newsics.com/ನ್ಯೂಸಿಕ್ಸ್
ಬಿಸಿಲಿಗೆ ಸಿಲುಕಿ ಒಂದೇ ದಿನದಲ್ಲಿ ಬರೋಬ್ಬರಿ 21 ಮಂದಿ ಸಾವನ್ನಪ್ಪಿರುವ ಪ್ರಕರಣಗಳು ಆಂಧ್ರಪ್ರದೇಶದಲ್ಲಿ ವರದಿಯಾಗಿವೆ.
https://www.instagram.com/reel/DYrMG5SRxIn/?igsh=dWRpYmFkaXh6Yndo
ಮೇ 21 ರಂದು (ಗುರುವಾರ) 46 ದಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಒಂದೇ ದಿನದಲ್ಲಿ ತೆಲಂಗಾಣ ರಾಜ್ಯಾದ್ಯಂತ ಬಿಸಿಲಿನ ರಣಾರ್ಭಟದಿಂದ 22 ಮಂದಿ ಅಸುನೀಗಿದ್ದರು. ಅದರ ಬೆನ್ನಲ್ಲೇ ಮೇ 22 (ಶುಕ್ರವಾರ) ಆಂಧ್ರ ಪ್ರದೇಶದಲ್ಲೂ ರಣಬಿಸಿಲಿಗೆ 21 ಮಂದಿ ಸಾವನ್ನಪ್ಪಿರುವುದು ತೆಲುಗು ರಾಜ್ಯಗಳಲ್ಲಿ ಆತಂಕ ಹೆಚ್ಚಿಸಿದೆ.
ಆಂಧ್ರದ ವಿಜಯವಾಡ ಜಿಲ್ಲೆಯೊಂದರಲ್ಲೇ 10 ಮಂದಿ ಸಾವನ್ನಪ್ಪಿದ್ದು, ಈ ಪೈಕಿ ಇಬ್ಬರ ಗುರುತು ಮಾತ್ರ ಪತ್ತೆಯಾಗಿದ್ದು, ಸಾಮಾನ್ಯ ಜನರಾಗಿದ್ದಾರೆ. ಉಳಿದಂತೆ 8 ಜನರು ಅಪರಿಚಿತ ಭಿಕ್ಷುಕರಾಗಿದ್ದು, ಅವರ ಗುರುತು ಪತ್ತೆಯಾಗಿಲ್ಲ.
ಸೀತಾರಾಮಪುರಂನ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, 40 ವರ್ಷ ವಯಸ್ಸಿನ ಅಪರಿಚಿತ ಆ ವ್ಯಕ್ತಿಯನ್ನು ತಕ್ಷಣಕ್ಕೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಅಜೀತ್ ಸಿಂಗ್ ನಗರದ ನ್ಯೂ ರಾಜಾರಾಜೇಶ್ವರಿಪೇಟೆಯ ಆಸ್ಪತ್ರೆ ಗೇಟ್ ತಲುಪುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಮತ್ತೊಂದೆಡೆ ಹನುಮಾನಪೇಟೆಯ 50 ವರ್ಷದ ವ್ಯಕ್ತಿ ರಾಘವಯ್ಯಾ ಪಾರ್ಕ್ ಬಳಿ ಮೃತಪಟ್ಟಿದ್ದಾರೆ. ಇನ್ನೊಂದೆಡೆ 65 ವರ್ಷದ ವೃದ್ಧ ಬೇಸಂಟ್ ರಸ್ತೆಯಲ್ಲಿನ ಎಲ್ಐಸಿ ಕಚೇರಿ ಬಳಿ ಕುಸಿದು ಬಿದ್ದು ಅಸುನೀಗಿದ್ದಾರೆ. ಈ ಇಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕಾಳೇಶ್ವರ ರಾವ್ ಮಾರುಕಟ್ಟೆ ಬಳಿಯ ರಥಮ್ ಕೇಂದ್ರದಲ್ಲಿದ್ದ ಮೂವರು ಭಿಕ್ಷುಕರು ಮೃತಪಟ್ಟಿದ್ದು ಅವರನ್ನು ಕಸ್ತೂರಿಬಾಯಿಪೇಟೆಯ ದಾವುಲೂರಿ ರಾಮಾರಾವ್ (57) ಮತ್ತು ಗುಣದಾಲಾ ಗಾಂಧಿ ಬೊಮ್ಮ ಕೇಂದ್ರದ ನಿಮ್ಮಗಡ್ಡಾ ಶರತ್ ಬಾಬು(45) ಎಂದು ಇವರು ರಸ್ತೆ ಬದಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ 108 ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರು ಅಷ್ಟರಲ್ಲೇ ಅಸುನೀಗಿರುವ ಬಗ್ಗೆ ವೈದ್ಯರು ಖಚಿತಪಡಿಸಿದರು. ಇನ್ನೋರ್ವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಶುಕ್ರವಾರದಂದು ಎಲ್ಲೂರು ಜಿಲ್ಲೆಯಲ್ಲಿ ಮೂವರು ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಒಬ್ಬರು ಬಿಸಿಲ ತಾಪಕ್ಕೆ ಬಲಿಯಾಗಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಳ್ಳು ತಾಲೂಕಿನ ಪೂಲಪಲ್ಲಿ ಎಂಬಲ್ಲಿ ಮೂಲತಃ ಒಡಿಶಾದ ರಾಯಗಡ ಜಿಲ್ಲೆಯ 28 ವರ್ಷದ ಯುವಕ ಮೃತಪಟ್ದಿದ್ದಾರೆ.
ಕಾಕಿನಾಡ ಜಿಲ್ಲೆಯಲ್ಲೂ ಮೂವರು ಸಾವು: ಸರಪವರಂ ಪಂಚಾಯತ್ ನ ಗುತ್ತಿಗೆ ಕಾರ್ಮಿಕ ಗುರ್ರಂ ಅಪ್ಪಣ್ಣ (37), ಗೊಲ್ಲಪ್ರೋಲು ತಾಲೂಕಿನ ಚೆಂದುರ್ತಿಯ ಪಿಲ್ಲಿ ರಮಣ (55), ಮತ್ತು ಪಿಠಾಪುರದ ಕೆ.ಅಪ್ಪಾರಾವ್ (40) ಬಿಸಿಲಿನ ಹೊಡೆತಕ್ಕೆ ಸಸಿಲುಕಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪಲ್ನಾಡು ಜಿಲ್ಲೆಯ ನರಸರಾಯಪೇಟೆ ಪಟ್ಟಣದಲ್ಲಿ ಬಿಸಿಲ ತಾಪಕ್ಕೆ ಇಬ್ಬರು ಅಪರಿಚಿತರು ಸಾವನ್ನಪ್ಪಿದ್ದಾರೆ. ಪಟ್ಟಣದ ಚಿತ್ರಾಲಯ ಕೇಂದ್ರದ ವಿಜೇತ ಸಿನಿಮಾ ಮಂದಿರದ ಬಳಿ ಮಾರುಕಟ್ಟೆ ಕೇಂದ್ರದಲ್ಲಿ ಅಪರಿಚಿತ ವೃದ್ಧ (60) ಮತ್ತು 25 -30 ವರ್ಷ ವಯಸ್ಸಿನ ಯುವಕ ಬಿಸಿಲಿನ ತೀವ್ರತೆಗೆ ಸಿಲುಕಿ ಅಸುನೀಗಿದ್ದಾರೆ.
ವಿನುಕೊಂಡ ಕ್ಷೇತ್ರದಲ್ಲಿ ವೃದ್ಧ ವೆಲಿನೇನಿ ನರಸಿಂಹ ರಾವ್ (69) ಬಿಸಿಲಿನ ಹೊಡೆತದಿಂದ ಮೃತಪಟ್ಟಿದ್ದಾರೆ. ಅನಕಪಲ್ಲಿ ಜಿಲ್ಲೆಯ ಚೋಡವರಂ ತಾಲೂಕಿನ ಗೋವಾಡದಲ್ಲಿ ಅಟ್ಟಾ ಲಕ್ಷ್ಮಿ ಎಂಬ ಮಹಿಳೆ ಬಿಸಿಲಿನ ಪ್ರತಾಪಕ್ಕೆ ಬಲಿಯಾಗಿದ್ದಾರೆ.