newsics.com/ನ್ಯೂಸಿಕ್ಸ್
ಬೆಂಗಳೂರು: ಮಳೆ ಕಾರಣದಿಂದ ಬೆಳೆಗಳಿಗೆ ಹಾನಿಯಾಗಿರುವುದು ಹಾಗೂ ವಿವಿಧ ಪ್ರದೇಶಗಳಿಂದ ಮಾರುಕಟ್ಟೆಗೆ ಸರಬರಾಜು ಕಡಿಮೆಯಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣವೆಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಕೆಲವು ತರಕಾರಿಗಳ ಬೆಲೆ ಒಂದೇ ವಾರದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಗ್ರಾಹಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಬೀನ್ಸ್ ಸುಮಾರು ₹78, ಟೊಮೆಟೊ ₹62ಕ್ಕೆ ಮಾರಾಟವಾಗುತ್ತಿದೆ. ಬಿಳಿ ಬದನೆಕಾಯಿ ₹80, ಗುಂಡು ಬದನೆಕಾಯಿ ₹66, ಬಜ್ಜಿ ಮೆಣಸಿನಕಾಯಿ ಹಾಗೂ ಗೊರಿಕಾಯಿ ತಲಾ ₹72ಕ್ಕೆ ತಲುಪಿವೆ.
ಇನ್ನು ಬೀಟ್ರೂಟ್ ₹50, ಎಲೆಕೋಸು ₹45, ಹೂಕೋಸು ₹50 ಹಾಗೂ ಮೂಲಂಗಿ ₹48 ದರದಲ್ಲಿ ಲಭ್ಯವಿದೆ. ಸೊಪ್ಪುಗಳ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, ಮೆಂತ್ಯ ಸೊಪ್ಪು ₹130, ಸಬ್ಬಸಿಗೆ ಸೊಪ್ಪು ₹110 ಮತ್ತು ಪಾಲಕ್ ಸೊಪ್ಪು ₹55ಕ್ಕೆ ಮಾರಾಟವಾಗುತ್ತಿದೆ. ಹಸಿಮೆಣಸಿನಕಾಯಿ ದರವೂ ₹70ರ ಗಡಿಯನ್ನು ದಾಟಿದೆ.