newsics.com/ನ್ಯೂಸಿಕ್ಸ್
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಈ ಮೂಲಕ ತಮಿಳುನಾಡಿನ ರಾಜ್ಯ ರಾಜಕೀಯದಲ್ಲಿ ದಳಪತಿ ಯುಗಾರಂಭವಾಗಿದೆ.
ಚೆನ್ನೈನ ಜವಾಹರಲಾಲ್ ನೆಹರು ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಪ್ರಮಾಣವಚನ ಬೋಧಿಸಿದರು. ವಿಜಯ್ ಜೊತೆ 9 ಸಚಿವರು ಕೂಡ ಪ್ರಮಾಣವಚನದ ಮೂಲಕ ಸಂಪುಟ ಸೇರಿದ್ದಾರೆ. ಈ ವೇಳೆ ಒಬ್ಬ ಸಚಿವನಿಗಾಗಿ ದಳಪತಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.
ಸೆಂಗೊಟ್ಟೆಯನ್ಗೆ ಎದ್ದು ನಿಂತು ವಿಜಯ್ ಚಪ್ಪಾಳೆ
ಶಾಸಕ ಸೆಂಗೊಟ್ಟೆಯನ್ ಅವರ ಪ್ರಮಾಣ ವಚನದ ವೇಳೆ ಎದ್ದು ನಿಂತು ಸಿಎಂ ವಿಜಯ್ ಅಭಿಮಾನಿಯಂತೆ ಚಪ್ಪಾಳೆ ತಟ್ಟಿದ್ದಾರೆ.
ಮುಖ್ಯಮಂತ್ರಿಯೇ ಸೆಂಗೊಟ್ಟೆಯನ್ ಅವರಿಗೆ ಎದ್ದು ನಿಂತು ಚಪ್ಪಾಳೆ ತಟ್ಟೋಕೆ ಕಾರಣ ಕೂಡ ಇದೆ. ಮಾಜಿ ಸಚಿವ ಮತ್ತು ಉಚ್ಚಾಟಿತ ಎಐಎಡಿಎಂಕೆ ಹಿರಿಯ ನಾಯಕ ಕೆಎ ಸೆಂಗೋಟ್ಟಯ್ಯನ್ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷ ಸೇರಿ ಪಕ್ಷದ ಗೆಲುವಿಗಾಗಿ ಶ್ರಮಿಸಿದ್ರು.
ಸೆಂಗೊಟ್ಟೆಯನ್ ಪಕ್ಷ ಸಂಘಟನೆಗೆ ಮಾಡಿ ಶ್ರಮಕ್ಕೆ ವಿಜಯ್ ಎದ್ದು ನಿಂತು ಚಪ್ಪಾಳೆ ತಟ್ಟಿದ್ದೆ ಸಾಕ್ಷಿ ಎನ್ನಬಹುದು. ವಿಜಯ್ ಮುಖ್ಯಮಂತ್ರಿಯಾಗಿರುವುದು ತಮಿಳುನಾಡಿನ ಸಿನಿ-ರಾಜಕೀಯ ಪರಂಪರೆಯನ್ನು ಮತ್ತೆ ನೆನಪಿಸಿದೆ. ಇದೀಗ ಸೋಶಿಯನ್ ಮೀಡಿಯಾದಲ್ಲಿ ಸಿಎಂ ವಿಜಯ್, ಜನರ ಸಿಎಂ ಅನ್ನೋ ಟ್ರೆಂಡ್ ಕ್ರಿಯೇಟ್ ಆಗಿದೆ.
9 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು:
ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಹಾಗೂ 9 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಅವರಲ್ಲಿ ಪ್ರಮುಖರೆಂದರೆ ಆನಂದ್, ಅಧವ್ ಅರ್ಜುನ, ಅರುಣಾಜ್, ಸೆಂಗೋಟ್ಟಯ್ಯನ್, ವೆಂಕಟ್ರಮಣನ್, ನಿರ್ಮಲ್ ಕುಮಾರ್, ರಾಜಮೋಹನ್, ಪ್ರಭು ಮತ್ತು ಕೀರ್ತನಾ.
ವಿಜಯ್ ಪಕ್ಷಕ್ಕೆ 120 ಶಾಸಕರ ಬೆಂಬಲ ಸಿಕ್ಕಿದೆ ಎಂದು ವರದಿ ಆಗಿದೆ. ಇದನ್ನು ಸ್ವೀಕರಿಸಿ ರಾಜ್ಯಪಾಲರು ನಿನ್ನೆ ಸರ್ಕಾರ ರಚಿಸಲು ಅವರನ್ನು ಆಹ್ವಾನಿಸಿದ್ರು. ಇದರ ಬೆನ್ನಲ್ಲೇ, ಇಂದು ತಮಿಳುನಾಡು ರಾಜ್ಯಪಾಲರು ವಿಜಯ್ ಅವರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಬೋಧಿಸಿದ್ದಾರೆ. ಮೇ 13 ರೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆಯೂ ಆದೇಶಿಸಲಾಗಿದೆ.
ಪ್ರಮಾಣವಚನದ ವೇಳೆ ವಿಜಯ್ ದಳಪತಿ
ಎದ್ದು ನಿಂತು ಚಪ್ಪಾಳೆ ತಟ್ಟಿದ್ದೇಕೆ? ಸಂಪುಟದಲ್ಲಿ ಯಾರಿಗೆ ಯಾವ ಖಾತೆ?ನಲ
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಈ ಮೂಲಕ ತಮಿಳುನಾಡಿನ ರಾಜ್ಯ ರಾಜಕೀಯದಲ್ಲಿ ದಳಪತಿ ಯುಗಾರಂಭವಾಗಿದೆ. ಚೆನ್ನೈನ ಜವಾಹರಲಾಲ್ ನೆಹರು ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಪ್ರಮಾಣವಚನ ಬೋಧಿಸಿದರು. ವಿಜಯ್ (Vijay) ಜೊತೆ 9 ಸಚಿವರು ಕೂಡ ಪ್ರಮಾಣವಚನದ ಮೂಲಕ ಸಂಪುಟ ಸೇರಿದ್ದಾರೆ. ಈ ವೇಳೆ ಒಬ್ಬ ಸಚಿವನಿಗಾಗಿ ದಳಪತಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.
ಶಾಸಕ ಸೆಂಗೊಟ್ಟೆಯನ್ ಅವರ ಪ್ರಮಾಣ ವಚನದ ವೇಳೆ ಎದ್ದು ನಿಂತು ಸಿಎಂ ವಿಜಯ್ ಅಭಿಮಾನಿಯಂತೆ ಚಪ್ಪಾಳೆ ತಟ್ಟಿದ್ದಾರೆ.
ಮುಖ್ಯಮಂತ್ರಿಯೇ ಸೆಂಗೊಟ್ಟೆಯನ್ ಅವರಿಗೆ ಎದ್ದು ನಿಂತು ಚಪ್ಪಾಳೆ ತಟ್ಟೋಕೆ ಕಾರಣ ಕೂಡ ಇದೆ. ಮಾಜಿ ಸಚಿವ ಮತ್ತು ಉಚ್ಚಾಟಿತ ಎಐಎಡಿಎಂಕೆ ಹಿರಿಯ ನಾಯಕ ಕೆಎ ಸೆಂಗೋಟ್ಟಯ್ಯನ್ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷ ಸೇರಿ ಪಕ್ಷದ ಗೆಲುವಿಗಾಗಿ ಶ್ರಮಿಸಿದ್ರು.
ಸೆಂಗೊಟ್ಟೆಯನ್ ಪಕ್ಷ ಸಂಘಟನೆಗೆ ಮಾಡಿ ಶ್ರಮಕ್ಕೆ ವಿಜಯ್ ಎದ್ದು ನಿಂತು ಚಪ್ಪಾಳೆ ತಟ್ಟಿದ್ದೆ ಸಾಕ್ಷಿ ಎನ್ನಬಹುದು. ವಿಜಯ್ ಮುಖ್ಯಮಂತ್ರಿಯಾಗಿರುವುದು ತಮಿಳುನಾಡಿನ ಸಿನಿ-ರಾಜಕೀಯ ಪರಂಪರೆಯನ್ನು ಮತ್ತೆ ನೆನಪಿಸಿದೆ. ಇದೀಗ ಸೋಶಿಯನ್ ಮೀಡಿಯಾದಲ್ಲಿ ಸಿಎಂ ವಿಜಯ್, ಜನರ ಸಿಎಂ ಅನ್ನೋ ಟ್ರೆಂಡ್ ಕ್ರಿಯೇಟ್ ಆಗಿದೆ.
9 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು:
ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಹಾಗೂ 9 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಅವರಲ್ಲಿ ಪ್ರಮುಖರೆಂದರೆ ಆನಂದ್, ಅಧವ್ ಅರ್ಜುನ, ಅರುಣಾಜ್, ಸೆಂಗೋಟ್ಟಯ್ಯನ್, ವೆಂಕಟ್ರಮಣನ್, ನಿರ್ಮಲ್ ಕುಮಾರ್, ರಾಜಮೋಹನ್, ಪ್ರಭು ಮತ್ತು ಕೀರ್ತನಾ.
ವಿಜಯ್ ಪಕ್ಷಕ್ಕೆ 120 ಶಾಸಕರ ಬೆಂಬಲ ಸಿಕ್ಕಿದೆ ಎಂದು ವರದಿ ಆಗಿದೆ. ಇದನ್ನು ಸ್ವೀಕರಿಸಿ ರಾಜ್ಯಪಾಲರು ನಿನ್ನೆ ಸರ್ಕಾರ ರಚಿಸಲು ಅವರನ್ನು ಆಹ್ವಾನಿಸಿದ್ರು. ಇದರ ಬೆನ್ನಲ್ಲೇ, ಇಂದು ತಮಿಳುನಾಡು ರಾಜ್ಯಪಾಲರು ವಿಜಯ್ ಅವರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಬೋಧಿಸಿದ್ದಾರೆ. ಮೇ 13 ರೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆಯೂ ಆದೇಶಿಸಲಾಗಿದೆ.
ಅಧಿಕಾರದ ದಾಹದಿಂದ ಡಿಎಂಕೆ ಬೆನ್ನಿಗೆ ಇರಿದ ಕಾಂಗ್ರೆಸ್: ಪ್ರಧಾನಿ ಮೋದಿ ಲೇವಡಿ