newsics.com/ನ್ಯೂಸಿಕ್ಸ್
ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಗಿದೆ. ದಳಪತಿ ವಿಜಯ್ ಟಿವಿಕೆ ಪಕ್ಷದ ಪರವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿ, ದಶಕಗಳಿಂದ ನಡೆಯುತ್ತಿರುವ ರಾಜಕೀಯ ಸಮೀಕರಣಗಳನ್ನು ಬದಲಾಯಿಸಿದ್ದಲ್ಲದೆ, ಸಿಎಂ ಸಿಂಹಾಸನದ ಮೇಲೆ ಕುಳಿತು ಎಲ್ಲರನ್ನೂ ಅಚ್ಚರಿಗೊಳಿಸಿದರು.
ಮೇ 10 ರಂದು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ವಿಜಯ್, ಪ್ರತಿದಿನ ಕಚೇರಿ ಸಮಯಕ್ಕೂ 15 ನಿಮಿಷ ಮೊದಲೇ ಚೆನ್ನೈನ ಸೇಂಟ್ ಜಾರ್ಜ್ ಕೋಟೆಯಲ್ಲಿರುವ ಸಚಿವಾಲಯಕ್ಕೆ ಬರುತ್ತಿದ್ದಾರೆ. ರಾಜಕಾರಣಿಗಳ ಸಾಮಾನ್ಯ ವರ್ತನೆಗಿಂತ ಭಿನ್ನವಾಗಿರುವ ವಿಜಯ್ ಅವರ ಈ ನಡೆ ಅಧಿಕಾರಿಗಳನ್ನು ಅಚ್ಚರಿಗೊಳಿಸಿದೆ.
ಅಷ್ಟೇ ಅಲ್ಲ, ವಿಜಯ್ ದಳಪತಿ ಸಾಮಾನ್ಯ ಸರ್ಕಾರಿ ನೌಕರನಂತೆ ಮನೆಯಿಂದಲೇ ಊಟದ ಡಬ್ಬಿ ತರುತ್ತಿದ್ದಾರೆ.
ಊಟದ ವಿರಾಮದ ವೇಳೆಯಲ್ಲೂ ಅವರು ತಮ್ಮ ಚೇಂಬರ್ನಲ್ಲೇ ಇರುತ್ತಾರೆ. ಊಟ ಮುಗಿದ ತಕ್ಷಣ ಮತ್ತೆ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ ಎಂದು ವರದಿಯಾಗಿದೆ. ಸಿಎಂ ಮಟ್ಟದ ವ್ಯಕ್ತಿ ಇಷ್ಟು ಶಿಸ್ತಿನಿಂದ ಕೆಲಸ ಮಾಡುವುದು ಅಧಿಕಾರಿಗಳ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ವಿಜಯ್ ಅವರ ಸಮಯ ಪ್ರಜ್ಞೆ, ಕೆಲಸದ ಬಗೆಗಿನ ಸಮರ್ಪಣೆ ಮತ್ತು ನಿರ್ಧಾರಗಳು ತಮಿಳುನಾಡಿನಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಚರ್ಚೆಗೆ ಕಾರಣವಾಗಿವೆ. ಅಧಿಕಾರಕ್ಕೆ ಬಂದ ತಕ್ಷಣವೇ ಅವರು ದೇವಸ್ಥಾನ ಮತ್ತು ಶಾಲೆಗಳ ಬಳಿ ಇದ್ದ ವೈನ್ ಶಾಪ್ಗಳನ್ನು ಮುಚ್ಚಿಸಿದ್ದಾರೆ. ಈ ವಿಷಯ ಸದ್ಯ ತಮಿಳುನಾಡಿನಲ್ಲಿ ಹಾಟ್ ಟಾಪಿಕ್ ಆಗಿದೆ.