https://youtube.com/shorts/G0oN8U59OVY?si=rbIwZ4fR9fKtFNQ-
newsics.com
ರಾಜಾ ರವಿವರ್ಮರ ಅಮೂಲ್ಯ ಕಲಾಕೃತಿಯೊಂದು ಬರೋಬ್ಬರಿ 167.2 ಕೋಟಿ ರೂಪಾಯಿಗೆ ಹರಾಜಾಗಿದ್ಯಂತೆ. ವಿಶ್ವವಿಖ್ಯಾತ ಕಲಾವಿದ ರಾಜಾ ರವಿವರ್ಮರ ಕಲಾಕೃತಿಯೊಂದು ಬರೋಬ್ಬರಿ 167.2 ಕೋಟಿ ರೂಪಾಯಿಗೆ ಮಾರಾಟವಾಗಿ ವಿಶ್ವದಲ್ಲೇ ದಾಖಲೆ ನಿರ್ಮಿಸಿದೆ. ರವಿವರ್ಮ ಅವರು ಬಿಡಿಸಿದ್ದ ಯಶೋಧೆ ಹಾಗೂ ಬಾಲಕೃಷ್ಣರ ಚಿತ್ರ ಇದಾಗಿದೆ. ಯಶೋಧೆ ಹಸುವೊಂದರ ಹಾಲು ಕರೆಯುತ್ತಿದ್ದು, ಹಿಂದಿನಿಂದ ಬಾಲಕೃಷ್ಣ ಆಕೆಯನ್ನು ತಬ್ಬಿ ಬಿಡಿದಿದ್ದಾನೆ. ಆತನ ಕೈಯಲ್ಲಿ ಚಿನ್ನದ ತಟ್ಟೆಯಿದ್ದು, ಹಾಲಿಗಾಗಿ ತಾಯಿ ಬಳಿ ಮನವಿ ಮಾಡುತ್ತಿರುವಂತೆ ಕಾಣಿಸುತ್ತಿದೆ.
ಶ್ರೀಮದ್ ಭಾಗವತದ ದೃಶ್ಯವೊಂದನ್ನು ಆಧರಿಸಿದ ಈ ಚಿತ್ರದಲ್ಲಿ, ಯಶೋದೆಯು ಹಸುವಿನ ಹಾಲು ಕರೆಯುತ್ತಿದ್ದರೆ, ಬಾಲಕೃಷ್ಣ ಹಾಲಿಗಾಗಿ ಕೈ ಚಾಚುವ ದೃಶ್ಯವನ್ನು ರವಿವರ್ಮ ಅದ್ಭುತವಾಗಿ ಚಿತ್ರಿಸಿದ್ದಾರೆ. ಸಾಂಪ್ರದಾಯಿಕ ಭಾರತೀಯ ಪೌರಾಣಿಕ ವಿಷಯಗಳನ್ನು ಯುರೋಪಿಯನ್ ತಂತ್ರಗಾರಿಕೆಯಾದ ‘ಕಿಯಾರೊಸ್ಕುರೊ’ ಜೊತೆಗೆ ಬೆರೆಸುವಲ್ಲಿ ರವಿವರ್ಮ ಸಿದ್ಧಹಸ್ತರಾಗಿದ್ದರು. ತಜ್ಞರು ಈ ಕಲಾಕೃತಿಯನ್ನು ಭಾರತೀಯ ಕಲೆಯ ‘ಮೋನಾ ಲೀಸಾ’ ಎಂದು ಬಣ್ಣಿಸಿದ್ದಾರೆ. ಇದು ಕೇವಲ ಚಿತ್ರವಲ್ಲ, ಒಂದು ಪವಿತ್ರ ಅನುಭವ ಎಂದು ಪರಿಗಣಿಸಲಾಗಿದೆ.
ರಾಜಾ ರವಿ ವರ್ಮ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ವರ್ಣಚಿತ್ರಕಾರರಲ್ಲಿ ಒಬ್ಬರು. ಅವರನ್ನು “ಆಧುನಿಕ ಭಾರತೀಯ ಕಲೆಯ ತಂದೆ” ಎಂದು ಕರೆಯಲಾಗುತ್ತದೆ. ಯುರೋಪಿಯನ್ ರಿಯಲಿಸ್ಟ್ ಶೈಲಿಯನ್ನು (ವಾಸ್ತವಿಕ ಚಿತ್ರಕಲೆ) ಭಾರತೀಯ ಪುರಾಣ, ಮಹಾಕಾವ್ಯಗಳು ಮತ್ತು ಸಂಸ್ಕೃತಿಯೊಂದಿಗೆ ಸಂಯೋಜಿಸಿ ಅನನ್ಯ ಕಲಾಕೃತಿಗಳನ್ನು ಸೃಷ್ಟಿಸಿದರು.1848 ರಲ್ಲಿ ತಿರುವಾಂಕೂರು ರಾಜಪ್ರಭುತ್ವದ ರಾಜ್ಯದಲ್ಲಿ ಒಂದು ಶ್ರೀಮಂತ ಕುಟುಂಬದಲ್ಲಿ ಜನಿಸಿದ ರಾಜಾ ರವಿವರ್ಮಾ, ಯುರೋಪಿಯನ್ ತಂತ್ರವನ್ನು ಭಾರತೀಯ ಕಲೆಯೊಂದಿಗೆ ಸಮ್ಮಿಶ್ರ ಮಾಡಿ, ಕಲಾಕೃತಿ ರಚಿಸಿದ್ದಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ.
ಪೂನಾವಾಲ ಈ ಸ್ವಾಧೀನವನ್ನು ಒಂದು ಸವಲತ್ತು ಮತ್ತು ಜವಾಬ್ದಾರಿ ಅಂತ ಕರೆದಿದ್ದಾರೆ. ಈ ರಾಷ್ಟ್ರೀಯ ಸಂಪತ್ತು ನಿಯತಕಾಲಿಕವಾಗಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಲು ಅರ್ಹವಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನು ಸುಗಮಗೊಳಿಸಲು ನಾನು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
https://www.newsics.com/2026/04/03/young-woman-goes-missing-after-going-on-a-trek/