಆರ್ಭಟ

2 Min Read
ಪ್ರಮುಖದೇಶ

Mekedatu Project ಮೇಕೆದಾಟು ಯೋಜನೆಗೆ ತಮಿಳುನಾಡು ಅನುಮತಿ ಅಗತ್ಯವಿಲ್ಲ; ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ

2 Min Read
ಪ್ರಮುಖCrimeದೇಶ

Tragedy ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಸೀಟ್ ಕೈತಪ್ಪಿದ್ದಕ್ಕೆ ಮನನೊಂದು ಯುವತಿ ಆತ್ಮಹ*ತ್ಯೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?