newsics.com/ನ್ಯೂಸಿಕ್ಸ್
ನಟ ದರ್ಶನ್ ತೂಗುದೀಪ ಅವರು ಜೈಲಿನಲ್ಲಿದ್ದಾರೆ. ಈಗ ಕನಕಪುರದ ಕುರುಬರಹಳ್ಳಿಗೆ ಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದರು. ಆ ವೇಣೆ ದರ್ಶನ್ ಅಭಿಮಾನಿಗಳು ‘ಡಿ ಬಾಸ್’, ‘ಡಿ ಬಾಸ್’ ಎಂದು ಕೂಗಿ, ಮನವಿ ಮಾಡಿದ್ದಾರೆ.
ಸಿಎಂ ಆದ್ಮೇಲೆ ಡಿಕೆ ಶಿವಕುಮಾರ್ ಅವರು ಜೀರೋ ಟ್ರಾಫಿಕ್ ಬಿಟ್ಟು, ಮೆಟ್ರೋದಲ್ಲಿ ಒಂದಿಷ್ಟು ಕಿಮೀ ಹೋಗಿ, ಆ ಬಳಿಕ ಕನಕಪುರಕ್ಕೆ ಹೋಗಿದ್ದರು. ಆ ವೇಳೆ ಅವರಿಗೆ ಮೆಣಸು, ಬೆಳ್ಳುಳ್ಳಿ, ಸೇಬು ಹಣ್ಣಿನ ಹಾರ ಕೂಡ ಹಾಕಲಾಗಿತ್ತು.
ತಮ್ಮ ಸ್ವಕ್ಷೇತ್ರ ಕನಕಪುರದಲ್ಲಿ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು, ಒಂದಿಷ್ಟು ಯೋಜನೆಗಳ ಬಗ್ಗೆ ಕೂಡ ಹೇಳಿಕೊಂಡರು. ಆಗ ಅಲ್ಲಿದ್ದ ದರ್ಶನ್ ಅಭಿಮಾನಿಗಳು “ಜೈ ಡಿ ಬಾಸ್”, “ಜೈ ಡಿ ಬಾಸ್” ಎಂದು ಹೇಳಿದ್ದಾರೆ. “ದರ್ಶನ್ ಅವರನ್ನು ಬಿಡಿಸಿ” ಎಂದು ಅವರು ಮನವಿ ಮಾಡಿದ್ದಾರೆ.
ದರ್ಶನ್ ಅಭಿಮಾನಿಗಳ ಮಾತು ಕೇಳಿ ಡಿಕೆಶಿ ಅವರು, “ಯಾವ್ ಬಾಸೂ ಇಲ್ಲ, ಸುಮ್ನಿರಯ್ಯ” ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಒಮ್ಮೆ ಜಾಮೀನು ಪಡೆದು, ದರ್ಶನ್ ಮತ್ತೆ ಜೈಲಿಗೆ ಬಂದು ಒಂದು ವರ್ಷವಾಗಿದೆ. ಅವರು ಯಾವಾಗ ಹೊರಗಡೆ ಬರ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಪತ್ನಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ!