https://youtube.com/shorts/yMSO-E277Og?si=gFSvtQQHQjZ3lXBt
newsics.com
ಬೈಲಹೊಂಗಲ : ರಾಮಣ್ಣವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ, ಆಯುರ್ವೇದ ವೈದ್ಯೆ ಸುಶೀಲಾದೇವಿ ಬಸವಣ್ಣಪ್ಪ ರಾಮಣ್ಣವರ (101) ಅವರು ಸೋಮವಾರ ನಿಧನರಾದರು.
ಅವರ ಅಂತಿಮ ಇಚ್ಛೆಯಂತೆ ತಮ್ಮದೇ ಟ್ರಸ್ಟ್ ಮುಖಾಂತರ ಕೆಎಲ್ಇ ಸಂಸ್ಥೆಯ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯಕ್ಕೆ ಮಂಗಳವಾರ (ಮಾರ್ಚ್ 10) ದೇಹದಾನ ಮಾಡಲಾಗುವುದು.ತಂದೆಯಂತೆ ತಾಯಿ ಕೂಡ ತನ್ನ ಮಗನೇ ದೇಹವನ್ನ ಛೇದಿಸಬೇಕೆಂದು ವಿಲ್ ಬರೆದು ಸಾವನ್ನಪ್ಪಿದ್ದರೆ, ತಾಯಿ ಕೊನೆ ಆಸೆಯಂತೆ ವೈದ್ಯ ಪುತ್ರ ದೇಹ ಛೇದಿಸಲು ಸಿದ್ಧರಾಗಿದ್ದಾರೆ. ಅಜ್ಜಿಯ ಮಾದರಿಯ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ, ವೈದ್ಯರಾಗಿದ್ದ ಪತಿ ಬಿ.ಎಸ್.ರಾಮಣ್ಣವರ ಅವರು 18 ವರ್ಷಗಳ ಹಿಂದೆ ನಿಧನರಾಗಿದ್ದಾರೆ. ತಮ್ಮ ದೇಹವನ್ನು ತಮ್ಮ ಪುತ್ರನೇ ಛೇದನ ಮಾಡಿ ವೈದ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎಂದು ಅವರು ಉಯಿಲು ಬರೆದಿದ್ದರು. ಅದರ ಪ್ರಕಾರ, ಪುತ್ರ ಡಾ.ಮಹಾಂತೇಶ ರಾಮಣ್ಣವರ ಅವರು ತಂದೆಯ ದೇಹ ಛೇದಿಸಿ ಪಾಠ ಮಾಡಿದ್ದರು. ಇದು ರಾಷ್ಟ್ರದಾದ್ಯಂತ ಗಮನ ಸೆಳೆದಿತ್ತು. ತಾಯಿ ಸುಶೀಲಾದೇವಿ ಕೂಡ ಅದೇ ರೀತಿಯ ಉಯಿಲು ಬರೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ಶತಾಯಿಷಿ ಸುಶೀಲಾದೇವಿ ರಾಮಣ್ಣವರ್. ಈ ಮಹಾ ತಾಯಿಯ ವಯಸ್ಸು 101 ವರ್ಷ. ತಮ್ಮ ನಿಧನದ ಬಳಿಕ ದೇಹವನ್ನ ದಾನ ಮಾಡಿದ್ದರು. ಅದು ಬೆಳಗಾವಿ ನಗರದಲ್ಲಿರುವ ಕೆಎಲ್ಇ ಕಂಕಣವಾಡಿ ಆಯುರ್ವೇದ ಕಾಲೇಜಿಗೆ ದೇಹದಾನವನ್ನ ಮಾಡಿದ್ದಾರೆ. ಅದರಂತೆ ಅವರ ನಿಧನದ ಬಳಿಕ ಶತಾಯುಷಿ ಸುಶೀಲಾದೇವಿ ದೇಹವನ್ನ ಆಸ್ಪತ್ರೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾನ ನೀಡಿದ್ದಾರೆ. ಆಸ್ಪತ್ರೆಗೆ ದೇಹದಾನ ಮಾಡುವುದಕ್ಕೂ ಮುನ್ನ ಕೆಲ ಧಾರ್ಮಿಕ ವಿಧಿಗಳ ಪ್ರಕಾರ ಪೂಜೆ ಸಲ್ಲಿಸಿ, ಗೌರವವನ್ನ ಅರ್ಪಿಸಲಾಗಿದೆ.
https://www.newsics.com/2026/03/12/actress-hansika-ends-marriage-after-4-years/