newsics.com
ಡೆಹ್ರಾಡೂನ್: ಉತ್ತರಾಖಂಡ್ನ ಉದಮ್ ಸಿಂಗ್ ನಗರದಲ್ಲಿ ವ್ಯಕ್ತಿಯೊಬ್ಬ ಪತ್ನಿಯನ್ನು ಇನ್ಸುರೆನ್ಸ್ ಹಣಕ್ಕಾಗಿ ಹಾವಿನ ವಿಷವಿಕ್ಕಿ ಕೊಂದ ಒಂದು ಘಟನೆ ನಡೆದಿದೆ.
ಪತಿ ಶುಭಂ ಚೌದರಿ ಎನ್ನುವ ಪಾಪಿ ಪತಿಯೇ ಇಂತಹ ನೀಚ ಕೆಲಸಕ್ಕೆ ಕೈ ಹಾಕಿದ್ದಾನೆ. ಅದಕ್ಕೆ ಕಾರಣ ಪತ್ನಿಯ ಹೆಸರಲ್ಲಿದ್ದು 25 ಲಕ್ಷ ರೂಪಾಯಿ ಇನ್ಸೂರೆನ್ಸ್ ಹಣ.
ಸಲೋನಿ ಚೌದರಿ ಇತ್ತೀಚೆಗಷ್ಟೇ 25 ಲಕ್ಷ ರೂಪಾಯಿ ಇನ್ಸೂರೆನ್ಸ್ ಹಣ ಪಡೆದುಕೊಂಡಿದ್ದರು. ಅದನ್ನು ಲಪಾಟಿಯಸಲೆಂದು ಶುಭಂ ಚೌದರಿ ಇಂಜೆಕ್ಷನ್ ಮೂಲಕ ಹಾವಿನ ವಿಷವನ್ನು ಹೆಂಡತಿ ದೇಹಕ್ಕೆ ಇಳಿಸಿದ್ದಾನೆ. ಸಲೋನಿ ಚೌದರಿ ಸಹೋದರ ತನ್ನ ಸಹೋದರಿಯ ಸಾವಿನ ಕುರಿತು ಸಂಶಯ ಬಂದು ಪೊಲೀಸರಿಗೆ ದೂರು ನೀಡಿದ್ದಾನೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ