newsics.com/ನ್ಯೂಸಿಕ್ಸ್
ಪಶ್ಚಿಮ ಬಂಗಾಳದಲ್ಲಿ ಹದಿನೈದು ವರ್ಷಗಳ ದೀದಿ ಆಡಳಿತ ಅಂತ್ಯವಾಗಿದೆ. ಬಿಜಪಿ ಅಧಿಕಾರಕ್ಕೆ ಬರುತ್ತಲೇ ಬಂದಾಗಿದ್ದ ಎಲ್ಲಾ ದೇಗುಲಗಳು ತೆರೆದಿವೆ. ಹಿಂದೂಗಳು ನಿರ್ಭೀತಿಯಿಂದ ತಮ್ಮ ದೇವರ ದರ್ಶನ ಪಡೆಯುತ್ತಿದ್ದಾರೆ. ಮಮತಾ ಬ್ಯಾನರ್ಜಿ ಕೆಳಕ್ಕೆ ಇಳಿಯುತ್ತಲೇ ಖುದ್ದು ಕಾಂಗ್ರೆಸ್ ಕಾರ್ಯಕರ್ತರೇ ಕೇಕೇ ಹಾಕಿ, ಟಿಎಂಸಿ ವಶಪಡಿಸಿಕೊಂಡಿದ್ದ ಕಾಂಗ್ರೆಸ್ ಕಚೇರಿಯನ್ನು ಒಡೆದು ಹರ್ಷೋದ್ಗಾರದಿಂದ ತಮ್ಮ ವಶಕ್ಕೆ ಪಡೆದು ಸರಸ್ವತಿ ಪೂಜೆಯನ್ನೂ ಸಲ್ಲಿಸಿದ್ದಾರೆ.
ಇದರ ನಡುವೆಯೇ ಇದೀಗ ಕಾಳಿ ಮಾತೆಯ ದೇಗುಲದಲ್ಲಿ ಕುಂಕುಮವಿಟ್ಟು ಮುಸ್ಲಿಂ ಮಹಿಳೆಯೊಬ್ಬರು ಪಶ್ಚಿಮ ಬಂಗಾಳದಲ್ಲಿ ಭೇಟಿ ಕೊಟ್ಟರೆ, ಅತ್ತ ಬಾಂಗ್ಲಾದೇಶದಲ್ಲಿ ಕೋಲಾಹಲ ಸೃಷ್ಟಿಯಾಗಿದೆಯಂತೆ.
ಅಂದಹಾಗೆ ಹೀಗೆ ಭೇಟಿ ಕೊಟ್ಟವರು ಸುಪ್ರೀಂಕೋರ್ಟ್ನ ಖ್ಯಾತ ವಕೀಲೆ ನಾಜಿಯಾ ಖಾನ್. ಇದಾಗಲೇ ನಾಜಿಯಾ ಖಾನ್ ಅವರು, ಹಿಂದೂ ಧರ್ಮದವರಿಗೂ ಅವರ ಧರ್ಮಪಾಲನೆ ಮಾಡಲು ಬೆದರಿಕೆಯೊಡ್ಡುತ್ತಿರುವವರು, ಮತಾಂತರ ಮಾಡಿಹಿಂದೂಗಳ ಶೋಷಣೆ ಮಾಡುತ್ತಿರುವವರಿಗೆ ಚಳಿ ಬಿಡಿಸಿದ್ದಾರೆ. ಪ್ರತಿಯೊಂದಕ್ಕೂ ಸಾಕ್ಷಿಯನ್ನು ಮುಂದಿಟ್ಟು ಮಾತನಾಡುವ ಅವರನ್ನು ಕಂಡರೆ ಭಯಬೀಳುವ ದೊಡ್ಡ ವರ್ಗವೇ ಇದೆ.
ಇದೀಗ ನಾಜಿಯಾ ಅವರ ಹಲವು ದಶಕಗಳ ಕನಸು ನನಸಾಗಿದೆ ಎಂದು ಹೇಳಿದ್ದಾರೆ. ಈ ಮೊದಲು ಕಾಳಿ ಮಂದಿರಕ್ಕೆ ಭೇಟಿ ನೀಡಲು ಮುಂದಾದಾಗ, ಪಶ್ಚಿಮ ಬಂಗಾಳದ ಸರ್ಕಾರ ಅದನ್ನು ಅಲ್ಲಿಯ ಗೂಂಡಾಗಳಿಗೆ ತಿಳಿಸುತ್ತಿತ್ತು. ಅದು ಎಷ್ಟು ವೇಗದಲ್ಲಿ ಹರಡುತ್ತಿತ್ತು ಎಂದರೆ, ಬಾಂಗ್ಲಾದೇಶದಿಂದ ನನಗೆ ಜೀವ ಬೆದರಿಕೆ ಬರುತ್ತಿತ್ತು. ಒಮ್ಮೆಯೂ ಕಾಳಿಯ ದರ್ಶನ ಮಾಡಲು ಬಿಟ್ಟಿರಲಿಲ್ಲ ಎಂದಿದ್ದಾರೆ.
Operation Ragepill 182 ಕೋಟಿ ಮೌಲ್ಯದ ಜಿಹಾದಿ ಡ್ರಗ್ ವಶ: ಅಮಿತ್ ಶಾ ಮಾಹಿತಿ