https://youtube.com/shorts/G0oN8U59OVY?si=rbIwZ4fR9fKtFNQ-
newsics.com
ಕನ್ನಡದ ಹಿರಿಯ ನಟ ರಮೇಶ್ ಭಟ್ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ? ಕನ್ನಡದಲ್ಲಿ ಅಸಂಖ್ಯಾತ ಸಿನಿಮಾಗಳಲ್ಲಿ ನಟಿಸಿದ್ದಾರೆ ನಟ ರಮೇಶ್ ಭಟ್. ಡಾ ರಾಜ್ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್ ನಾಗ್, ಅಂಬರೀಷ್ ಸೇರಿದಂತೆ ಬಹುತೇಕ ಎಲ್ಲಾ ಕಲಾವಿದರ ಜೊತೆ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ ರಮೇಶ್ ಭಟ್.
ಯಜಮಾನ ಧಾರಾವಾಹಿ ಮೂಲಕ ಇತ್ತೀಚೆಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ, ಖ್ಯಾತ ಸಿನಿಮಾ ನಟ ರಮೇಶ್ ಭಟ್ ಅವರು ಎಂಬ್ರಾಯ್ಡರಿ ಫ್ಯಾಕ್ಟರಿ ಕಟ್ಟಿದ್ದು, ಆರು ಕೋಟಿ ರೂಪಾಯಿ ಕಳೆದುಕೊಂಡ ಕಥೆಯನ್ನು Beyond Limits ಯುಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಶಂಕರ್ ನಾಗ್ ಹಾಗೂ ರಮೇಶ್ ಭಟ್ ಜತೆಯಾಗಿ ಮಾಡಿದ ಕೆಲಸ ಎಲ್ಲವೂ ಹಿಟ್ ಆಗುತ್ತಿತ್ತು. ಹೀಗಾಗಿ ಅವರಿಗೆ ಬೇರೆ ಡೈರೆಕ್ಟರ್ಗಳ ಸಂಪರ್ಕ ಕೂಡ ಇರಲಿಲ್ಲ. ಶಂಕರ್ ನಾಗ್ ಅವರು ಆಗಲೇ ಗಾರ್ಮೆಂಟ್ ಇಂಡಸ್ಟ್ರಿ ಆರಂಭಿಸಿದ್ದರು.
ನನಗೆ ಚಿಪ್ಸ್ ಫ್ಯಾಕ್ಟರಿ ಮಾಡಬೇಕು ಎಂಬ ಯೋಚನೆ ಇತ್ತು. ಮೋಹನ್ ಲಾಲ್ ಪತ್ನಿ ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್ ಸ್ನೇಹ ಇತ್ತು. ಹೀಗಾಗಿ ಶಂಕರ್ ಅವರು ಪಾರ್ಟ್ನರ್ ಆಗಿದ್ದರು. ಶಂಕರ್ ಹೋದ್ಮೇಲೆ ನಾನು ಅರುಂಧತಿ ಬಳಿ, ಮುಂದೆ ಏನು ಮಾಡೋದು ಎಂದು ಸಲಹೆ ಕೇಳಿದೆ ಎಂದಿದ್ದಾರೆ ರಮೇಶ್ ಭಟ್.
ಆಗ ಅರುಂಧತಿ ಅವರು ಗಾರ್ಮೆಂಟ್ ಇಂಡಸ್ಟ್ರಿ ಶುರು ಮಾಡು, ನಾನೇ ವರ್ಷಕ್ಕೆ 6-7 ಲಕ್ಷ ರೂಪಾಯಿ ಕೊಡ್ತಿದ್ದೇನೆ, ಡಿಮ್ಯಾಂಡ್ ಇದೆ ಎಂದಿದ್ದರು. ಹೀಗಾಗಿ ನಾನು ಮಗನಿಗೋಸ್ಕರ ಎಂಬ್ರಾಯ್ಡರಿ ಫ್ಯಾಕ್ಟರಿ ಆರಂಭಿಸಿದೆ, ಅಂದು 150 ಕೆಲಸಗಾರರಿದ್ದರು. ಕೊರೊನಾ ವೈರಸ್ ವೇಳೆ ತುಂಬ ನಷ್ಟ ಆಯ್ತು, ನಾನು ಕೂಡ ವಯಸ್ಸಾಯ್ತು ಎಂದು ಆಗ ಸಿನಿಮಾ ಕೆಲಸ ಮಾಡಿರಲಿಲ್ಲ ಎಂದಿದ್ದಾರೆ ರಮೇಶ್ ಭಟ್.
ನಮ್ಮ ಫ್ಯಾಕ್ಟರಿ ಮೇಲೆ ಸಾಲ ಇತ್ತು, ಕೊರೊನಾದಲ್ಲಿ ನಷ್ಟ ಆಯ್ತು, ಎಲ್ಲ ಕೆಲಸಗಾರರನ್ನು ಕಳಿಸಿಕೊಟ್ಟೆವು. ಒಟ್ಟೂ ಆರು ಕೋಟಿ ರೂಪಾಯಿ ನಷ್ಟ ಆಯ್ತು. ಜೀವಮಾನದಲ್ಲಿ ನಾನು ಸಂಪಾದನೆ ಮಾಡಿದ ಹಣವೆಲ್ಲ ಅಲ್ಲಲ್ಲಿ ಇತ್ತು, ಅದೆಲ್ಲವೂ ಕರಗಿ ಹೋಯ್ತು. ಈಗ ಮತ್ತೆ ಧಾರಾವಾಹಿ ಮಾಡುತ್ತಿದ್ದೇನೆ. ಈಗ ಮೂರು ಮಶಿನ್ ಇದೆ, ಅದನ್ನೇ ಮಗ ನೋಡಿಕೊಳ್ತಿದ್ದಾನೆ, ಸದ್ಯ ಸಾಲ ಎಲ್ಲ ತೀರಿದೆ ಎಂದು ರಮೇಶ್ ಭಟ್ ಹೇಳಿದ್ದಾರೆ.
https://www.newsics.com/2026/04/04/a-student-wrote-the-entire-syllabus-on-a-pen/