newsics.com | ನ್ಯೂಸಿಕ್ಸ್
ಇಂದು ಜುಲೈ 8, ಬುಧವಾರ, ಬುಧಾದಿತ್ಯ ಯೋಗ, ಸುನಾಫ ಯೋಗ, ಗಜಕೇಸರಿ ಯೋಗ ಸೇರಿದಂತೆ ಅನೇಕ ಶುಭ ಯೋಗಗಳು ಸೃಷ್ಟಿಯಾಗಲಿವೆ. ಇದರಿಂದಾಗಿ ಅನೇಕ ಶುಭ ಯೋಗಗಳು ರೂಪಗೊಳ್ಳುತ್ತಿವೆ. ಇದರಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಲಿದೆ. ಕೆಲವು ರಾಶಿಗಳ ಜನರು ಈ ಶುಭ ಯೋಗಗಳ ಲಾಭವನ್ನು ಪಡೆಯಲಿದ್ದಾರೆ. ಈ ರಾಶಿಯವರ ಕೆಲಸ ಮತ್ತು ವ್ಯಾಪಾರದಲ್ಲಿ ವೃದ್ದಿಯೊಂದಿಗೆ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಇಂದು ಚಂದ್ರನ ಸಂಚಾರವು ಮೀನ ರಾಶಿಯ ನಂತರ ಮೇಷ ರಾಶಿಯಲ್ಲಿ ಸಂಭವಿಸುವುದು. ಹಾಗೆ ಬುಧ ಗ್ರಹವು ತನ್ನದೇ ರಾಶಿಯಾದ ಮಿಥುನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುವುದರೊಂದಿಗೆ ಸೂರ್ಯನೊಂದಿಗೆ ಸಂಯೋಗಗೊಳ್ಳಲಿದ್ದು, ಇದರಿಂದ ಬುಧಾದಿತ್ಯ ಯೋಗ ನಿರ್ಮಾಣವಾಗುವುದು
ಮೇಷ ರಾಶಿಗೆ ಸೇರಿದ ಜನರಿಗೆ ಜುಲೈ 8ರ ದಿನ ಆರಂಭದಲ್ಲಿ ಸ್ವಲ್ಪ ಸಮಸ್ಯೆಗಳಿಂದ ಕೂಡಿರುವುದಾದರೂ, ನಂತರ ಲಾಭದಾಯಕವಾಗಿರುವುದು. ನಿಮ್ಮ ಕೆಲಸಗಳಲ್ಲಿ ಪ್ರಗತಿಯನ್ನು ಹೊಂದುವಿರಿ ಮತ್ತು ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ದೊಡ್ಡ ಅವಕಾಶಗಳ ಪ್ರಾಪ್ತಿಯಾಗುವುದು. ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಭಾರಿ ಲಾಭ ದೊರಕಲಿದೆ ಮತ್ತು ವಿದ್ಯುತ್ ಉಪಕರಣಗಳಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಗಳಿಸುವಿರಿ. ಇಂದು ದ್ವಿತಿಯಾರ್ಧವು ನಿಮಗೆ ವಿಶೇಷವಾಗಿ ಲಾಭದಾಯಕವಾಗಿರುವುದು. ವೈವಾಹಿಕ ಜೀವನ ಮತ್ತು ಪ್ರೇಮ ಸಂಬಂಧಕ್ಕೆ ಸಂಬಂಧಿಸಿದಂತೆ ಮೇಷ ರಾಶಿಗೆ ಸೇರಿದ ಜನರಿಗೆ ಉತ್ತಮ ದಿನವಾಗಿರುವುದು. ಆದರೆ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿರಿಸುವುದು ಅಗತ್ಯ.
ಶ್ರೀ ರಾಮ ರಕ್ಷಾ ಸ್ತೋತ್ರವನ್ನು ಪಠಿಸಿ ಮತ್ತು ಗಣೇಶನಿಗೆ ಗರಿಕೆ ಹುಲ್ಲನ್ನು ಅರ್ಪಿಸುವುದರಿಂದ ಶುಭವಾಗುವುದು.
ಮಿಥುನ ರಾಶಿಗೆ ಸೇರಿದ ಜನರಿಗೆ ಬುಧವಾರದ ದಿನ ಬುಧನು ಮಿಥುನ ರಾಶಿಯಲ್ಲಿ ಚಲಿಸುವುದರಿಂದ ನಿಮಗೆ ಹೆಚ್ಚಿನ ಶುಭ ಉಂಟಾಗಲಿದೆ. ಈ ರಾಶಿಯಲ್ಲಿ ಸೂರ್ಯ ಮತ್ತು ಬುಧನಿಂದ ಸರ್ಕಾರಿ ಕೆಲಸಗಳಲ್ಲಿ ನಿಮಗೆ ಲಾಭ ದೊರಕಬಹುದು. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನಿಮ್ಮ ಕೆಲಸಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಆರ್ಥಿಕ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ಸು ಕಾಣುವಿರಿ. ಜೀವನದಲ್ಲಿ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗುವುದು. ಅಕ್ಕ ಪಕ್ಕದ ಮನೆಯವರು ಮತ್ತು ಸ್ನೇಹಿತರ ಸಂಪೂರ್ಣ ಬೆಂಬಲವನ್ನು ಗಳಿಸುವಿರಿ. ಹಾಗೆ ಶಿಕ್ಷಣ ಮತ್ತು ಕೆಲಸಕ್ಕೆ ಸಂಬಂಧಿಸಿದಂತೆ ಜೀವನದಲ್ಲಿ ಮುಂದೆ ಸಾಗುವ ಉತ್ತಮ ಅವಕಾಶ ಲಭಿಸಲಿದೆ. ಜೀವನದಲ್ಲಿ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲದಿಂದ ನಿಮ್ಮ ಮನೋಬಲ ಮತ್ತು ಉತ್ಸಾಹ ಹೆಚ್ಚಾಗುವುದು. ಹೊಸ ಜ್ಞಾನವನ್ನು ಪಡೆಯುವುದರಿಂದ ಭವಿಷ್ಯದಲ್ಲಿ ಭಾರಿ ಲಾಭ ದೊರಕುವುದು. ದುರ್ಗಾದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಮತ್ತು ದೇವಿಯ 32 ನಾಮ ಸ್ತೋತ್ರವನ್ನು ತಪ್ಪದೆ ಪಠಿಸಿ.
ಕರ್ಕಾಟಕ ರಾಶಿಗೆ ಸೇರಿದ ಜನರಿಗೆ ಈ ದಿನ ಉತ್ತಮವಾಗಿರುವುದು. ಇಂದಿನ ವೃತ್ತಿ ಜೀವನದಲ್ಲಿ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲ ಮತ್ತು ಮಾರ್ಗದರ್ಶನವನ್ನು ಗಳಿಸುವಿರಿ. ನಿಮ್ಮ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಾಧ್ಯವಾಗುವುದು. ಕೆಲಸಕ್ಕೆ ಸಂಬಂಧಿಸಿದಂತೆ ಉತ್ತಮ ದಿನವಾಗಿರುವುದು. ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದುವಿರಿ.
ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಲಾಭದಾಯಕ ದಿನವಾಗಿರುವುದು. ವ್ಯಾಪಾರದಲ್ಲಿ ಲಾಭ ಪ್ರಾಪ್ತಿಯಾಗಲಿದೆ. ಈ ಮೊದಲೇ ಹೂಡಿಕೆಯನ್ನು ಮಾಡಿದ್ದರೆ, ನಿಮಗೆ ಉತ್ತಮ ಲಾಭ ದೊರಕುವುದು. ನಿಮ್ಮ ರಾಶಿಯಲ್ಲಿ ಗುರುವಿನ ಸಂಚಾರದಿಂದ ನಿಮ್ಮ ಮನಸ್ಸು ಶಿಕ್ಷಣ ಮತ್ತು ಆಧ್ಯಾತ್ಮಿಕದ ಕಡೆಗೆ ಹೆಚ್ಚಾಗಿರುವುದು. ಹಾಗೆ ನಿಮ್ಮ ಗೌರವ, ಖ್ಯಾತಿ ವೃದ್ದಿಯಾಗಲಿದೆ. ನಿಮ್ಮ ರಾಶಿಯಲ್ಲಿ ಗುರುವಿನ ಸಂಚಾರದಿಂದಾಗಿ ಗುರುವಿನ ಮಂತ್ರವಾದ ಓಂ ಗ್ರಾಂ ಗ್ರೀಂ ಗ್ರೌಂ ಸಃ ಗುರವೇ ನಮಃ ಮಂತ್ರವನ್ನು ಪಠಿಸುವುದರಿಂದ ಲಾಭ ದೊರಕುವುದು.
ಸಿಂಹ ರಾಶಿಯಲ್ಲಿ ಶುಕ್ರನ ಸಂಚಾರದಿಂದಾಗಿ ನಿಮ್ಮ ಸುಖ, ಸಮೃದ್ಧಿ ಮತ್ತು ಆಕರ್ಷಣೆ ಇಂದು ಹೆಚ್ಚಾಗುವುದು. ಹಾಗೆ ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವುದರೊಂದಿಗೆ ನಿಮ್ಮ ಸುಖ, ಸಮೃದ್ಧಿಯಾಗಿ ಖರ್ಚನ್ನು ಮಾಡುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಬುದ್ಧಿವಂತಿಕೆಯಿಂದ ಅಪಾರ ಲಾಭವನ್ನು ಗಳಿಸಲು ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ದೊರಕುವುದು. ಅದೃಷ್ಟದ ಸಹಾಯದಿಂದಾಗಿ ನಿಮ್ಮ ಕೆಲಸಗಳಲ್ಲಿ ಲಾಭ ಮತ್ತು ಯಶಸ್ಸನ್ನು ಗಳಿಸುವ ಸಂಭವವಿದೆ. ನೀವು ಇಂದು ವಿಭಿನ್ನವಾದ ಕೆಲಸವನ್ನು ಮಾಡುವಿರಿ ಮತ್ತು ಹೊಸ ಅವಕಾಶಗಳು ದೊರಕುವುದು. ವಿಶೇಷವಾಗಿ ಈ ದಿನ ನಿಮಗೆ ಅನುಕೂಲಕರವಾಗಿರಲಿದೆ ಮತ್ತು ನೀವು ರೋಮ್ಯಾಂಟಿಕ್ ಆಗಿರುವಿರಿ. ಅದೃಷ್ಟದ ಬೆಂಬಲದಿಂದ ನಿಮಗೆ ಹಠಾತ್ ಲಾಭ ದೊರಕುವ ಸಂಭವವಿದೆ. ದುರ್ಗಾ ಕವಚವನ್ನು ಪಠಿಸುವುದರಿಂದ ಶುಭ ಫಲ ದೊರಕುವುದು. ಹಾಗೆ ರಾಹು, ಕೇತುವಿನ ಪ್ರತಿಕೂಲ ಪ್ರಭಾವವೂ ಕಡಿಮೆಯಾಗಲಿದೆ.
ಮಕರ ರಾಶಿಗೆ ಸೇರಿದ ಜನರಿಗೆ ಇಂದು ಆರಂಭದಲ್ಲಿ ಪರಿಶ್ರಮದಿಂದ ಕೂಡಿರುವುದು, ಆದರೆ ನಂತರ ನಿಮ್ಮ ಪರಿಶ್ರಮಕ್ಕೆ ಉತ್ತಮ ಫಲವನ್ನು ಗಳಿಸುವಿರಿ. ನಿಮ್ಮ ಆದಾಯ ಉತ್ತಮವಾಗಿರಲಿದೆ. ಹಾಗೆ ಮನೆಯವರ ಸಂಪೂರ್ಣ ಬೆಂಬಲ ದೊರಕುವುದು. ಮಕ್ಕಳ ಸಂಪೂರ್ಣ ಬೆಂಬಲ ದೊರಕುವುದರೊಂದಿಗೆ ಸುಖ, ಸಮೃದ್ಧಿಯ ಪ್ರಾಪ್ತಿ ಆಗುವ ಯೋಗ ನಿರ್ಮಾಣಗೊಳ್ಳುವುದು. ಚಂದ್ರನು ನಿಮ್ಮ ರಾಶಿಯಾ ಮೂರನೇ ನಂತರ ನಾಲ್ಕನೇ ಮನೆಯಲ್ಲಿ ಚಲಿಸುವುದರಿಂದ ನಿಮ್ಮ ಸುಖ, ಸಮೃದ್ಧಿಯಲ್ಲಿ ಹೆಚ್ಚಳವಾಗಲಿದೆ. ನಿಮಗೆ ಉತ್ತಮ ಅವಕಾಶ ಲಭಿಸುವುದರಿಂದ ಮನಸ್ಸು ಸಂತಸದಿಂದಿರುವುದು. ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಸಲಹೆ ಮತ್ತು ನಿಮ್ಮ ಯೋಜನೆಗಳಿಂದ ಸಂತೋಷವನ್ನು ಹೊಂದುವಿರಿ. ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನು ಗಳಿಸುವಿರಿ. ನಿಮಗೆ ಹೊಸ ವಾಹನವನ್ನು ಖರೀದಿಸುವ ಯೋಗ ದೊರಕುವುದು. ಹಾಗೆ ನಿಮ್ಮ ಕೆಲಸಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಶ್ರೀ ಗಣೇಶ ಗಾಯತ್ರಿ ಮಂತ್ರವಾದ ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿಃ ಪ್ರಚೋದಯಾತ್ ಅನ್ನು ಪಠಿಸುವುದರಿಂದ ನಿಮಗೆ ಹೆಚ್ಚಿನ ಲಾಭ ದೊರಕುವುದು.
Vastu Shastra ಮನೆಗೆ ಪದೇ ಪದೇ ಹಾವು ಬರ್ತಿರೋದರ ಹಿಂದೆ ಅಡಗಿದೆ ನಿಗೂಢ ರಹಸ್ಯ, ವಾಸ್ತು ಶಾಸ್ತ್ರ ಹೇಳೋದೇನು?