newsics.com| ನ್ಯೂಸಿಕ್ಸ್
ಗೆಳೆಯ ವೈಶಾಖ್ ಸಾವಿನ ಬಳಿಕ ಕೃಷಿ ತಾಪಂಡ ಮತ್ತೆ ಪೋಸ್ಟ್ ಹಂಚಿಕೊಂಡಿದ್ದಾರೆ. ತಾವು ದುಃಖದಲ್ಲಿರುವ ಫೋಟೋಗಳನ್ನ ಹಂಚಿಕೊಂಡಿರುವ ಕೃಷಿ ತಾಪಂಡ, ”ದುಃಖದ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
”ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ… ಅದರ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ. ಆಯ್ಕೆ ಮಾಡಿಕೊಂಡದ್ದರಿಂದಲ್ಲ… ಬೇರೆ ದಾರಿಯೇ ಇಲ್ಲದ ಕಾರಣ” ಎಂದು ಇನ್ಸ್ಟಾಗ್ರಾಮ್ನಲ್ಲಿ ಕೃಷಿ ತಾಪಂಡ ಪೋಸ್ಟ್ ಶೇರ್ ಮಾಡಿದ್ದಾರೆ.
ಕೃಷಿ ತಾಪಂಡ ಅವರ ಪೋಸ್ಟ್ಗೆ ಕಾವ್ಯ ಗೌಡ ರಿಯಾಕ್ಟ್ ಮಾಡಿದ್ದಾರೆ. ಕೃಷಿ ತಾಪಂಡಗೆ ಸಾಂತ್ವನ ಹೇಳಿದ್ದಾರೆ. ”ಕೃಷಿ.. ಈಗ ಪರಿಸ್ಥಿತಿ ತುಂಬಾ ಭಾರವೆನಿಸುತ್ತಿರಬಹುದು ಎಂಬುದು ನನಗೆ ತಿಳಿದಿದೆ. ಆದರೆ ಈ ಕಷ್ಟದ ಸಮಯ ಶಾಶ್ವತವಾಗಿ ಉಳಿಯುವುದಿಲ್ಲ. ಎಲ್ಲವನ್ನೂ ಇಂದೇ ಬಗೆಹರಿಸಿಕೊಳ್ಳಬೇಕೆಂದೇನೂ ಇಲ್ಲ. ಒಂದೊಂದೇ ಹೆಜ್ಜೆ ಇಡಿ. ನಿಮ್ಮ ಬಗ್ಗೆ ಸಾಫ್ಟ್ ಆಗಿರಿ. ಚೇತರಿಕೆಯು ಯಾವಾಗಲೂ ತ್ವರಿತವಾಗಿರುವುದಿಲ್ಲ, ಆದರೆ ಮುಂದಕ್ಕೆ ಇಡುವ ಪ್ರತಿಯೊಂದು ಸಣ್ಣ ಹೆಜ್ಜೆಯೂ ಮುಖ್ಯವಾಗಿರುತ್ತದೆ. ದಯವಿಟ್ಟು ಭರವಸೆ ಕಳೆದುಕೊಳ್ಳಬೇಡಿ. ಈಗ ಅವು ಕಾಣಿಸದಿದ್ದರೂ, ಮುಂದಿನ ದಿನಗಳಲ್ಲಿ ಸುಂದರ ಕ್ಷಣಗಳು ಕಾದಿವೆ. ಯಾರಾದರೂ ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳಬೇಕೆನಿಸಿದಾಗ ನಾನು ನಿಮ್ಮೊಂದಿಗಿರುತ್ತೇನೆ. ಧೈರ್ಯವಾಗಿರಿ, ನಿಮ್ಮನ್ನು ನೀವು ನಂಬಿ ಮತ್ತು ಸಮಯ ಕಳೆದಂತೆ ಪರಿಸ್ಥಿತಿ ಸುಧಾರಿಸಬಹುದು ಎಂಬುದನ್ನು ನೆನಪಿಡಿ… ಸಾಯಿ ರಾಮ್” ಎಂದು ಕಿರುತೆರೆ ನಟಿ ಕಾವ್ಯ ಗೌಡ ಕಾಮೆಂಟ್ ಮಾಡಿದ್ದಾರೆ.
”ಮೋರ್ ಪವರ್ ಟು ಯೂ”, ”ಮೋರ್ ಸ್ಟ್ರಾಂಗ್ ಟು ಯೂ”, ”ಸಮಯ ಎಲ್ಲವನ್ನ ವಾಸಿ ಮಾಡುತ್ತದೆ”, ”ದೇವರ ಮೇಲೆ ನಂಬಿಕೆ ಇಡಿ”, ”ನೀವು ಸ್ಟ್ರಾಂಗ್ ಆಗಿದ್ದೀರಿ. ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡಿ” ಎಂದು ಅನೇಕರು ಕೃಷಿ ತಾಪಂಡ ಪೋಸ್ಟ್ಗೆ ರಿಯಾಕ್ಟ್ ಮಾಡಿದ್ದಾರೆ.