newsics.com
ರಶ್ಮಿಕಾ ಮಂದಣ್ಣ ಪಾತ್ರಗಳ ವಿಚಾರದಲ್ಲಿ ಯಾವುದೇ ಇರಲಿ ಎಲ್ಲದಕ್ಕು ಸೈ ಅನ್ನೊ ನಟಿ. ಪ್ರತಿ ಸಿನಿಮಾದಲ್ಲಿ ಹೊಸ ಹೊಸ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರುವ ರಶ್ಮಿಕಾ ಮದುವೆಯ ನಂತರ ಯಾಕೊ ಬದಲಾದಂತಾಗಿದ್ದಾರೆ..
ಮದುವೆ ನಂತರ ರಶ್ಮಿಕಾ ಯಾವುದೇ ಸಿನಿಮಾಗಳನ್ನ ಒಪ್ಪಿಕೊಂಡಿಲ್ಲ. ಒಪ್ಪಿಕೊಂಡಿರೋ ಪಾತ್ರಗಳ ವಿಚಾರದಲ್ಲಿ ಬುದ್ದಿವಂತಿಕೆ ತೋರಿಸಿದ್ದಾರೆ, ಮೆಚ್ಯೂರಿಟಿಯಿಂದ ಆಯ್ಕೆ ಮಾಡಿಕೊಂಡಿದ್ದಾರೆ.
ಇದೇ ಕಾರಣಕ್ಕೆ ರಾಮ್ ಚರಣ್ ಸಿನಿಮಾದಿಂದ ರಶ್ಮಿಕಾ ಹೊರ ಬಂದಿದ್ದಾರೆ. ಪೆದ್ದಿ ಸಿನಿಮಾದ ಐಟಂ ಸಾಂಗ್ ನಲ್ಲಿಮೊದಲು ಶ್ರಿಲೀಲಾ ನಟಿಸ್ತಾರೆ ಅಂತ ಹೇಳಲಾಗಿತತು, ಕಿಸಕ್ ಅಂತ ಪುಷ್ಪನ ಜೊತೆಗೆ ಕುಣಿದ ಲೀಲಾ ಇಲ್ಯಾಕೋ ರಾಮ್ ಚರಣ್ ಜೊತೆಗೆಸ್ಟೆಪ್ ಹಾಕೋ ಮನಸ್ಸು ಮಾಡಲಿಲ್ಲ. ಆನಂತರ ಆ ಜಾಗಕ್ಕೆ ಶ್ರೀವಲ್ಲಿ ಬರ್ತಾರೆ ಅಂತಿದ್ದರು, ಆದ್ರೀಗ ರಶ್ಮಿಕಾ ಕೂಡ ಈ ಸಾಂಗ್ ಗೆ ಹೆಜ್ಜೆ ಹಾಕಲ್ಲಅಂತ ಹೇಳಿದ್ದು ಇವರಿಬ್ಬರ ಜಾಗಕ್ಕೆ ಸೀತಾ ರಾಮನ ಬೆಡಗಿ ಮೃಣಾಲ್ ಬರ್ತಿದ್ದಾರೆ. ಈ ಮೂಲಕ ರಶ್ಮಿಕಾ ಕೂಡ ಐಟಂ ಸಾಂಗ್ ಲ್ಲಿ ನಟಿಸೋಲ್ಲ ಅಂತ ಹೊರಬಂದಿದ್ದಾರೆ.
ತೆಲುಗುನಾಡಿನ ಸೊಸೆಯಾದ ನಂತರ ಪಾತ್ರಗಳ ವಿಚಾರದಲ್ಲಿ ಪ್ರಬುದ್ದತೆಯಿಂದ ರಶ್ಮಿಕಾ ನಿರ್ಧಾರ ತೆಗೆದುಕೊಳ್ತಿದ್ದಾರೆ.. ಸದ್ಯಕ್ಕೆ ಅವರ ನಟನೆಯ ಮೈಸಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಅದರಲ್ಲಿ ರಕ್ತ ಸಿಕ್ತಅವತಾರದಲ್ಲಿ ವಿಭಿನ್ನವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ರಾಮ್ ಚರಣ್ ಜೊತೆಗಿನ ಪೆದ್ದಿಯಿಂದ ರಶ್ಮಿಕಾ ಹೊರ ಬಂದಿದ್ದಾರೆ. ಈಗಾಗಲೇ ಪೆದ್ದಿ ಸಿನಿಮಾದ ಚಿಕರಿ ಹಾಡು ಸೂಪರ್ ಡೂಪರ್ ಹಿಟ್ ಆಗಿದ್ದು ,ಆರ್ ಆರ್ ಆರ್ ನಂತರ ಗೇಮ್ ಚೇಂಜರ್ ಸೋಲಿನಬಳಿಕ ರಾಮ್ ಚರಣ್ ಪಾಲಿನ ಅದೃಷ್ಟ ಪರೀಕ್ಷೆಯ ಸಿನಿಮಾ ಇದಾಗಿದೆ.