newsics.com/ನ್ಯೂಸಿಕ್ಸ್
ಸತ್ನ: ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿಯೊಬ್ಬರು ಅಲ್ಲಿಯೇ ಶಿಕ್ಷೆ ಅನುಭವಿಸುತ್ತಿದ್ದ ಕೊಲೆ ಆರೋಪಿಯೊಂದಿಗೆ ಪ್ರೀತಿಯಲ್ಲಿ ಬಿದ್ದು, ಇದೀಗ ಎಲ್ಲ ಅಡೆತಡೆಗಳನ್ನು ಮೀರಿ ವಿವಾಹವಾಗಿದ್ದಾರೆ.
https://youtube.com/shorts/gjYZnQ_VPsc?si=qVOf4mHBsp6RN8ZV
ಧರ್ಮೇಂದ್ರ ಸಿಂಗ್ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಕಾಲದಲ್ಲಿ. ಧರ್ಮೇಂದ್ರ ಸಿಂಗ್ ಒಬ್ಬ ಸುಶಿಕ್ಷಿತ ವ್ಯಕ್ತಿಯಾಗಿದ್ದು, ಜೈಲಿನಲ್ಲಿದ್ದ ಅವಧಿಯಲ್ಲಿ ತನ್ನ ನಡವಳಿಕೆಯಿಂದ ಎಲ್ಲರ ಮೆಚ್ಚುಗೆ ಪಾತ್ರನಾಗಿದ್ದ ಎನ್ನಲಾಗಿದೆ. ಇದೇ ಸಮಯದಲ್ಲಿ ಸತ್ನಾ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಫಿರೋಝಾ ಖಾಟೂನ್ ಅವರಿಗೆ ಧರ್ಮೇಂದ್ರನ ವ್ಯಕ್ತಿತ್ವ ಮತ್ತು ಆತನ ಮೇಲಿದ್ದ ಸುಳ್ಳು ಆರೋಪಗಳ ಬಗ್ಗೆ ಸಹಾನುಭೂತಿ ಮೂಡಿತ್ತು ಎಂದು ಹೇಳಲಾಗುತ್ತಿದೆ.
ಕಾಲಕ್ರಮೇಣ ಇವರಿಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿದೆ. ಧರ್ಮೇಂದ್ರ ಸಿಂಗ್ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದರೂ, ತಾನು ನಿರ್ದೋಷಿ ಎಂದು ವಾದಿಸುತ್ತಲೇ ಬಂದಿದ್ದನು. ಆತನ ಪ್ರಾಮಾಣಿಕತೆ ಮತ್ತು ಜೈಲಿನ ಶಿಸ್ತಿನ ಜೀವನ ಫಿರೋಝಾ ಅವರ ಮನ ಗೆದ್ದಿತ್ತು. ಧರ್ಮ ಮತ್ತು ಸಾಮಾಜಿಕ ಸ್ಥಾನಮಾನಗಳ ಎಲ್ಲೆಗಳನ್ನು ಮೀರಿ, ಇಬ್ಬರೂ ಜೀವನ ಪರ್ಯಂತ ಜೊತೆಯಾಗಿರಲು ನಿರ್ಧರಿಸಿದರು.
ಜೈಲಿನಿಂದ ಹೊರಬಂದ ನಂತರವೂ ಇವರ ಪ್ರೇಮ ಸಂಬಂಧ ಮುಂದುವರಿದಿದ್ದು, ಇತ್ತೀಚೆಗೆ ಛತ್ತರ್ಪುರ ಜಿಲ್ಲೆಯಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಅಂತರಧರ್ಮೀಯ ವಿವಾಹಕ್ಕೆ ಫಿರೋಜಾ ಖಾತೂನ್ ಅವರ ಕುಟುಂಬದ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕುಟುಂಬಸ್ಥರು ಮದುವೆಯಿಂದ ದೂರ ಉಳಿದಿದ್ದರು. ಇಂತಹ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಈ ಜೋಡಿಯ ನೆರವಿಗೆ ನಿಂತಿದ್ದಾರೆ. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ರಾಜಬಹದ್ದೂರ್ ಮಿಶ್ರಾ ಮತ್ತು ಅವರ ಪತ್ನಿ ಫಿರೋಜಾ ಅವರಿಗೆ ಪೋಷಕರ ಸ್ಥಾನದಲ್ಲಿ ನಿಂತು ಕನ್ಯಾದಾನ ನೆರವೇರಿಸುವ ಮೂಲಕ ಈ ವಿವಾಹವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.