newsics.com/ನ್ಯೂಸಿಕ್ಸ್
ಮುಂಬೈನ ಪೈಧೋನಿ ಪ್ರದೇಶದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವಿನ ಪ್ರಕರಣಕ್ಕೆ ಕೊನೆಗೂ ಸ್ಪಷ್ಟನೆ ಸಿಕ್ಕಿದೆ.
https://youtube.com/shorts/gjYZnQ_VPsc?si=qVOf4mHBsp6RN8ZV
ಅಬ್ದುಲ್ಲಾ ಡೊಕಾಡಿಯಾ, ಅವರ ಪತ್ನಿ ನಸ್ರಿನ್ ಮತ್ತು ಇಬ್ಬರು ಪುತ್ರಿಯರಾದ ಆಯೇಷಾ ಹಾಗೂ ಜೈನೆಬ್ ಅವರ ಸಾವಿಗೆ ಕಲ್ಲಂಗಡಿ ಹಣ್ಣು ಕಾರಣವಲ್ಲ ಎಂಬುದು ವಿಧಿವಿಜ್ಞಾನ ವರದಿಯಲ್ಲಿ ದೃಢಪಟ್ಟಿದೆ. ಆರಂಭದಲ್ಲಿ ಕಲ್ಲಂಗಡಿ ತಿಂದಿದ್ದಕ್ಕೆ ಫುಡ್ ಪಾಯಿಸನ್ ಆಗಿರಬಹುದು ಎಂಬ ಅನುಮಾನವಿತ್ತು, ಆದರೆ ಈಗ ಲಭ್ಯವಾಗಿರುವ ವರದಿಗಳು ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ನೀಡಿವೆ.
ಫೊರೆನ್ಸಿಕ್ ತಜ್ಞರ ವರದಿಯ ಪ್ರಕಾರ, ಮೃತ ಅಬ್ದುಲ್ಲಾ ದೋಕಾಡಿಯಾ ಅವರ ಕುಟುಂಬದ ನಾಲ್ವರು ಸದಸ್ಯರ ದೇಹದಲ್ಲಿ ಮತ್ತು ಅವರು ತಿಂದಿದ್ದ ಕಲ್ಲಂಗಡಿ ಹಣ್ಣಿನಲ್ಲಿ ಜಿಂಕ್ ಫಾಸ್ಫೈಡ್ ಎಂಬ ಅಪಾಯಕಾರಿ ವಿಷ ಪತ್ತೆಯಾಗಿದೆ. ಇದು ಸಾಮಾನ್ಯವಾಗಿ ಇಲಿಗಳನ್ನು ಕೊಲ್ಲಲು ಬಳಸುವ ವಿಷವಾಗಿದೆ.
ಏಪ್ರಿಲ್ 25ರ ರಾತ್ರಿ ಇಸ್ಮಾಯಿಲ್ ಕುರ್ತೆ ರಸ್ತೆಯ ಘಾರಿ ಮೊಹಲ್ಲಾದಲ್ಲಿರುವ ಡೊಕಾಡಿಯಾ ಕುಟುಂಬವು ಒಂದು ಗೆಟ್-ಟು-ಗೆದರ್ (Get-together) ಆಯೋಜಿಸಿತ್ತು. ನೆಂಟರೆಲ್ಲಾ ಸೇರಿ ಬಿರಿಯಾನಿ ಊಟ ಮಾಡಿದ್ದರು. ಅತಿಥಿಗಳು ಹೋದ ನಂತರ, ಅಂದರೆ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಕುಟುಂಬದ ಸದಸ್ಯರೆಲ್ಲಾ ಸೇರಿ ಕಲ್ಲಂಗಡಿ ಹಣ್ಣನ್ನು ತಿಂದಿದ್ದಾರೆ. ಆದರೆ ಆ ಹಣ್ಣಿನಲ್ಲಿ ವಿಷವಿತ್ತೇ ಅಥವಾ ಬೇರೆ ಯಾವುದರ ಮೂಲಕ ವಿಷ ದೇಹ ಸೇರಿತ್ತೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಹಣ್ಣಿನೊಳಗೆ ವಿಷ ಬಂದಿದ್ದು ಹೇಗೆ ಎಂಬುದು ಈಗ ಪೊಲೀಸರ ಮುಂದಿರುವ ದೊಡ್ಡ ಪ್ರಶ್ನೆ.ಯಾರಾದರೂ ಉದ್ದೇಶಪೂರ್ವಕವಾಗಿ ಇಂಜೆಕ್ಷನ್ ಮೂಲಕ ಹಣ್ಣಿಗೆ ಇಲಿ ವಿಷ ಬೆರೆಸಿದ್ದಾರೆಯೇ?ಅಬ್ದುಲ್ಲಾ ಅವರು ಒಂದು ದೊಡ್ಡ ವಂಚನೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದರು, ಅವರನ್ನು ತಡೆಯಲು ನಡೆದ ಕೊಲೆ ಸಂಚು ಇದೇ?ಈ ನಿಟ್ಟಿನಲ್ಲಿ ಮುಂಬೈ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.