newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಈ ದಿನ- ನಿತ್ಯ ಪಂಚಾಂಗ
28-08-2024 ಬುಧವಾರ
ದಿನ ವಿಶೇಷ:
* ಶ್ರೀಕೃಷ್ಣ ಸರಸ್ವತಿ ಸ್ವಾಮಿ ಮಹಾರಾಜ ಪುಣ್ಯತಿಥಿ, ಕೊಲ್ಲಾಪುರ
***
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 28/08/2024
ತಿಂಗಳು – ಆಗಸ್ಟ್
ಬಣ್ಣ – ಹಸಿರು
ವಾರ – ಬುಧವಾರ
ತಿಥಿ – ದಶಮಿ 25:18:54*
ಪಕ್ಷ – ಕೃಷ್ಣ
ನಕ್ಷತ್ರ – ಮೃಗಶಿರ 15:51:53
ಯೋಗ – ವಜ್ರ 19:10:15
ಕರಣ – ವಾಣಿಜ 13:21:43
ಕರಣ – ವಿಷ್ಟಿ (ಭದ್ರ) 25:18:54*
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಭಾದ್ರಪದ
ಚಂದ್ರ ರಾಶಿ ಮಿಥುನ
ಸೂರ್ಯ ರಾಶಿ ಸಿಂಹ
ಋತು- ವರ್ಷಾ
ಸೂರ್ಯೋದಯ 06:09:30
ಸೂರ್ಯಾಸ್ತ 18:31:45
ಹಗಲಿನ ಅವಧಿ 12:22:15
ರಾತ್ರಿಯ ಅವಧಿ 11:37:47
ಚಂದ್ರಾಸ್ತ 14:20:22
ಚಂದ್ರೋದಯ 25:49:05*
ರಾಹು ಕಾಲ 12:21 – 13:53 ಅಶುಭ
ಯಮಗಂಡ ಕಾಲ 07:42 – 09:15 ಅಶುಭ
ಗುಳಿಕ ಕಾಲ. 10:48 – 12:21
ಅಭಿಜಿತ್ 11:56 – 12:45 ಅಶುಭ
ದುರ್ಮುಹೂರ್ತ. 11:56 – 12:45 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಗುರಿ ಹಾಗೂ ಉದ್ದೇಶದ ಜತೆಗೆ ಸತತ ಪ್ರಯತ್ನ ಮತ್ತು ಧೈರ್ಯಗಳು ಮೇಳೈಸಿದರಷ್ಟೇ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂಬುದು ಸದಾ ನೆನಪಿರಲಿ.
– ಜಾನ್ ಎಫ್. ಕೆನಡಿ
***
ಈ ದಿನದ ಸುಭಾಷಿತ
ಅನ್ಯಮಾಶ್ರಯಂತೇ ಲಕ್ಷ್ಮೀಃ
ತ್ವನ್ಯಮನ್ಯಂ ಚ ಮೇದಿನೀ |
ಅನನ್ಯಗಾಮಿನೀ ಪುಂಸಾಂ
ಕೀರ್ತಿರೇಕಾ ಪತಿವ್ರತಾ ||
(ಸುಭಾಷಿತ ರತ್ನ ಭಾಂಡಾಗಾರ)
ಐಶ್ವರ್ಯ ಮತ್ತೊಬ್ಬನನ್ನು ಆಶ್ರಯಿಸುತ್ತದೆ. ಭೂಮಿ ಒಬ್ಬನಿಂದ ಮತ್ತೊಬ್ಬನನ್ನು ಸೇರುತ್ತದೆ. ಆದರೆ ಇನ್ನೊಬ್ಬನೆಡೆಗೆ ಹೋಗದೆ ಪತಿವ್ರತೆಯಂತೆ ನಿಷ್ಠೆ ಹೊಂದಿರುವುದು ಕೀರ್ತಿ ಎಂಬುದು ಒಂದೇ.
***
ಈ ದಿನದ ಇತಿಹಾಸ
* ಸೈಂಟಿಫಿಕ್ ಅಮೇರಿಕನ್ ನ ಮೊದಲ ಸಂಚಿಕೆಯನ್ನು ಆಗಸ್ಟ್ 28, 1845 ರಂದು ಪ್ರಕಟಿಸಲಾಯಿತು.
* ಆಗಸ್ಟ್ 28, 1963 ರಂದು ವಾಷಿಂಗ್ ಟನ್ ಡಿ.ಸಿ.ಯಲ್ಲಿ ನಡೆದ ಶಾಂತಿಯುತ ನಾಗರಿಕ ಹಕ್ಕುಗಳ ರ್ಯಾಲಿಯಲ್ಲಿ 2 ಲಕ್ಷ ಮಂದಿ ಪಾಲ್ಗೊಂಡರು. ಲಿಂಕನ್ ಸ್ಮಾರಕದ ಎದುರು ನಡೆದ ರ್ಯಾಲಿಯನ್ನು ಉದ್ದೇಶಿಸಿ ಡಾ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಭಾಷಣ ಮಾಡಿದರು. ಅವರ ಭಾಷಣ ‘ನನಗೆ ಕನಸಿದೆ’ ಭಾಷಣ ಎಂದೇ ಖ್ಯಾತಿ ಪಡೆಯಿತು.
* ಮುಖ್ಯಮಂತ್ರಿ ಚಂದ್ರು – ಚಂದ್ರು ಅವರು ಹುಟ್ಟಿದ್ದು ಆಗಸ್ಟ್ 28, 1953 ರಂದು ನೆಲಮಂಗಲ ತಾಲೂಕಿನ ಹೊನ್ನಸಂದ್ರದಲ್ಲಿ. ಮುಖ್ಯಮಂತ್ರಿ ಚಂದ್ರು ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಇವರ ಮೂಲ ಹೆಸರು ಚಂದ್ರಶೇಖರ್. ರಾಜಕೀಯದಲ್ಲೂ ಗಣನೀಯ ಹೆಸರಾಗಿರುವ ಚಂದ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದಾರೆ. ಕನ್ನಡ ಸಿನಿಮಾಗಳಲ್ಲಿ, ಹಾಸ್ಯ, ಖಳ, ಪೋಷಕ ನಟ – ಹೀಗೆ ಹಲಬಗೆಯ ಪಾತ್ರ್ಗಗಳನ್ನು ಅಭಿನಯಿಸಿ, ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅಸಂಖ್ಯಾತ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ವಿಶಿಷ್ಟವಾದ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ನಾಟಕ ಆಕಾಡೆಮಿ ಪ್ರಶಸ್ತಿ, ರಂಗಭೂಮಿ ಮತ್ತು ಚಲನಚಿತ್ರ ಪ್ರಶಸ್ತಿಗಳೇ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಮುಖ್ಯಮಂತ್ರಿ ಅವರಿಗೆ ಸಂದಿವೆ. ಗುಲ್ಬರ್ಗಾ ವಿಶ್ವವಿದ್ಯಾಲಯವು ಡಾಕ್ಟರೇಟ್ ಗೌರವವನ್ನು ಪ್ರಧಾನಿಸಿದೆ. ಮುಖ್ಯಮಂತ್ರಿ ಚಂದ್ರು ಅವರಿಂದ ಕಲಾರಂಗಕ್ಕೆ, ಕನ್ನಡ ಭಾಷೆಗೆ ಮತ್ತು ಸಮಾಜಕ್ಕೆ ಉತ್ತಮ ಸೇವೆ ಲಭ್ಯವಾಗುತ್ತಿರಲಿ.